Don't Miss!
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Finance ಲಕ್ಷ ಲಕ್ಷ ಕೋಟಿ ಇದ್ದರೂ ಇದೊಂದು ಕೊರತೆ ಈ ಶ್ರೀಮಂತನಿಗೆ ಕಾಡಿತ್ತು!
- Automobiles 28 ಲಕ್ಷದ ಬೈಕನ್ನು ಲೀಲಾಜಾಲವಾಗಿ ಓಡಿಸಿದ ಲೇಡಿ ಸೂಪರ್ಸ್ಟಾರ್: ಇಂತಹ ಗರ್ಲ್ಫ್ರೆಂಡ್ ಬೇಕೆಂದ ನೆಟ್ಟಿಗರು!
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- News ಹನುಮಾನ್ ಚಾಲೀಸಾ ಗಲಾಟೆ: ತೇಜಸ್ವಿ ಸೂರ್ಯನಿಂದ ದ್ವೇಷ ಹರಡುವ ಯತ್ನ- ದಿನೇಶ್ ಗುಂಡೂರಾವ್
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ: ಪ್ರೀತಿ, ದ್ವೇಷ, ಕೌತುಕ ತುಂಬಿದ 'ಮಾಯಾ ಕನ್ನಡಿ'
'ಬ್ಲೂ ವೇಲ್' ಗೇಮ್ ಅತ್ಯಂತ ಅಪಾಯಕಾರಿ ಆಟ. ಈ ಆಟದ ಚಟಕ್ಕೆ ಬಿದ್ದು ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಕೇಳಿದ್ವಿ. ಅದೇ ಕಾನ್ಸೆಪ್ಟ್ ಮೂಲಕ ಮೂಡಿ ಬಂದಿರುವ ಚಿತ್ರವೇ ಮಾಯಾಕನ್ನಡಿ. ಬ್ಲೂ ವೇಲ್ ಆಟದಷ್ಟೇ ರೋಚಕ, ಕೌತುಕವಾಗಿ ಈ ಸಿನಿಮಾ ಮೂಡಿ ಬಂದಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ...
Recommended Video
ಚಿತ್ರ: ಮಾಯಾ ಕನ್ನಡಿ
ನಿರ್ದೇಶಕ: ವಿನೋದ್ ಪೂಜಾರಿ
ನಿರ್ಮಾಣ: ಸಪ್ನ ಪಾಟೀಲ್
ಕಲಾವಿದರು: ಪ್ರಭು ಮುಂಡ್ಕೂರ್, ಕಾಜಲ್ ಕುಂದರ್, ಅನ್ವಿತಾ ಸಾಗರ್, ಶ್ರೀಧರ್ ಮತ್ತು ಇತರರು
ಬಿಡುಗಡೆ: ಫೆಬ್ರವರಿ 28, 2020
ಭರತ್, ವಿನಯ್, ಗುರು, ಮಧು, ಆರಾಧ್ಯ ಎಂಬ ವಿದ್ಯಾರ್ಥಿಗಳು ಬ್ಲೂವೇಲ್ ಆಟದಿಂದ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಅದೇ ಕಾಲೇಜಿಗೆ ವಿದ್ಯಾರ್ಥಿಯಾಗಿ ನಾಯಕ ಸ್ಯಾಂಡಿ (ಪ್ರಭು) ಸೇರುತ್ತಾನೆ. ಬ್ಲೂವೇಲ್ ಆಟದಿಂದ ಸತ್ತವರ ಕುರಿತು ಗೌಪ್ಯವಾಗಿ ತನಿಖೆಗೆ ಮುಂದಾಗ್ತಾನೆ. ಈ ಥ್ರಿಲ್ಲಿಂಗ್ ಹುಡುಕಾಟದಲ್ಲಿ ಕೆಲವು ಸಸ್ಪೆನ್ಸ್ ಅಂಶಗಳು ಹೊರಬೀಳುತ್ತೆ.
