ಯಾಕೋ ಐಂದ್ರಿತಾ ನಸೀಬು ಎಲ್ಲೂ ನೆಟ್ಟಗಿಲ್ಲ!

ಅಂದ ಹಾಗೆ, ಈ ತಮಿಳು ಚಿತ್ರದ ನಿರ್ದೇಶಕ ಛಾಯಾಗ್ರಾಹಕ ರಮೇಶ್. ಇದೇ ಮೊದಲ ಬಾರಿಗೆ ಅವರು ನಿರ್ದೇಶಕರಾಗಲಿದ್ದಾರೆ. ಇನ್ನೊಂದು ವಿಷಯವೆಂದರೆ ಐಂದ್ರಿತಾ ಹೀಗೆ ತಮಿಳಿನಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗುತ್ತಿರುವುದು ಇದು ಎರಡನೇ ಬಾರಿ.
ಈ ಹಿಂದೆ ನಕುಲ್ ನಾಯಕನಾಗಿರುವ ಚಿತ್ರಕ್ಕೂ ಐಂದ್ರಿತಾ ಆಯ್ಕೆಯಾಗಿದ್ದರು. ಇನ್ನೇನು ಶೂಟಿಂಗ್ ಶುರು ಎನ್ನುವಷ್ಟರಲ್ಲಿ ಪ್ರೊಜೆಕ್ಟೇ ನಿಂತು ಹೋಗಿತ್ತು. ಆದರೆ ಈ ಬಾರಿ ಹಾಗಾಗಲಿಕ್ಕಿಲ್ಲ ಅನ್ನೋದು ಐಂದ್ರಿತಾ ಭರವಸೆ. "ವಿನಯ್ ಕಾಲು ಮುರಿದಿರುವುದು ಹೌದು, ಆ ಕಾರಣಕ್ಕೇ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಸದ್ಯಕ್ಕೆ ನಾನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ" ಎನ್ನುತ್ತಿದ್ದಾರೆ ಐಂದ್ರಿತಾ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Actress Aindrita Ray's Tamil Movie shooting Post-phoned. The reason is the Hero Kannadiga Vinay Rai got accident.


Click it and Unblock the Notifications











