Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪ-ಅಮ್ಮ ಸೇರಿ 11 ಮಂದಿ ವಿರುದ್ಧ ದೂರು ನೀಡಿದ ವಿಜಯ್
ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ ತನ್ನ ತಂದೆ-ತಾಯಿ ಸೇರಿ 11 ಮಂದಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ತನ್ನ ಹೆಸರು ಬಳಸಿಕೊಂಡು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟ ವಿಜಯ್ ಚೆನ್ನೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ತನ್ನ ಹೆಸರನ್ನು ಬಳಸದಂತೆ ಅವರಿಗೆ ಸೂಚನೆ ನೀಡಬೇಕೆಂದು ವಿಜಯ್ ಮನವಿ ಮಾಡಿದ್ದಾರೆ.
ತನ್ನ ಹೆಸರು ಅಥವಾ ತನ್ನ ಅಭಿಮಾನಿ ಬಳಗದ ಹೆಸರನ್ನು ಪೋಷಕರು ಹಾಗೂ ಇತರ ಕೆಲವು ಮಂದಿ ಯಾವುದೇ ರಾಜಕೀಯ ಸಭೆಗಳಲ್ಲಿ ಬಳಸದಂತೆ ಸೂಚನೆ ನೀಡಬೇಕು ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ವಿಜಯ್ ನ್ಯಾಯಾಲಯವನ್ನು ಕೋರಿದ್ದಾರೆ. ವಿಜಯ್ರ ಅರ್ಜಿಯ ವಿಚಾರಣೆಯು ಸೆಪ್ಟೆಂಬರ್ 27ಕ್ಕೆ ನಡೆಯಲಿದೆ.
ತಂದೆ-ತಾಯಿ ವಿರುದ್ಧ ದೂರು ನೀಡಿದ ವಿಜಯ್
ಕಳೆದ ವರ್ಷ ನಟ ವಿಜಯ್ರ ತಂದೆ, ಸಿನಿಮಾ ನಿರ್ದೇಶಕ ಎಸ್ಎ ಚಂದ್ರಶೇಖರ್ 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಳಮ್' ಹೆಸರಿನ ರಾಜಕೀಯ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ನೊಂದಣಿ ಮಾಡಿಸಿದರು. ಆ ಪಕ್ಷದ ಕಾರ್ಯದರ್ಶಿಯಾಗಿ ಎಸ್ಎ ಚಂದ್ರಶೇಖರ್ ಮತ್ತು ಖಜಾಂಚಿಯಾಗಿ ವಿಜಯ್ ತಾಯಿ ಶೋಭಾ ಚಂದ್ರಶೇಖರ್ ಇದ್ದಾರೆ. ಪದ್ಮನಾಭನ್ ಹಾಗೂ ಇನ್ನೂ ಕೆಲವರು ಪಕ್ಷದ ವಿವಿಧ ಹುದ್ದೆಗಳಲ್ಲಿದ್ದಾರೆ. ಪಕ್ಷದಲ್ಲಿರುವವರ ವಿರುದ್ಧವೇ ವಿಜಯ್ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಹೇಳಿಕೆ ಬಿಡುಗಡೆ ಮಾಡಿದ್ದ ವಿಜಯ್
ಕಳೆದ ವರ್ಷ ಎಸ್.ಎ.ಚಂದ್ರಶೇಖರ್ 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಳಮ್' ಪಕ್ಷ ಸ್ಥಾಪನೆ ಮಾಡಿದಾಗ ವಿಜಯ್ ಸಹ ಇದರ ಹಿಂದೆ ಇದ್ದಾರೆ, ವಿಜಯ್ ಇದೇ ಪಕ್ಷ ಸೇರುತ್ತಾರೆ, ಪಕ್ಷವನ್ನು ಮುನ್ನಡೆಸುತ್ತಾರೆ ಎನ್ನಲಾಗಿತ್ತು. ಆದರೆ ಕೂಡಲೇ ಹೇಳಿಕೆ ಬಿಡುಗಡೆ ಮಾಡಿದ ನಟ ವಿಜಯ್, ''ನನಗೂ, ನಮ್ಮ ತಂದೆ ಚಂದ್ರಶೇಖರನ್ ಸ್ಥಾಪಿಸಿರುವ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಈ ಪಕ್ಷದೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ನನಗೆ ಇಲ್ಲ. ಯಾರದ್ದೋ ರಾಜಕೀಯ ಆಸಕ್ತಿಗಳನ್ನು ಪೂರ್ಣಗೊಳಿಸಲು ನಾನು ತಯಾರಿಲ್ಲ. ಈ ಪಕ್ಷ (ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಳಮ್) ನನ್ನ ಪಕ್ಷವೆಂದುಕೊಂಡು ಇದಕ್ಕೆ ಸೇರಿಕೊಳ್ಳಬೇಡಿ. ಹಾಗೂ ಈ ಪಕ್ಷವು ನನ್ನ ಚಿತ್ರ, ನನ್ನ ಹೆಸರು ಅಥವಾ ನನ್ನ ಫ್ಯಾನ್ಸ್ ಕ್ಲಬ್ಗಳ ಹೆಸರನ್ನು ಬಳಸಿದರೆ ನಾನು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ'' ಎಂದು ಎಚ್ಚರಿಕೆ ನೀಡಿದ್ದರು.
ಮಗನ ಬಗ್ಗೆ ತಂದೆ ಚಂದ್ರಶೇಖರ್ ಮಾತು
ವಿಜಯ್ ತಂದೆ ಎಸ್.ಎ.ಚಂದ್ರಶೇಖರ್ ಸಹ ಈ ಬಗ್ಗೆ ಮಾತನಾಡಿ, ''ನನ್ನನ್ನು ನನ್ನ ಮಗನನ್ನು ದೂರ ಮಾಡಲು ಯತ್ನಿಸಲಾಗುತ್ತಿದೆ'' ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದರು. ಕೆಲವು ದಿನಗಳ ಹಿಂದಷ್ಟೆ ಯಾವುದೋ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯ್ ತಂದೆ ಚಂದ್ರಶೇಖರ್, ''ನಾನು ನನ್ನ ಮಗನ ಜಾತಿ ಹಾಗೂ ಧರ್ಮದ ಕಾಲಂನಲ್ಲಿ 'ತಮಿಳನ್' ಎಂದು ಬರೆಸಿದ್ದೆ'' ಎಂದಿದ್ದರು.
'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿರುವ ವಿಜಯ್
ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟ ವಿಜಯ್ ಪ್ರಸ್ತುತ 'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪಕ್ಕಾ ಆಕ್ಷನ್ ಸಿನಿಮಾ ಆಗಿರುವ 'ಬೀಸ್ಟ್'ಗೆ ಬಂಡವಾಳ ಹಾಕಿರುವುದು ಸನ್ ನೆಟ್ವರ್ಕ್ಸ್ನ ಕಲಾನಿಧಿ ಮಾರನ್. ನೆಲ್ಸನ್ ದಿಲೀಪ್ಕುಮಾರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಜಯ್ ನಟಿಸಿದ್ದ ಈ ಹಿಂದಿನ ಸಿನಿಮಾ 'ಮಾಸ್ಟರ್' ಕೊರೊನಾ ನಡುವೆಯೇ ಬಿಡುಗಡೆ ಆಗಿ ಗಳಿಕೆಯಲ್ಲಿ ದಾಖಲೆ ಬರೆದಿತ್ತು. ವಿಜಯ್, ಸಲ್ಮಾನ್ ಖಾನ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.