Don't Miss!
- News Bengaluru Peripheral Ring Road: 73 ಕಿಲೋ ಮೀಟರ್ ಯೋಜನೆಗೆ ಬಿಡ್ ಮಾಡಿದ್ದು ಕೇವಲ ಒಂದೇ ಕಂಪನಿ .!-ವೆಚ್ಚ ಎಷ್ಟು?
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Finance ಬ್ಯಾಂಕುಗಳ ಮೇಲೆ ನಡೆಯಲಿದ್ಯಾ ಸೈಬರ್ ಅಟ್ಯಾಕ್! ಎಚ್ಚರ ಎಚ್ಚರ ಎಂದ ಆರ್ಬಿಐ
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Technology Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್ಟಾಪ್ಗಳು ಲಾಂಚ್; ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Odeya Review: ಅಣ್ಣತಮ್ಮಂದಿರ ಮಾಸ್, ಕ್ಲಾಸ್ ಮಸಾಲ
Recommended Video
'ಒಡೆಯ' ಮಾಸ್ ಹಾಗೂ ಕ್ಲಾಸ್ ಸಿನಿಮಾ. ಇಲ್ಲಿ ಖಾರದ ಫೈಟ್ ಗಳು ಇವೆ, ಜೊತೆಗೆ ಕುಟುಂಬದ ಸಿಹಿಯೂ ಇಲ್ಲಿದೆ. ಇದು 'ವೀರಂ' ಸಿನಿಮಾ ರಿಮೇಕ್ ಆಗಿದ್ದು, ಬೇರೆ ಅಂಶಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್ 'ಒಡೆಯ'.
ಗಜೇಂದ್ರ ಮದುವೆಯಿಂದ ದೂರ
ಅಣ್ಣ ಗಜೇಂದ್ರ (ದರ್ಶನ್). ಆತನಿಗೆ ನಾಲ್ಕು ತಮ್ಮಂದಿರು. ಪ್ರೀತಿ, ಪ್ರೇಮ, ಮದುವೆಯಿಂದ ದೂರ ಇರುವ ಅಣ್ಣನಿಗೆ ತಮ್ಮಂದಿರೇ ಅತ್ತಿಗೆಯನ್ನು ಹುಡುಕಿ ಕೊಡುತ್ತಾರೆ. ಹೊಡೆದಾಟದಲ್ಲೇ ಬದುಕಿರೋ ಗಜೇಂದ್ರ ಹಾಗೂ ಶಾಂತಿಪ್ರಿಯೆ ಶಾಕಾಂಬರ ದೇವಿ (ಸನಾ ತಿಮಯ್ಯ) ನಡುವೆ ಪ್ರೀತಿ ಮೂಡುತ್ತದೆ. ಆದರೆ, ಗಜೇಂದ್ರನ ಸತ್ಯಾಂಶ ತಿಳಿದು ಆಕೆ ದೂರವಾಗುತ್ತಾಳೆ.
ಮತ್ತೆ ಹೊಡೆದಾಟಕ್ಕೆ ಇಳಿಯುವ ಗಜೇಂದ್ರ
ಪ್ರೀತಿಸಿದ ಹುಡುಗಿಗಾಗಿ ಹೊಡೆದಾಟ ಬಿಡುವ ಗಜೇಂದ್ರ ಮತ್ತೆ ಆಕೆಯ ಕುಟುಂಬಕ್ಕಾಗಿಯೇ ರಕ್ತ ಸುರಿಸುತ್ತಾನೆ. ಇದು ಸಿನಿಮಾದ ಕಥೆಯಾಗಿದೆ. ಇದರ ನಡುವೆ ಅಣ್ಣ ತಮ್ಮಂದಿರ ಬಾಂದವ್ಯ, ಜಾತಿ ಜಗಳ, ಅಪ್ಪ ಮಗಳ ಅನುಬಂಧ ಕಥೆಯ ಭಾಗವಾಗಿದೆ. 'ವೀರಂ' ಸಿನಿಮಾದ ರಿಮೇಕ್ ಆಗಿದ್ದು, ಕಥೆಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡಿಲ್ಲ.
