Don't Miss!
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಸ್ತೆ ಬದಿ ಇಡ್ಲಿ ಮಾರುವವನಿಗೆ ಒಂದು ಲಕ್ಷ ಹಣ ನೀಡಿದ ನಟ ಅಜಿತ್: ಕಾರಣ?
ತಮಿಳಿನ ಖ್ಯಾತ ನಟ ಅಜಿತ್ ಅಲಿಯಾಸ್ ತಲಾ ಅಜಿತ್ ತಮ್ಮ ನಟನೆ, ಸಿನಿಮಾಗಳ ಜೊತೆಗೆ ತಮ್ಮ ಸರಳತೆಯಿಂದಲೂ ಖ್ಯಾತರು.
ಮಿತ ಭಾಷಿ, ಸರಳ ವ್ಯಕ್ತಿ, ಮಾನವೀಯತೆ ಉಳ್ಳ ವ್ಯಕ್ತಿಯಾಗಿರುವ ತಲಾ ಅಜಿತ್, ಈಗ ಹಠಾತ್ತನೆ ಮತ್ತೆ ತಮ್ಮ ಮಾನವೀಯ ನಡೆಯಿಂದ ಸುದ್ದಿಗೆ ಬಂದಿದ್ದಾರೆ.
ತಮ್ಮ ಮುಂದಿನ ಸಿನಿಮಾ 'ವಾಲಿಮಾ' ಗಾಗಿ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ನಟ ಅಜಿತ್. ಚಿತ್ರೀಕರಣದ ಸೆಟ್ನ ಬಳಿ ಒಬ್ಬ ವ್ಯಕ್ತಿ ಇಡ್ಲಿ ಮಾರಾಟ ಮಾಡುತ್ತಿದ್ದರಂತೆ. ಚಿತ್ರೀಕರಣ ನೋಡಲು ಬಂದವರಿಗೆ ಮತ್ತು ಇತತರಿಗೆ ಆತ ಇಡ್ಲಿ ಮಾಡಿ ಮಾರುತ್ತಿದ್ದರಂತೆ.
ವಯಸ್ಸಾದ ಆ ವ್ಯಕ್ತಿಯ ಶ್ರಮವನ್ನು ಕೆಲವು ದಿನ ನೋಡಿದ ಅಜಿತ್, ತಾವೂ ಸಹ ಆತ ಮಾಡಿದ ಇಡ್ಲಿಯನ್ನು ಸವಿದಿದ್ದಾರೆ. ಇಡ್ಲಿ ರುಚಿಯನ್ನು ಬಹುವಾಗಿ ಮೆಚ್ಚಿಕೊಂಡ ತಲಾ ಅಜಿತ್, ಆ ವ್ಯಕ್ತಿಗೆ ನೆರವಿನ ರೂಪದಲ್ಲಿ ಒಂದು ಲಕ್ಷ ರೂಪಾಯಿ ಹಣ ನೀಡಿದ್ದಾರೆ.
ಅಜಿತ್ ಹೀಗೆ ಸಹಾಯ ಮಾಡುತ್ತಿರುವುದು ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಹಲವು ಮಂದಿಗೆ ಅಜಿತ್ ಸಹಾಯ ಮಾಡಿದ್ದಾರೆ.
Recommended Video
ರಜನೀಕಾಂತ್ ಸಹ ಆಗಾಗ್ಗೆ ಹೀಗೆ ರಸ್ತೆ ಬದಿಯ ವ್ಯಾಪಾರಿಗಳಿಗೆ, ಭಿಕ್ಷುಕರಿಗೆ ಸಹಾಯ ಮಾಡಿದ ಕತೆಗಳು ಹಿಂದೆ ಸಾಕಷ್ಟು ಹರಿದಾಡುತ್ತಿದ್ದವು.