ಎ.ಆರ್.ರೆಹಮಾನ್ ಗೆ ಸಂಕಷ್ಟ: ಮದ್ರಾಸ್ ಹೈಕೋರ್ಟ್ನಿಂದ ನೊಟೀಸ್
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಗೆ ಸಂಕಷ್ಟ ಎದುರಾಗಿದೆ. ಮದ್ರಾಸ್ ಹೈಕೋರ್ಟ್ ಎ.ಆರ್.ರೆಹಮಾನ್ ಗೆ ನೊಟೀಸ್ ಜಾರಿ ಮಾಡಿದೆ.
ತೆರಿಗೆ ಪಾವತಿಸುವಲ್ಲಿ ಎ.ಆರ್.ರೆಹಮಾನ್ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆಯು ಮಡ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ನೊಟೀಸ್ ನೀಡಿದೆ.
ಎ.ಆರ್.ರೆಹಮಾನ್ ತಮ್ಮ ಆದಾಯದ ಮೂರು ಕೋಟಿ ರೂಪಾಯಿ ಹಣವನ್ನು ತೆರಿಗೆಯಿಂದ ಉಳಿಸಿಕೊಳ್ಳಲು ತಮ್ಮದೇ ಎ.ಆರ್.ರೆಹಮಾನ್ ಫೌಂಡೇಶನ್ ಗೆ ಹಣವನ್ನು ತೊಡಗಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿದೆ.

ಲಿಬ್ರಾ ಮೊಬೈಲ್ಸ್ನಿಂದ 3.75 ಕೋಟಿ ಆದಾಯ
2011-12ನೇ ಹಣಕಾಸು ವರ್ಷದಲ್ಲಿ ಎ.ಆರ್.ರೆಹಮಾನ್, ಇಂಗ್ಲೆಂಡ್ ಮೂಲಕ ಲಿಬ್ರಾ ಮೊಬೈಲ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅದರಿಂದ 3.75 ಕೋಟಿ ಹಣ ಪಡೆದಿದ್ದಾರೆ.

ತಮ್ಮ ಖಾತೆಗೆ ಜಮಾ ಮಾಡಿಕೊಳ್ಳದ ರೆಹಮಾನ್
ಆದರೆ ಆ 3.75 ಕೋಟಿ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುವ ಬದಲಿಗೆ ನೇರವಾಗಿ ಎ.ಆರ್.ರೆಹಮಾನ್ ಫೌಂಡೇಶನ್ಗೆ ನೀಡುವಂತೆ ಎ.ಆರ್.ರೆಹಮಾನ್ ಸೂಚಿಸಿದ್ದಾರೆ. ಹಾಗೆಯೇ ಲಿಬ್ರಾ ಮೊಬೈಲ್ಸ್ ಸಂಸ್ಥೆಯು ಹಣವನ್ನು ನೇರವಾಗಿ ಫೌಂಡೇಶನ್ಗೆ ನೀಡಿದೆ.

ಆದಾಯ ತೆರಿಗೆ ತಪ್ಪಿಸಲು ತಂತ್ರ
ತಮ್ಮ ಆದಾಯದ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಲು ಹೀಗೆ ನೇರವಾಗಿ ಫೌಂಡೇಶನ್ಗೆ ಹೂಡಿಕೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಅಧಿಕಾರಿ ಟಿ.ಆರ್.ಸೆಂಥಿಲ್ ಕುಮಾರ್ ಆರೋಪಿಸಿದ್ದು, ಇಲಾಖೆಯ ವತಿಯಿಂದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
Recommended Video

ಸ್ವಂತ ಆದಾಯವನ್ನು ನೇರವಾಗಿ ಫೌಂಡೇಶನ್ಗೆ ತೊಡಗಿಸುವಂತಿಲ್ಲ
ನಿಯಮದಂತೆ, ಯಾವುದೇ ಆದಾಯವನ್ನು ಮೊದಲು ವ್ಯಕ್ತಿ ಪಡೆದು ಅದಕ್ಕೆ ಸೂಕ್ತ ತೆರಿಗೆ ಪಾವತಿಸಿದ ಬಳಿಕವಷ್ಟೆ ಆ ಹಣವನ್ನು ಬೇರೆ ಎನ್ಜಿಓ, ಫೌಂಡೇಶನ್ಗಳಲ್ಲಿ ತೊಡಗಿಸಬೇಕಾಗಿರುತ್ತದೆ. ಟ್ರಸ್ಟ್ ಅಥವಾ ಫೌಂಡೇಶನ್ಗಳಿಗೆ ಇತರರ ಆದಾಯದ ಹಣವನ್ನು ನೇರವಾಗಿ ತೊಡಗಿಸುವಂತಿಲ್ಲ, ಇದು ಅಪರಾಧವಾಗಿದೆ ಎಂದಿದ್ದಾರೆ ಟಿ.ಆರ್.ಸೆಂಥಿಲ್.


Click it and Unblock the Notifications











