Don't Miss!
- News Namma Metro Service Extension: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಪ್ರಣೀತಾ ಭಾರೀ ಕಿರಿಕ್ಕು ಎಂಬ ಸುದ್ದಿ ನಿಜವೇ?
ಜರಾಸಂಧ ನಂತರ ಕನ್ನಡದಲ್ಲಿ, ಐವರು ನಾಯಕರಿಗೆ ಒಬ್ಬರೇ ನಾಯಕಿಯಾಗಿ 'ಸ್ನೇಹಿತರು' ಚಿತ್ರದಲ್ಲಿ ಪ್ರಣೀತಾ ಸುಭಾಷ್ ನಟಿಸಿದ್ದಾರೆ. ಅವರಿಗೀಗ ಭಯಂಕರ ಎನ್ನುವಷ್ಟು ಡಿಮ್ಯಾಂಡ ಸೃಷ್ಟಿಯಾಗಿದೆ. ತಮಿಳು ಸ್ಟಾರ್ ಸೂರ್ಯ ತಮ್ಮ ಕಾರ್ತಿ ಜೊತೆ ನಟಿಸಿದ ಚಿತ್ರ ಸಗುನಿ ನಂತರ ಪ್ರಣೀತಾ, ಸೂರ್ಯ ಅವರ ಮುಂದಿನ 'ತುಪ್ಪರಿಯಂ ಆನಂದನ್' ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಕರಾರಿಗೆ ಸಹಿ ಹಾಕುವುದು ಮಾತ್ರ ಬಾಕಿ ಇದೆಯಂತೆ.
ಆದರೆ ಅಷ್ಟರಲ್ಲೇ ಪ್ರಣೀತಾ ಕಿರಿಕ್ಕುಗಳು ಶುರುವಾಗಿದೆ ಎಂಬು ಸುದ್ದಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹೊಸ ನಟರಿಗೆ ನಾಯಕಿಯಾಗಲು ಕಾಲ್ ಶೀಟ್ ಕೇಳಿದರೆ ಕಡ್ಡಿ ಮುರಿದಂತೆ 'ಆಗೊಲ್ಲ' ಎನ್ನುತ್ತಾರೆ ಎಂಬುದು ಸದ್ಯಕ್ಕೆ ಪ್ರಣೀತಾ ಮೇಲಿರುವ ದೂರು. ಹೊಸಬರು ಚಿಲ್ಲರೆ ಹೀರೋಗಳು ಎಂಬ ಮಾತನ್ನು ಪ್ರಣೀತಾ ಹೇಳುತ್ತಾರೆ ಎನ್ನಲಾಗಿದೆ.
ಆದರೆ, ಈ ಎಲ್ಲಾ ವಿಷಯಗಳನ್ನು ಪ್ರಣೀತಾ ಅಲ್ಲಗಳೆದಿದ್ದಾರೆ. "ನನಗೆ ನಾಯಕರಾಗಿ ಯಾರು ನಟಿಸುತ್ತಾರೆ ಅನ್ನೋದು ಮುಖ್ಯವಲ್ಲ. ಕಥೆ ಹಾಗೂ ನನ್ನ ಪಾತ್ರವಷ್ಟೇ ಮುಖ್ಯ" ಎಂದಿದ್ದಾರೆ ಪ್ರಣೀತಾ. ಅಷ್ಟೇ ಅಲ್ಲ, "ನಾನೂ ಕೂಡ ಹೊಸಬಳೇ. ಈಗಲೂ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಹೀಗಿರುವಾಗ ಹೊಸಬರ ಜೊತೆ ಮಾಡುವುದಿಲ್ಲವೆಂದು ಹೇಳುವುದು ಹೇಗೆ?" ಎಂದು ಪ್ರಶ್ನಿಸಿದವರನ್ನೇ ತಿರುಗಿ ಪ್ರಶ್ನೆ ಕೇಳುತ್ತಾರೆ.
ತಮಗೆ ಸಗುನಿಯಂತಹ ಸೂಪರ್ ಹಿಟ್ ಚಿತ್ರದಲ್ಲಿ ಅವಕಾಶ ಕೊಟ್ಟ ತಮಿಳು ಚಿತ್ರರಂಗದ ಬಗ್ಗೆ ಪ್ರಣೀತಾರಿಗೆ ಕೃತಜ್ಞತೆಯಿದೆ. ಜೊತೆಗೆ ತಮಿಳು ಚಿತ್ರದಲ್ಲಿ ನಟಿಸಿರುವ ಹೆಮ್ಮೆಯೂ ಇದೆ. ನಿರ್ದೇಶಕ ಶಂಕರ್ ದಯಾಳ್, ನಾಯಕ ಕಾರ್ತಿ ಮುಂತಾದವರನ್ನು ಹೋದಲ್ಲೆಲ್ಲಾ ಬಹಳಷ್ಟು ಹೊಗಳುವ ಈ ನಟಿ ತಮಗೆ ತಮಿಳು ಗೊತ್ತಿಲ್ಲದಿದ್ದರೂ ಚೆನ್ನಾಗಿ ನಡೆಸಿಕೊಂಡರು, ಯಾರೂ ತೊಂದರೆ ಕೊಡಲಿಲ್ಲ ಎಂದಿದ್ದಾರೆ.
ಕನ್ನಡದಲ್ಲಿ ಈಗಷ್ಟೇ ಸ್ನೇಹಿತರು ಚಿತ್ರ ಮುಗಿಸಿರುವ ಪ್ರಣೀತಾ, ಮುಂದೆ ಕಿಚ್ಚ ಸುದೀಪ್ 'ಬಚ್ಚನ್' ಮತ್ತು ಗೋಲ್ಡನ್ ಸ್ಟಾರ್ ಗಣೇಶ್ 'ಮಿಸ್ಟರ್ 420'ಯಲ್ಲಿ ನಟಿಸಬೇಕಿದೆ. ಇನ್ನು ತಮಿಳಿನಲ್ಲಿ ಸೂರ್ಯ ನಾಯಕನಾಗಿರುವ 'ತುಪ್ಪರಿಯಂ ಆನಂದನ್' ಚಿತ್ರ ಪಕ್ಕಾ ಆಗಿ ಅದು ಯಾವಾಗ ಪ್ರಾರಂಭವಾಗಲಿದೆಯೋ, ಕಾದು ನೋಡಬೇಕು. ಆದರೆ ಯಾಕೆ ಪ್ರಣೀತಾ ಹೀಗೆಲ್ಲಾ ಸುದ್ದಿಯಾಗುತ್ತಿದ್ದಾರೆ? ಸುದ್ದಿ ನಿಜವೇ...! (ಒನ್ ಇಂಡಿಯಾ ಕನ್ನಡ)