ತಮಿಳು ನಟ, ನಿರ್ಮಾಪಕ ವೆಂಕಟ್ ಶುಭ ಕೊರೊನಾದಿಂದ ಸಾವು
ಕೊರೊನಾ ವೈರಸ್ ಕಾರಣದಿಂದ ಮತ್ತೊಬ್ಬ ಸಿನಿ ಕಲಾವಿದ ಮೃತಪಟ್ಟಿದ್ದಾರೆ. ತಮಿಳಿನ ಹಿರಿಯ ನಟ, ಕಾರ್ಯಕಾರಿ ನಿರ್ಮಾಪಕ, ಲೇಖಕರೂ ಆಗಿದ್ದ ವೆಂಕಟ್ ಶುಭ ಕೊರೊನಾದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಮೇ 29 ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವೆಂಕಟ್ ಶುಭ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ವೆಂಕಟ್ ಶುಭ ಸ್ನೇಹಿತ, ಅಮ್ಮಾ ಕ್ರಿಯೇಷನ್ಸ್ ಟಿ ಶಿವ ಈ ಕುರಿತು ಟ್ವೀಟ್ ಮಾಡಿ ''ಕಳೆದ ಹತ್ತು ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ವೆಂಕಟ್ ಆರೋಗ್ಯ ಹದಗೆಟ್ಟಿತು. ನಂತರ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಯಿತು. ಆದರೆ, ಮೇ 29 ರಂದು 12.48ಕ್ಕೆ ಸಾವನ್ನಪ್ಪಿದ್ದಾರೆ'' ಎಂದು ತಿಳಿಸಿದ್ದಾರೆ.

ತಮಿಳಿನ ಕಿರುತೆರೆ ಲೋಕದಲ್ಲಿ ವೆಂಕಟ್ ಶುಭ ಖ್ಯಾತ ಹೆಸರು. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು.
ವೆಂಕಟ್ ಶುಭ ನಿಧನಕ್ಕೆ ರಾಧಿಕಾ ಶರತ್ ಕುಮಾರ್, ಪ್ರಕಾಶ್ ರಾಜ್, ಅರಿವಳಗನ್, ಪ್ರಿಯಾ ವಿ ಕಾಮಾಕ್ಷಿ, ಎನ್ ನಟರಾಜ ಸುಬ್ರಮಣಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.


Click it and Unblock the Notifications











