'ಯಜಮಾನ' ನೋಡಿ ಸಿಂಪಲ್ ಸುನಿ ಬರೆದ ವಿಮರ್ಶೆ ಇದು
ದರ್ಶನ್ ಅಭಿನಯದ ಯಜಮಾನ ಸಿನಿಮಾ ನಿನ್ನೆ ತೆರೆಕಂಡಿದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಹಳ ದಿನಗಳ ನಂತರ ದರ್ಶನ್ ಸಿನಿಮಾ ಬಂದಿದ್ದು, ಒಂದು ಗಟ್ಟಿಯಾದ ಕಥೆ ಮೂಲಕ ಪ್ರೇಕ್ಷಕರೆದುರು ಬಂದಿರುವುದು ನಿಜಕ್ಕೂ ಖುಷಿ ಕೊಟ್ಟಿದೆ.
ಸಿನಿಮಾ ನೋಡಿದ ಬಹುತೇಕರು ಸಿನಿಮಾ ಚೆನ್ನಾಗಿದೆ, ಕಾಲಾವಧಿ ಸ್ವಲ್ಪ ಜಾಸ್ತಿ ಆಯ್ತು ಎನ್ನುವುದು ಬಿಟ್ಟರೇ, ಉಳಿದಿದೆಲ್ಲಾ ಸೂಪರ್ ಎಂದಿದ್ದಾರೆ.
ಇದೀಗ, ಕನ್ನಡದ ಯುವ ನಿರ್ದೇಶಕ ಸಿಂಪಲ್ ಸುನಿ ಕೂಡ ಯಜಮಾನ ಸಿನಿಮಾ ನೋಡಿದ್ದು, ತಮ್ಮ ಅಭಿಪ್ರಾಯವನ್ನ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

"ರೈತರಿಗೆ ಬೆಳಸೋದು ಗೊತ್ತು ಅಳಸೋದು ಗೊತ್ತಿಲ್ಲ" ವಿಚಾರವುಳ್ಳ ಕೌಟುಂಬಿಕ ಕಮರ್ಷಿಯಲ್ ಮೂವಿ "ಯಜಮಾನ" ಎಂದು ಫುಲ್ ಮಾರ್ಕ್ಸ ಕೊಟ್ಟಿದ್ದಾರೆ.
''ದರ್ಶನ್ ಅವರ ಅಪಿಯೆರೆನ್ಸೇ ಒಂದು ಹಬ್ಬ ರಶ್ಮಿಕಾ "ತಾನ್ಯ" ಮತ್ತೆಲ್ಲರ ನಟನೆ ಕಥೆಗೆ ಪೂರಕ ಕಥೆ ಸಂಭಾಷಣೆ ಸಂಗೀತ ಶಶಿಧರ ಹಡಪರವರ ಕಲೆ ಶ್ರೀಷಾ ಕ್ಯಾಮರ ಕೈಚಳಕ ಎಲ್ಲವೂ ಅಮೋಘ.. ಶುಭಾಶಯಗಳು ಹರಿಕೃಷ್ಣ, ಬಿ ಸುರೇಶ್'' ಎಂದು ಟ್ವೀಟ್ ಮಾಡಿದ್ದಾರೆ.
ಒಬ್ಬ ಡೈರೆಕ್ಟರ್ ಆಗಿ ಯಜಮಾನ ಚಿತ್ರವನ್ನ ಮೆಚ್ಚಿಕೊಂಡಿರುವ ಸುನಿ, ದರ್ಶನ್ ಸಿನಿಮಾವನ್ನ ಮಾತ್ರವಲ್ಲ, ಕನ್ನಡದ ಬಹುತೇಕ ಎಲ್ಲ ಚಿತ್ರಗಳನ್ನ ನೋಡ್ತಾರೆ. ನೋಡಿ ತಮ್ಮ ಅಭಿಪ್ರಾಯವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಾರೆ.


Click it and Unblock the Notifications