ಮಾಸ್ ಲೀಡರ್ ದರ್ಶನ್
ಗಜೇಂದ್ರನಾಗಿ ದರ್ಶನ್ ಮಿಂಚಿದ್ದಾರೆ. ಎಂದಿನಂತೆ ತಮ್ಮ ಮಾಸ್ ಡೈಲಾಗ್ ಹಾಗೂ ಫೈಟ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ತಮ್ಮ ಹಳೆ ಸ್ಟೈಲ್ ಗೆ ಡಿ ಬಾಸ್ ಮರಳಿದ್ದಾರೆ. ಅವರ ಪಾತ್ರಕ್ಕೆ ಎರಡು ಶೇಡ್ ಇದೆ. ತಮ್ಮಂದಿರಿಗೆ ಪ್ರೀತಿಯ ಅಣ್ಣನಾಗಿ, ರೌಡಿಗಳಿಗೆ ಎದುರಾಳಿಯಾಗಿ ಅವರು ಕಾಣಿಸಿಕೊಂಡಿದ್ದಾರೆ.
ತಮ್ಮಂದಿರು, ಉಳಿದವರು
ದರ್ಶನ್ ತಮ್ಮಂದಿರಿಗೆ ಸಿನಿಮಾದಲ್ಲಿ ನಟನೆಗೆ ಅವಕಾಶ ಇದೆ. ಆ ಕಲಾವಿದರು ಇನ್ನಷ್ಟು ಚೆನ್ನಾಗಿ ನಟನೆ ಮಾಡಬಹುದಿತ್ತು. ನಾಯಕಿ ಸನಾ ಆಕ್ಟಿಂಗ್ ಸಾಧಾರಣ. ದೇವರಾಜ್ ಗಂಭೀರ ನಟನೆ ಚೆನ್ನಾಗಿದೆ. ಚಿಕ್ಕಣ್ಣ ನಗಿಸುತ್ತಾರೆ. ಸಾಧು ಕಾಮಿಡಿ ಅದೇ ಶೈಲಿಯಲ್ಲಿ ಇದೆ. ರವಿಶಂಕರ್, ಶರತ್ ಲೋಹಿತಾಶ್ವ ಖಳನಾಯಕರಾಗಿ ಖದರ್ ತೋರಿಸಿದ್ದಾರೆ.
ಸಂಗೀತ
'ಒಡೆಯ' ಸಿನಿಮಾದ ಹಾಡುಗಳು ಚೆನ್ನಾಗಿಲ್ಲ ಎನ್ನುವ ಆರೋಪ ಅನೇಕ ದಿನಗಳಿಂದ ಇತ್ತು. ಚಿತ್ರಮಂದಿರದಲ್ಲಿ ಕೂಡ ಹಾಡುಗಳು ಅಷ್ಟೊಂದು ಮಜಾ ನೀಡುವುದಿಲ್ಲ. ಹಾಡುಗಳಿಗೆ ಹೋಲಿಕೆ ಮಾಡಿದರೆ, ಹಿನ್ನೆಲೆ ಸಂಗೀತ ಚೆನ್ನಾಗಿದೆ. ಹಾಡುಗಳ ಚಿತ್ರೀಕರಣ ಚೆನ್ನಾಗಿ ಆಗಿದೆ. ಕ್ಯಾಮರಾ ಮ್ಯಾನ್ ಕೆಲಸಕ್ಕೆ ಮೆಚ್ಚುಗೆ ನೀಡಬೇಕು.
ಸಾಹಸಮಯ ಸಿನಿಮಾ
'ಒಡೆಯ' ಒಂದು ಸಾಹಸಮಯ ಸಿನಿಮಾ. ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ಎರಡರಲ್ಲಿಯೂ ಹೊಡೆದಾಟ ತುಂಬಿಕೊಂಡಿದೆ. ಕೆಲವು ಫೈಟ್ ಗಳು ತುಂಬ ಚೆನ್ನಾಗಿದೆ. ಇಡೀ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗಿದೆ. ಅದೇ ಫೈಟ್ಸ್, ಅದೇ ಹಾಡುಗಳು, ಅದೇ ರೀತಿಯ ಕಥೆ ಇರುವ ಕಾರಣ ಕೆಲವು ಕಡೆ ಸಿನಿಮಾ ಬೋರ್ ಆಗುತ್ತದೆ.
ಹೊಸತನದ ನಿರೀಕ್ಷೆ ಬೇಡ
ದರ್ಶನ್ ಅಭಿಮಾನಿಗಳು, ಕಮರ್ಷಿಯಲ್ ಸಿನಿಮಾ ಇಷ್ಟ ಪಡುವವರು, ಹೊಡೆದಾಟ ನೋಡಬೇಕು ಎನ್ನುವವರು 'ಒಡೆಯ'ನ ದರ್ಶನ ಮಾಡಬಹುದು. ಹೊಸತನದ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಹೋದರೆ ನಿಮಗೆ ಮನರಂಜನೆ ಸಿಗಬಹುದು.