ಬ್ಲೂವೇಲ್ ಆಟ, ನಿಗೂಢ ಸಾವಿನ ಹಿಂದೆ ಏನಾದರೂ ಇದ್ಯಾ? ಇದು ನಿಜಕ್ಕೂ ಆತ್ಮಹತ್ಯೆನಾ ಅಥವಾ ಬೇರೆ ಏನಾದರೂ ನಡೆಯುತ್ತಿದ್ಯಾ ಎನ್ನುವುದನ್ನು ಭೇದಿಸುವುದೇ ಮಾಯಾ ಕನ್ನಡಿಯ ಕಥೆ. ಈ ಕಥೆಯಲ್ಲಿ ಎರಡು ಮುಗ್ದ ಮನಸ್ಸುಗಳ ಪ್ರೀತಿ ಇದೆ, ತಂದೆ-ಮಗಳ ಬಾಂಧವ್ಯದ ಕಥೆ ಇದೆ, ಪ್ರೀತಿಸಿದವರನ್ನು ಕಳೆದುಕೊಂಡ ದ್ವೇಷವಿದೆ, ತಂತ್ರಜ್ಞಾನ ದುರ್ಬಳಕೆಯ ಕಥೆ ಇದೆ, ಈ ಎಲ್ಲ ಕಥೆಗಳ ಮಿಶ್ರಣವೇ ಮಾಯಾಕನ್ನಡಿ.
ಡೆಡ್ಲಿ ಆಟದ ಜೊತೆ ಥ್ರಿಲ್ಲಿಂಗ್ ಕಥೆ ಹೊಂದಿರುವ 'ಮಾಯಾ ಕನ್ನಡಿ'
ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಆಡಿಯೆನ್ಸ್ ಗೆ ಸಿನಿಮಾ ವಿಶೇಷವಾಗಿ ಇಷ್ಟವಾಗುತ್ತೆ. ತಂತ್ರಜ್ಞಾನವನ್ನು ಒಳ್ಳೆಯದಕ್ಕೂ ಬಳಸಬಹುದು ಕೆಟ್ಟದಕ್ಕೂ ಬಳಸಬಹುದು. ಆದ್ದರಿಂದ ಎಚ್ಚರಿದಿಂದಿರಬೇಕು ಮತ್ತು ಮಾನಸಿಕವಾಗಿ ಹತೋಟಿಯಲ್ಲಿರಬೇಕು ಎನ್ನುವ ಸಂದೇಶವೂ ಚಿತ್ರದಲ್ಲಿದೆ.
ಪ್ರಭು ಮುಂಡ್ಕೂರ್ ಎರಡು ವಿಭಿನ್ನ ಪಾತ್ರಗಳನ್ನು ನಿಭಾಯಿಸಿದ್ದಾರೆ. ಎರಡರಲ್ಲೂ ಉತ್ತಮ ನಟನೆ. ಪ್ರಮುಖ ಪಾತ್ರದಲ್ಲಿ ಕೆಎಸ್ ಶ್ರೀಧರ್ ಅಭಿನಯಿಸಿದ್ದು, ಕಥೆಗೆ ಉತ್ತಮ ಸಾಥ್ ನೀಡಿದ್ದಾರೆ. ಇನ್ನು ಕಾಜಲ್ ಕುಂದರ್ ಮತ್ತು ಅನ್ವಿತಾ ಸಾಗರ್ ಇಬ್ಬರು ಪ್ರಮುಖ ನಟಿಯರಿದ್ದು, ಇಬ್ಬರೂ ಕೂಡ ಬಹಳ ಮುದ್ದಾಗಿ ನಟಿಸಿದ್ದಾರೆ.
'ಮಾಯಾ ಕನ್ನಡಿ'ಯಲ್ಲಿ ಕಂಡಿದೆ ಚೆಂದದ ಅನ್ವಿತಾ ಬಿಂಬ
ವಿನೋದ್ ಪೂಜಾರಿ ನಿರ್ದೇಶನವೂ ಅಚ್ಚುಕಟ್ಟಾಗಿದೆ. ಅಭಿಷೇಕ್ ಎನ್ ಸಂಗೀತ ಹಾಗೂ ಮಣಿ ಕೋಕಲ್ ನಾಯರ್ ಛಾಯಾಗ್ರಹಣ, ಸುಜಿತ್ ನಾಯಕ್ ಸಂಕಲನ ತಾಂತ್ರಿಕವಾಗಿ ಸಿನಿಮಾ ಗುಣಮಟ್ಟ ಉತ್ತಮಗೊಳಿಸಿದೆ.
ಮಾಯಾ ಕನ್ನಡಿ ಸಿನಿಮಾ ಅಚ್ಚುಕಟ್ಟಾದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಎರಡು ಗಂಟೆ ಆರಾಮಾಗಿ ಕೂತು ನೋಡಬಹುದಾದ ಚಿತ್ರ.