Don't Miss!
- Automobiles ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Uri Movie Review: ದೇಶಭಕ್ತಿ ಮತ್ತು ಸೇಡಿನ ಜ್ವಾಲೆ
2016ರ ಸೆಪ್ಟೆಂಬರ್ 18ರಂದು ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ನಾಲ್ವರು ಭಯೋತ್ಪಾದಕರು ದಾಳಿ ಮಾಡ್ತಾರೆ. ಈ ವೇಳೆ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರ ನೀಡಲು ಭಾರತದ ಯೋಧರು ಸೆಪ್ಟೆಂಬರ್ 28-29ರಂದು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾರೆ. ಇದಕ್ಕಾಗಿ ಭಾರತೀಯ ಸೇನೆಯ ಸಿದ್ಧತೆ ಹೇಗಿತ್ತು, ದಾಳಿ ವೇಳೆ ಎದುರಾದ ಕಷ್ಟಗಳೇನು ಎಂಬುದೇ ಉರಿ ಸಿನಿಮಾ.
ಚಿತ್ರ: ಉರಿ
ನಿರ್ದೇಶನ: ಆಧಿತ್ಯ ಧಾರ್
ಕಲಾವಿದರು: ವಿಕ್ಕಿ ಕೌಶಲ್, ಪರೇಶ್ ರಾವಲ್, ಯಾಮಿ ಗೌತಮ್ ಮತ್ತು ಇತರರು
ಬಿಡುಗಡೆ: ಜನವರಿ 1, 2019
ವಿಕ್ಕಿ ಕೌಶಲ್ ನಟನೆಯೇ ಉರಿ ಚಿತ್ರದ ಜೀವಾಳ. ಇಡೀ ಸಿನಿಮಾವನ್ನ ಒಬ್ಬರೇ ಸಾಗಿಸಿದ್ದಾರೆ. ಮೇಜರ್ ವಿಹಾನ್ ಸಿಂಗ್ ಪಾತ್ರದಲ್ಲಿ ನಟಿಸಿರುವ ವಿಕ್ಕಿ, ಅಭಿನಯಿಸಿದ್ದಾರೆ ಅನ್ನೋದಕ್ಕಿಂತ ಜೀವಿಸಿದ್ದಾರೆ ಎನ್ನಬಹುದು. ಹಾಗಾಗಿ, ಉರಿ ಚಿತ್ರಕ್ಕೆ ವಿಕ್ಕಿ ಕೌಶಲ್ ಅತಿ ದೊಡ್ಡ ಪ್ಲಸ್ ಪಾಯಿಂಟ್.
ಅಮ್ಮನ ಆರೈಕೆಗಾಗಿ ಕಾಶ್ಮೀರದ ಗಡಿಯಿಂದ ದೆಹಲಿಗೆ ವರ್ಗಾವಣೆ ಪಡೆದುಕೊಳ್ಳುವ ನಾಯಕನಿಗೆ ಮತ್ತೆ ಕಾಶ್ಮೀರದಿಂದ ಬುಲಾವ್ ಬರುತ್ತೆ. ಉರಿ ಸೇನಾ ಮೇಲೆ ಆಗಿದ್ದ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್ ಮಾಡಲು ನಿರ್ಧರಿಸಿ, ಅದರ ನೇತೃತ್ವ ವಿಹಾನ್ ಗೆ ನೀಡಲಾಗುತ್ತೆ.
ಅಲ್ಲಿಂದ ಅಸಲಿ ಕಥೆ ಆರಂಭವಾಗುತ್ತೆ. ಈ ಸರ್ಜಿಕಲ್ ಸ್ಟ್ರೈಕ್ ಮಾಡಲು ಭಾರತದ ಯೋಧರು ಹೇಗೆ ತಯಾರಾಗ್ತಾರೆ, ಏನು ಕಷ್ಟಗಳನ್ನ ಅನುಭವಿಸ್ತಾರೆ, ಪಾಕ್ ಉಗ್ರರ ಮೇಲೆ ದಾಳಿ ಹೇಗೆ ನಡೆಯುತ್ತೆ ಎಂಬುದು ಸೆಕೆಂಡ್ ಹಾಫ್. ದ್ವಿತೀಯಾರ್ಧ ಭಾರಿ ರೋಚಕವಾಗಿದ್ದು, ಪ್ರೇಕ್ಷಕರನ್ನ ಸೀಟಿನ ತುದಿಯಲ್ಲಿ ಕೂರಿಸುತ್ತೆ.
ಸೈನಿಕರ ಜೀವನ, ಅವರ ಕುಟುಂಬದ ಅಭಿಮಾನಿ, ದೇಶಕ್ಕಾಗಿ ಅವರ ತ್ಯಾಗ, ಸೈನಿಕರನ್ನ ಕಳೆದುಕೊಂಡು ಪತ್ನಿ ಮಕ್ಕಳ ನೋವು ಎಲ್ಲದರ ಮೇಲೆ ಬೆಳಕು ಚೆಲ್ಲಿದೆ. ಈ ದೃಶ್ಯಗಳು ನೋಡ್ತಿದ್ರೆ ಮೈ ರೋಮಾಂಚನವಾಗುತ್ತೆ. ದೇಶಭಕ್ತಿ ಎದ್ದು ನಿಲ್ಲುವಂತೆ ಮಾಡುತ್ತೆ.
ಇನ್ನು ಸರ್ಜಿಕಲ್ ಸ್ಟ್ರೈಕ್ ನಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಸೂಚ್ಯವಾಗಿ ತೋರಿಸಲಾಗಿದೆ. ಯಾಮಿ ಗೌತಮ್, ಪರೇಶ್ ರಾವಲ್ ಸೇರಿದಂತೆ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ನಿರ್ದೇಶಕ ಆಧಿತ್ಯ ಧಾರ್ ತಮ್ಮ ಮೊದಲ ಸಿನಿಮಾದಲ್ಲಿ ಗಮನ ಸೆಳೆಯುತ್ತಾರೆ. ಅಂತಿಮವಾಗಿ ಹೇಳುವುದಾದರೇ ಸರ್ಜಿಕಲ್ ಸ್ಟ್ರೈಕ್ ದೃಶ್ಯಗಳು ನೋಡುಗರಿಗೆ ಥ್ರಿಲ್ ಕೊಡುತ್ತೆ. ಆದ್ರೆ, ಇಂತಹ ಸಿನಿಮಾಗಳು ಈ ಹಿಂದೆ ನೋಡಿರುವವರಿಗೆ ಇದು ಸಾಮಾನ್ಯವಾದ ಒಂದು ಸಿನಿಮಾ. ವಿಶೇಷ ಏನು ಇಲ್ಲ ಎಂದೆನಿಸುತ್ತೆ.