Don't Miss!
- Finance ರಿಲಯನ್ಸ್ ಇಂಡಸ್ಟ್ರೀಸ್ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಪ್ರಕಟ; ನಿವ್ವಳ ಲಾಭ 18,951 ಕೋಟಿ ರೂಪಾಯಿ
- News ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಮುಂದಿರುವ ಸವಾಲುಗಳು
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Technology ಇಂದು ಮೊಟೊ G64 5G ಫೋನ್ ಫಸ್ಟ್ ಸೇಲ್!..ಈ ಫೋನಿನ ಪ್ಲಸ್ ಪಾಯಿಂಟ್ ಏನು?
- Sports RR vs MI: 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಈ ದಾಖಲೆ ನಿರ್ಮಿಸಿದ ಮೊದಲಿಗ ಯುಜ್ವೇಂದ್ರ ಚಹಾಲ್!
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಸಿಂಬು ವಿರುದ್ಧ ಪ್ರಾಣಿ ದಯಾಸಂಘದಿಂದ ದೂರು ದಾಖಲು
ತಮಿಳು ನಟ ಸಿಂಬು ವಿರುದ್ಧ ಪ್ರಾಣಿ ದಯಾಸಂಘ ಕೋಪಗೊಂಡಿವೆ. ನಟ ಸಿಂಭು ತಮ್ಮ ಪ್ರಾಣಿ ಹಿಂಸೆ ಮಾಡಿದ್ದಾರೆಂದು ಪ್ರಾಣಿ ದಯಾಸಂಘಗಳು ದೂರು ದಾಖಲಿಸಿವೆ.
ನಟ ಸಿಂಬು ಈಶ್ವರನ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ನಲ್ಲಿ ಸಿಂಬು ಹಾವೊಂದನ್ನು ಹಿಡಿದಿರುವ ಚಿತ್ರವಿದೆ.
ಈಶ್ವರನ್ ಸಿನಿಮಾದ ಚಿತ್ರದಲ್ಲಿ ಭಾಗವಹಿಸಿದ್ದ ನಟ ಸಿಂಬು ಅವರು ಜೀವಂತ ಹಾವೊಂದನ್ನು ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದೇ ವಿಡಿಯೋದ ಆಧಾರದಲ್ಲಿ ಸಿಂಭು ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದೆ.
ಸಿಂಭು ನಾಗರಹಾವು ಹಿಡಿದಿರುವ ವಿಡಿಯೋ ವೈರಲ್ ಆಗಿದೆ
ಈಶ್ವರನ್ ಸಿನಿಮಾದಲ್ಲಿ ನಟ ಸಿಂಭು ಮರದ ನಾಗರಹಾವೊಂದನ್ನು ಹಿಡಿದು ಅದನ್ನು ಚೀಲವೊಂದರ ಒಳಕ್ಕೆ ಬಿಡುವ ದೃಶ್ಯವಿದೆ. ಈ ದೃಶ್ಯಕ್ಕಾಗಿ ನಿಜವಾದ ನಾಗರಹಾವನ್ನು ಚಿತ್ರತಂಡ ಬಳಸಿದೆ. ಇದು ಈಗ ಪ್ರಾಣಿ ದಯಾ ಸಂಘಗಳ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರಾಣಿ ಸಂರಕ್ಷಣಾ ಕಾಯ್ದೆ 1972 ರ ಉಲ್ಲಂಘನೆ
ಜೀವಂತ ಹಾವನ್ನು ಚಿತ್ರೀಕರಣಕ್ಕೆ ಬಳಸಲು ಸಿನಿಮಾ ತಂಡವು ಅನುಮತಿ ಪಡೆದಿದೆಯೇ ಎಂಬ ಪ್ರಶ್ನೆ ಎದ್ದಿದೆ. ಚಿತ್ರತಂಡವು ಪ್ರಾಣಿ ಸಂರಕ್ಷಣಾ ಕಾಯ್ದೆ 1972 ಅನ್ನು ಉಲ್ಲಂಘಿಸಿದೆ ಎಂದು ಪ್ರಾಣಿ ದಯಾಸಂಘ ಹಾಗೂ ಅರಣ್ಯ ಇಲಾಖೆ ಸಿನಿಮಾ ತಂಡದ ವಿರುದ್ಧ ಪ್ರಕರಣ ದಾಖಲಿಸಿದೆ.
ಪ್ರಾಣಿ ಹಿಂಸೆ ದೂರು ಸಹ ದಾಖಲು
ಖಾಸಗಿ ವ್ಯಕ್ತಿಯೊಬ್ಬರು ಪ್ರತ್ಯೇಕವಾಗಿ ನಟ ಸಿಂಭು ವಿರುದ್ಧ ಪ್ರಕರಣ ದಾಖಲಿಸಿದ್ದು, 'ಹಾವನ್ನು ಹಿಡಿಯುವಾಗ ಸಿಂಭು ಹಾವಿಗೆ ಘಾಸಿ ಮಾಡಿದ್ದಾರೆ. ಹಾಗಾಗಿ ಸಿಂಭು ವಿರುದ್ಧ ಪ್ರಾಣಿ ಹಿಂಸೆ ಅಡಿ ಕಾನೂನು ಕ್ರಮ ಜರುಗಿಸಬೇಕು' ಎಂದು ಮನವಿ ಮಾಡಿದ್ದಾರೆ.
Recommended Video
ಸುಸೀಂಥಿರನ್ ನಿರ್ದೇಶನದ ಸಿನಿಮಾ
ಈಶ್ವರನ್ ಸಿನಿಮಾವನ್ನು ಸುಸೀಂಥಿರನ್ ನಿರ್ದೇಶಿಸಿದ್ದಾರೆ. ಸಿನಿಮಾದ ನಾಯಕಿ ನಿಧಿ ಅಗರ್ವಾಲ್. ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮಾಧವನ್ ಮೀಡಿಯಾ. ಸಿನಿಮಾವು 2021 ರ ಆರಂಭದಲ್ಲಿ ಬಿಡುಗಡೆ ಆಗಲಿದೆ.