Don't Miss!
- Sports IPL 2024: ಚಿನ್ನಸ್ವಾಮಿಯಲ್ಲಿ ಡಾಗ್ ಔಟ್ ವಲಯ ನಿರ್ಮಾಣ? ಇದರ ಲಾಭವೇನು?
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಲೆ ಬೆದರಿಕೆ ಇದ್ದರೂ ಪೊಲೀಸ್ ಭದ್ರತೆ ಬೇಡವೆಂದ ನಟ ಸಿದ್ಧಾರ್ಥ್
ತಮಿಳು ನಟ ಸಿದ್ಧಾರ್ಥ್ಗೆ ಹಲವಾರು ಮಂದಿ ದೂರವಾಣಿ ಮೂಲಕ ಕೊಲೆ ಬೆದರಿಕೆಗಳನ್ನು ಹಾಕಿದ್ದಾರೆ. ಸಿದ್ಧಾರ್ಥ್ ಕುಟುಂಬಕ್ಕೆ ಅತ್ಯಾಚಾರ ಬೆದರಿಕೆಗಳನ್ನು ಸಹ ಹಾಕಿದ್ದಾರೆ.
Recommended Video
ಈ ಬಗ್ಗೆ ಟ್ವೀಟ್ ಮಾಡಿದ್ದ ಸಿದ್ಧಾರ್ಥ್, 'ಬಿಜೆಪಿ ಐಟಿ ಸೆಲ್ನವರು ನನ್ನ ಮೊಬೈಲ್ ಸಂಖ್ಯೆ ಬಹಿರಂಗಗೊಳಿಸಿದ್ದಾರೆ. ನೂರಾರು ಮಂದಿ ನನಗೆ ಕರೆ ಮಾಡಿ ಕೊಲೆ ಬೆದರಿಕೆಗಳು, ನನ್ನ ಕುಟುಂಬಕ್ಕೆ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. ಅವರ ಸಂಖ್ಯೆಗಳನ್ನೆಲ್ಲಾ ಸೇರಿಸಿ ಪೊಲೀಸರಿಗೆ ದೂರು ನೀಡುತ್ತೇನೆ' ಎಂದಿದ್ದರು.
ಸಿದ್ಧಾರ್ಥ್ಗೆ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಸಿದ್ಧಾರ್ಥ್ಗೆ ಭದ್ರತೆ ಒದಗಿಸುವುದಾಗಿ ಹೇಳಿದ್ದಾರೆ. ಆದರೆ ಸಿದ್ಧಾರ್ಥ್ ಅವರು ಭದ್ರತೆಯನ್ನು ನಿರಾಕರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ಧಾರ್ಥ್, 'ಭದ್ರತೆ ಒದಗಿಸುತ್ತೇನೆ ಎಂದ ನಿಮ್ಮ ಆಫರ್ಗೆ ಧನ್ಯವಾದಗಳು ತಮಿಳುನಾಡು ಪೊಲೀಸ್. ನಮ್ಮ ಕುಟುಂಬದಲ್ಲಿ ಹೀಗೆ ಪೊಲೀಸ್ ಭದ್ರತೆ ಒದಗಿಸಲ್ಪಟ್ಟ ಮೊದಲ ವ್ಯಕ್ತಿ ನಾನೇ. ಆದರೆ ನನಗೆ ಭದ್ರತೆ ಬೇಡ, ನನಗೆ ಭದ್ರತೆ ಒದಗಿಸಲು ನಿಯೋಜಿಸುವ ಅಧಿಕಾರಿಗಳನ್ನು ಈ ಕೊರೊನಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಸೇವೆಗೆ ಬಳಸಿಕೊಳ್ಳಿ' ಎಂದಿದ್ದಾರೆ ಸಿದ್ಧಾರ್ಥ್.
ಸಿದ್ಧಾರ್ಥ್ ಅವರು ಕೇಂದ್ರ ಸರ್ಕಾರವನ್ನು ಬಹುವಾಗಿ ಟೀಕಿಸುತ್ತಿರುತ್ತಾರೆ ಹಾಗಾಗಿ ಅವರ ವಿರುದ್ಧ ಬಿಜೆಪಿ ಪ್ರೇಮಿಗಳು ಮುಗಿಬಿದ್ದಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿದ್ಧಾರ್ಥ್ ಅವರ ಮೊಬೈಲ್ ಸಂಖ್ಯೆ ಬಹಿರಂಗಗೊಂಡಿತ್ತು ಹಾಗಾಗಿ ಅವರಿಗೆ ನೂರಾರು ಬೆದರಿಕೆ ಕರೆಗಳು ಬಂದಿದ್ದವು.