Don't Miss!
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಸಿಂಬು ವಿರುದ್ಧ ಪ್ರಾಣಿ ದಯಾಸಂಘದಿಂದ ದೂರು ದಾಖಲು
ತಮಿಳು ನಟ ಸಿಂಬು ವಿರುದ್ಧ ಪ್ರಾಣಿ ದಯಾಸಂಘ ಕೋಪಗೊಂಡಿವೆ. ನಟ ಸಿಂಭು ತಮ್ಮ ಪ್ರಾಣಿ ಹಿಂಸೆ ಮಾಡಿದ್ದಾರೆಂದು ಪ್ರಾಣಿ ದಯಾಸಂಘಗಳು ದೂರು ದಾಖಲಿಸಿವೆ.
ನಟ ಸಿಂಬು ಈಶ್ವರನ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ನಲ್ಲಿ ಸಿಂಬು ಹಾವೊಂದನ್ನು ಹಿಡಿದಿರುವ ಚಿತ್ರವಿದೆ.
ಈಶ್ವರನ್ ಸಿನಿಮಾದ ಚಿತ್ರದಲ್ಲಿ ಭಾಗವಹಿಸಿದ್ದ ನಟ ಸಿಂಬು ಅವರು ಜೀವಂತ ಹಾವೊಂದನ್ನು ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದೇ ವಿಡಿಯೋದ ಆಧಾರದಲ್ಲಿ ಸಿಂಭು ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದೆ.
ಸಿಂಭು ನಾಗರಹಾವು ಹಿಡಿದಿರುವ ವಿಡಿಯೋ ವೈರಲ್ ಆಗಿದೆ
ಈಶ್ವರನ್ ಸಿನಿಮಾದಲ್ಲಿ ನಟ ಸಿಂಭು ಮರದ ನಾಗರಹಾವೊಂದನ್ನು ಹಿಡಿದು ಅದನ್ನು ಚೀಲವೊಂದರ ಒಳಕ್ಕೆ ಬಿಡುವ ದೃಶ್ಯವಿದೆ. ಈ ದೃಶ್ಯಕ್ಕಾಗಿ ನಿಜವಾದ ನಾಗರಹಾವನ್ನು ಚಿತ್ರತಂಡ ಬಳಸಿದೆ. ಇದು ಈಗ ಪ್ರಾಣಿ ದಯಾ ಸಂಘಗಳ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರಾಣಿ ಸಂರಕ್ಷಣಾ ಕಾಯ್ದೆ 1972 ರ ಉಲ್ಲಂಘನೆ
ಜೀವಂತ ಹಾವನ್ನು ಚಿತ್ರೀಕರಣಕ್ಕೆ ಬಳಸಲು ಸಿನಿಮಾ ತಂಡವು ಅನುಮತಿ ಪಡೆದಿದೆಯೇ ಎಂಬ ಪ್ರಶ್ನೆ ಎದ್ದಿದೆ. ಚಿತ್ರತಂಡವು ಪ್ರಾಣಿ ಸಂರಕ್ಷಣಾ ಕಾಯ್ದೆ 1972 ಅನ್ನು ಉಲ್ಲಂಘಿಸಿದೆ ಎಂದು ಪ್ರಾಣಿ ದಯಾಸಂಘ ಹಾಗೂ ಅರಣ್ಯ ಇಲಾಖೆ ಸಿನಿಮಾ ತಂಡದ ವಿರುದ್ಧ ಪ್ರಕರಣ ದಾಖಲಿಸಿದೆ.
ಪ್ರಾಣಿ ಹಿಂಸೆ ದೂರು ಸಹ ದಾಖಲು
ಖಾಸಗಿ ವ್ಯಕ್ತಿಯೊಬ್ಬರು ಪ್ರತ್ಯೇಕವಾಗಿ ನಟ ಸಿಂಭು ವಿರುದ್ಧ ಪ್ರಕರಣ ದಾಖಲಿಸಿದ್ದು, 'ಹಾವನ್ನು ಹಿಡಿಯುವಾಗ ಸಿಂಭು ಹಾವಿಗೆ ಘಾಸಿ ಮಾಡಿದ್ದಾರೆ. ಹಾಗಾಗಿ ಸಿಂಭು ವಿರುದ್ಧ ಪ್ರಾಣಿ ಹಿಂಸೆ ಅಡಿ ಕಾನೂನು ಕ್ರಮ ಜರುಗಿಸಬೇಕು' ಎಂದು ಮನವಿ ಮಾಡಿದ್ದಾರೆ.
Recommended Video
ಸುಸೀಂಥಿರನ್ ನಿರ್ದೇಶನದ ಸಿನಿಮಾ
ಈಶ್ವರನ್ ಸಿನಿಮಾವನ್ನು ಸುಸೀಂಥಿರನ್ ನಿರ್ದೇಶಿಸಿದ್ದಾರೆ. ಸಿನಿಮಾದ ನಾಯಕಿ ನಿಧಿ ಅಗರ್ವಾಲ್. ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮಾಧವನ್ ಮೀಡಿಯಾ. ಸಿನಿಮಾವು 2021 ರ ಆರಂಭದಲ್ಲಿ ಬಿಡುಗಡೆ ಆಗಲಿದೆ.