Don't Miss!
- News Neha Hiremath: ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಮನಿಗೆ ಕಠಾರಿವೀರನ ಕಥೆ ಹೇಳಿದ ಚಿತ್ರಗುಪ್ತ
ಯಮಧರ್ಮ: ಏನು ಚಿತ್ರಗುಪ್ತರೇ? ಮಟ ಮಟ ಮಧ್ಯಾಹ್ನವೇ ಸುಸ್ತಾಗಿ ಸೊರಗಿ ಹೋದಂತಿದೆ? ಏನು ಸಮಾಚಾರಾ?
ಚಿತ್ರಗುಪ್ತ: ಅದೇನು ಅಂತ ಕೇಳುತ್ತೀರಿ ಯಮಧರ್ಮ. ಭೂಲೋಕದ ಬೆಂಗಳೂರಿನ ನರ್ತಕಿ ಚಿತ್ರಮಂದಿರಕ್ಕೆ ಹೊಗಿದ್ದೆ. ನಿಮ್ಮ ಮತ್ತು ನಮ್ಮ ಕುರಿತಾದ ಚಲನಚಿತ್ರವೊಂದು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಭೋರ್ಗರೆಯುತ್ತಿದೆ!
ಯಮಧರ್ಮ: ಅಹುದೇ? (ಹೌದೇ) ಹೇಗಿದೆ ಆ ಕಠಾರಿವೀರ ಸುರಸುಂದರಾಂಗಿ ಎಂಬ ಸಿನಿಮಾ?
ಚಿತ್ರಗುಪ್ತ: ಅಬ್ಬಬ್ಬಾ.. ಎರಡೂಕಾಲು ತಾಸು ಆ ಮಾತಿನ ಮಾನವ ಉಪೇಂದ್ರ ನನ್ನ ಕಿವಿಗೆ ತುಪ್ಪ ಸುರಿದುಬಿಟ್ಟ. ಸಂಭಾಷಣೆಯದ್ದೇ ಮಳೆಗರೆದುಬಿಟ್ಟ. ಅದು ಬೇರೆ ಮೂರನೇ ಆಯಾಮದ(ತ್ರೀಡಿ) ಚಿತ್ರವಲ್ಲವೇ? ಸಾಕಪ್ಪಾ ಸಾಕು... ನನ್ನ ನಯನಗಳಿಗೆ ಹಬ್ಬವೋ ಹಬ್ಬ!
ಯಮಧರ್ಮ: ಅದೇನೆಂದು ಕೊಂಚ ಬಿಡಿಸಿಹೇಳಬಾರದೇ ಚಿತ್ರಗುಪ್ತರೇ?
ಚಿತ್ರಗುಪ್ತ: ಯಮಹಾ ಸ್ವಾಮಿ... ಹೇಳುತ್ತೇನೆ ಕೇಳಿ... ಅದೊಂದು ಅದ್ಭುತ. ಕಣ್ಣುಗಳಿಗೆ ಬಣ್ಣಬಣ್ಣದ ಓಕುಳಿ. ಯಾರೋ ಬಂದು ಗುದ್ದಿದಂತಾಗುತ್ತದೆ. ಹಾವು ಬಂದು ಕೆನ್ನೆ ಕಚ್ಚಿದಂತಾಗುತ್ತದೆ. ಮೈಮೇಲೆ ಹೂಗಳ ಮಳೆಯಾಗುತ್ತದೆ. ತಮ್ಮ ಪ್ರತಿರೂಪಿಯಂತಿರುವ ಯಮಧರ್ಮ ಹಾಗೆಯೇ ನಡೆದುಕೊಂಡು ಗಧೆ ಅಲ್ಲಾಡಿಸುತ್ತಾ ಬರುತ್ತಿದ್ದರೆ ಇಡೀ ಚಿತ್ರಮಂದಿರವೇ ಅಲ್ಲಾಡಿದಷ್ಟು ಅಲ್ಲೋಲ ಕಲ್ಲೋಲ.. ಅಲಾಲಾಲಾಲಾ!
ಯಮಧರ್ಮ: ಅಹುದೇ? ನನ್ನ ಪಾತ್ರ ಮಾಡಿರುವ ನನ್ನ ಭಕ್ತ ಅಂಬರೀಷ ಹೇಗೆ ನಟಿಸಿದ್ದಾರೆ?