Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟ್ವಿಟ್ಟರ್ ವಿಮರ್ಶೆ: 'ಮುಕುಂದ ಮುರಾರಿ'ಯ ಜುಗಲ್ ಬಂದಿಗೆ ಭಕ್ತರು ಏನಂದ್ರು ಗೊತ್ತಾ?
ಬಹುನಿರೀಕ್ಷೀತ ಚಿತ್ರ 'ಮುಕುಂದ ಮುರಾರಿ' ಇಂದು ಬಿಡುಗಡೆಯಾಗಿದೆ. ಚಿತ್ರಕ್ಕೆ ಅದ್ದೂರಿ ಒಪನಿಂಗ್ ಸಿಕ್ಕಿದ್ದು, ಮೊದಲ ಶೋ ನೋಡಿದ ಪ್ರೇಕ್ಷಕರು ಏನಂದ್ರು ಅಂತ ಇಲ್ಲಿದೆ ನೋಡಿ....
ಅಂತೂ ಇಂತೂ ಸ್ಯಾಂಡಲ್ ವುಡ್ ಪರೆದೆ ಮೇಲೆ 'ಮುಕುಂದ ಮುರಾರಿ' ಬಂದೇ ಬಿಡ್ತು. ಹಲವು ದಿನಗಳಿಂದ ಅಭಿಮಾನಿಗಳನ್ನ ಕಾಡುತ್ತಿದ್ದ ಕುತೂಹಲಕ್ಕೆ ತೆರೆಬಿತ್ತು. ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಅವರನ್ನ ಒಂದೇ ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಬೇಕು ಅಂತ ಕಾಯುತ್ತಿದ್ದ ಅವರ ಫ್ಯಾನ್ಸ್ ಬೆಳಿಗ್ಗೆನೆ ಸಿನಿಮಾ ನೋಡಿ ಫುಲ್ ಖುಷಿಯಾಗಿದ್ದಾರೆ.
ಹೌದು, 'ಮುಕುಂದ ಮುರಾರಿ' ಚಿತ್ರಕ್ಕಾಗಿ ಬಕ ಪಕ್ಷಿಗಳಂತೆ ಕಾದು ಕುಂತಿದ್ದ ಚಿತ್ರಪ್ರೇಮಿಗಳು ಫಸ್ಟ್ ಡೇ, ಫಸ್ಟ್ ಶೋನೇ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.
'ಮುಕುಂದ ಮುರಾರಿ' ಇಂದು ರಾಜ್ಯಾದ್ಯಂತ ಸುಮಾರು 290ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದ್ದು, ಹಲವು ಕಡೆ ಬೆಳಿಗ್ಗೆ 6 ಗಂಟೆಯಿಂದನೇ 'ಮುಕುಂದ ಮುರಾರಿ'ಯ ದರ್ಶನವಾಗಿದೆ. ಪೋಸ್ಟರ್, ಟೀಸರ್ ಹೀಗೆ ಹಲವು ವಿಷಯಗಳಿಗೆ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರಕ್ಕೆ ಮೊದಲ ದಿನ ಭರ್ಜರಿ ಒಪನಿಂಗ್ ಸಿಕ್ಕಿದೆ.[ಸುದೀಪ್-ಉಪೇಂದ್ರ ಜೋಡಿಯ 'ಮುಕುಂದ ಮುರಾರಿ' ನೋಡಲು 6 ಕಾರಣಗಳು..]
ನಂದಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸುದೀಪ್-ಉಪೇಂದ್ರ ಜೊತೆಯಲ್ಲಿ ರವಿಶಂಕರ್, ಅವಿನಾಶ್, ನಿಖಿತಾ ತುಕ್ರಾಲ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.ಈಗಾಗಲೇ ಸಿನಿಮಾ ನೋಡಿ ಖುಷಿಯಲ್ಲಿರುವ ಸುದೀಪ್ ಹಾಗೂ ಉಪ್ಪಿಯ ಅಭಿಮಾನಿಗಳು ಹಾಗೂ ಇನ್ನೂ ಚಿತ್ರಮಂದಿರದಲ್ಲಿ ಕೂತು ಸಿನಿಮಾ ನೋಡುತ್ತಿರುವ ಅಭಿಮಾನಿಗಳು, 'ಮುಕುಂದ ಮುರಾರಿ' ಹೇಗಿದೆ ಅಂತ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗಾದ್ರೆ, 'ಮುಕುಂದ ಮುರಾರಿ' ಚಿತ್ರವನ್ನ ನೋಡಿದ ಪ್ರೇಕ್ಷಕರು, ಮೊದಲ ಪ್ರತಿಕ್ರಿಯೆ ಏನು ಅಂತ ಇಲ್ಲಿದೆ ನೋಡಿ.
ಉಪ್ಪಿ ಟಚ್
''ಮುಕುಂದ ಮುರಾರಿ'ಯ ಮೊದಲಾರ್ಧ, ಮೂಲ ಚಿತ್ರಕ್ಕೆ ನ್ಯಾಯ ಒದಗಿಸಿದೆ. ಅದಕ್ಕೆ ಉಪ್ಪಿಯ ಟಚ್ ಸೇರಿದೆ''.-ನಮ್ ಸಿನಿಮಾ
ಅಭಿನಯ ಹೇಗಿದೆ
''ಮುಕುಂದ ಮುರಾರಿ' ಸಿನಿಮಾ ಒಂದು ಘನ ಸಂದೇಶ ನೀಡುವ ಉತ್ತಮ ಮನರಂಜನೆ ಚಿತ್ರ. ಉಪೇಂದ್ರ ಅಭಿನಯ ಅದ್ಬುತ. ಸುದೀಪ್ ಅಭಿನಯದಲ್ಲಿ ಭವ್ಯತೆಯಿದೆ''
ದೈವಿಕ ಅನುಭವ
''ಬೆಳಿಗ್ಗೆ ಶೋ 'ಮುಕುಂದ ಮುರಾರಿ' ಸಿನಿಮಾ ನೋಡಿ ಹೊರ ಬಂದಾಗ, ದೈವಿಕ ಅನುಭವ ಆಗುತ್ತೆ.'' ಥ್ಯಾಂಕ್ಸ್ ಉಪ್ಪಿ ಸರ್, ಸುದೀಪ್ ಸರ್ ಹಾಗೂ ನಂದ ಸರ್''- ಕುಮಾರ್ ಎಂ ರಾವ್
'ಮುಕುಂದ ಮುರಾರಿ'ಯ ಟೈಮ್
''136 ನಿಮಿಷ, 45 ಸೆಕೆಂಡ್, 1 ಮ್ಯೂಟ್''-ಸಿನಿಲೋಕ
ಉಪೇಂದ್ರ ಸೂಪರ್
''ಮೊದಲಾರ್ಧ ಉತ್ತಮವಾಗಿದೆ. ಕೋರ್ಟ್ ಸನ್ನಿವೇಶಗಳಲ್ಲಿ ಉಪೇಂದ್ರ ಅಭಿನಯ ಹಾಗೂ ಡೈಲಾಗ್ ಸೂಪರ್ ಆಗಿದೆ. ಫಸ್ಟ್ ಹಾಫ್ ಗೆ ಮೊದಲು ಸುದೀಪ್ ಪ್ರವೇಶ ಆಗುತ್ತೆ''-ಸಿನಿಲೋಕ
ದೀಪಾವಳಿ ಧಮಾಕ
''ಅದ್ಬುತ ಚಿತ್ರ, ಮನರಂಜನೆಯ ಜೊತೆ, ಉತ್ತಮವಾದ ಸಂದೇಶವಿದೆ. ದೀಪಾವಳಿ ಧಮಾಕ''