Don't Miss!
- News 7th pay commission: ತುಟ್ಟಿ ಭತ್ಯೆ, ನಗರ ಪರಿಹಾರ ಭತ್ಯೆ, ಸೇವಾ ಭತ್ಯೆ ಸೇರಿದಂತೆ ಭತ್ಯೆಗಳ ಸಂಪೂರ್ಣ ವಿವರ
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಷ್-ಪಂಕಜ್ ಜುಗಲ್ಬಂದಿಯ ರಣ ಚಿತ್ರ ವಿಮರ್ಶೆ
ಆದರೆ ಚಿತ್ರದಲ್ಲಿ ಪಂಕಜ್ನನ್ನು ಹೊರತುಪಡಿಸಿ ಇನ್ನೂ ಮೂವರು ನಾಯಕರಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಲವ್ ಎಪಿಸೋಡು. ಜೊತೆ ಜೊತೆಗೆ ರೌಡಿಸಂನ ಕರಾಳ ಮುಖ ಅನಾವರಣಗೊಳ್ಳುತ್ತಾ ಹೋಗುತ್ತದೆ.
ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರೂಪಣೆ ಹಾಗೂ ಸಂಭಾಷಣೆ ಒದಗಿಸಿರುವ ಲಕ್ಷ್ಮಣ್, ನಾಲ್ವರು ನಾಯಕರಲ್ಲಿಯೂ ಒಬ್ಬರು. ಶ್ರೀನಿವಾಸ್ ನೂರ್ತಿ ತಮ್ಮ ಪ್ರಥಮ ಪ್ರಯತ್ನದಲ್ಲಿ ಜಸ್ಟ್ ಪಾಸ್ ಆಗಿದ್ದಾರೆ. ರಾಜರತ್ನಂ ಕ್ಯಾಮೆರಾ ಕೆಲಸ ನೋಡಿಯೇ ಸವಿಯಬೇಕು. ಆದರೆ ಒಂದಷ್ಟು ಕಡೆ ಕಥೆ ಕೈಕೊಟ್ಟಿದೆ. ನಿರ್ಮಾಣದಲ್ಲಿ ಇನ್ನಷ್ಟು ಅದ್ದೂರಿತನ ಇದ್ದಿದ್ದರೆ ಒಂದೊಳ್ಳೆ ಚಿತ್ರವಾಗಿರುತ್ತಿತ್ತು. ಶ್ರೀಧರ್ ವಿ.ಸಂಭ್ರಮ್ ಹಾಡುಗಳಲ್ಲಿ ಎರಡು ಗುನುಗುವಂತೆ ಮಾಡುತ್ತದೆ.
ಅಂಬರೀಶ್ ಪೋಸ್ಟರ್ ಗಳಲ್ಲಿ ರಾರಾಜಿಸಿದಂತೆ ಸಿನಿಮಾದಲ್ಲಿ ಕಾಣಸಿಗುವುದಿಲ್ಲ. ಒಟ್ಟಾರೆ 4 ರಿಂದ 5 ದೃಶ್ಯಗಳಿಗೆ ಮಾತ್ರ ಅಂಬಿ ಸೀಮಿತಾಗಿದ್ದಾರೆ. ಡೈಲಾಗ್ ಗಳನ್ನೂ ಹಿಂದಿಯಲ್ಲಿ ಹೇಳಿಸಲಾಗಿದೆ. ಹೀಗಾಗಿ ಅಂಬರೀಶ್ ಅಭಿಮಾನಿಗಳಿಗೆ ತುಸು ಬೇಸರದ ಸಂಗತಿ.
ಪಂಕಜ್ ಅಭಿನಯದಲ್ಲಿ ಇನ್ನಷ್ಟು ಮಾಗಬೇಕಿದೆ. ನಾಯಕಿಯರ ಪೈಕಿ ಅರ್ಚನಾ, ಸುಪ್ರೀತಾ, ಸೋನಿಯಾಗೌಡ ಹಾಗೂ ಸ್ಪೂರ್ತಿ ತಂತಮ್ಮ ಪಾತ್ರಗಳಿಗೆ ಜೀವ ತುಂಬಲು ಯತ್ನಿಸಿದ್ದಾರೆ. ಇವರಲ್ಲಿ ಸುಪ್ರೀತಾ ನಟನೆ ಪರ್ವಾಗಿಲ್ಲ. ಚಿತ್ರದಲ್ಲಿ ಹೊಸದನ್ನೇನೂ ಹೇಳಹೊರಟಿಲ್ಲ. ಅದೇ ಹಳೇ ಸವಕಲು ಕಥೆಯನ್ನೇ ಬೇರೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಅಷ್ಟೆ ! (ಒನ್ ಇಂಡಿಯಾ ಕನ್ನಡ)