Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಷ್-ಪಂಕಜ್ ಜುಗಲ್ಬಂದಿಯ ರಣ ಚಿತ್ರ ವಿಮರ್ಶೆ
ಆದರೆ ಚಿತ್ರದಲ್ಲಿ ಪಂಕಜ್ನನ್ನು ಹೊರತುಪಡಿಸಿ ಇನ್ನೂ ಮೂವರು ನಾಯಕರಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಲವ್ ಎಪಿಸೋಡು. ಜೊತೆ ಜೊತೆಗೆ ರೌಡಿಸಂನ ಕರಾಳ ಮುಖ ಅನಾವರಣಗೊಳ್ಳುತ್ತಾ ಹೋಗುತ್ತದೆ.
ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರೂಪಣೆ ಹಾಗೂ ಸಂಭಾಷಣೆ ಒದಗಿಸಿರುವ ಲಕ್ಷ್ಮಣ್, ನಾಲ್ವರು ನಾಯಕರಲ್ಲಿಯೂ ಒಬ್ಬರು. ಶ್ರೀನಿವಾಸ್ ನೂರ್ತಿ ತಮ್ಮ ಪ್ರಥಮ ಪ್ರಯತ್ನದಲ್ಲಿ ಜಸ್ಟ್ ಪಾಸ್ ಆಗಿದ್ದಾರೆ. ರಾಜರತ್ನಂ ಕ್ಯಾಮೆರಾ ಕೆಲಸ ನೋಡಿಯೇ ಸವಿಯಬೇಕು. ಆದರೆ ಒಂದಷ್ಟು ಕಡೆ ಕಥೆ ಕೈಕೊಟ್ಟಿದೆ. ನಿರ್ಮಾಣದಲ್ಲಿ ಇನ್ನಷ್ಟು ಅದ್ದೂರಿತನ ಇದ್ದಿದ್ದರೆ ಒಂದೊಳ್ಳೆ ಚಿತ್ರವಾಗಿರುತ್ತಿತ್ತು. ಶ್ರೀಧರ್ ವಿ.ಸಂಭ್ರಮ್ ಹಾಡುಗಳಲ್ಲಿ ಎರಡು ಗುನುಗುವಂತೆ ಮಾಡುತ್ತದೆ.
ಅಂಬರೀಶ್ ಪೋಸ್ಟರ್ ಗಳಲ್ಲಿ ರಾರಾಜಿಸಿದಂತೆ ಸಿನಿಮಾದಲ್ಲಿ ಕಾಣಸಿಗುವುದಿಲ್ಲ. ಒಟ್ಟಾರೆ 4 ರಿಂದ 5 ದೃಶ್ಯಗಳಿಗೆ ಮಾತ್ರ ಅಂಬಿ ಸೀಮಿತಾಗಿದ್ದಾರೆ. ಡೈಲಾಗ್ ಗಳನ್ನೂ ಹಿಂದಿಯಲ್ಲಿ ಹೇಳಿಸಲಾಗಿದೆ. ಹೀಗಾಗಿ ಅಂಬರೀಶ್ ಅಭಿಮಾನಿಗಳಿಗೆ ತುಸು ಬೇಸರದ ಸಂಗತಿ.
ಪಂಕಜ್ ಅಭಿನಯದಲ್ಲಿ ಇನ್ನಷ್ಟು ಮಾಗಬೇಕಿದೆ. ನಾಯಕಿಯರ ಪೈಕಿ ಅರ್ಚನಾ, ಸುಪ್ರೀತಾ, ಸೋನಿಯಾಗೌಡ ಹಾಗೂ ಸ್ಪೂರ್ತಿ ತಂತಮ್ಮ ಪಾತ್ರಗಳಿಗೆ ಜೀವ ತುಂಬಲು ಯತ್ನಿಸಿದ್ದಾರೆ. ಇವರಲ್ಲಿ ಸುಪ್ರೀತಾ ನಟನೆ ಪರ್ವಾಗಿಲ್ಲ. ಚಿತ್ರದಲ್ಲಿ ಹೊಸದನ್ನೇನೂ ಹೇಳಹೊರಟಿಲ್ಲ. ಅದೇ ಹಳೇ ಸವಕಲು ಕಥೆಯನ್ನೇ ಬೇರೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಅಷ್ಟೆ ! (ಒನ್ ಇಂಡಿಯಾ ಕನ್ನಡ)