Don't Miss!
- News ಕೊಳ್ಳೇಗಾಲ ಶಾಸಕರ ಕಾರು ಅಪಘಾತ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರಮಂದಿರಗಳು ಉಚಿತ ನೀರು ಕೊಡಬೇಕು: ಮದ್ರಾಸ್ ಕೋರ್ಟ್ ಸೂಚನೆ
ಚಿತ್ರಮಂದಿರಗಳಲ್ಲಿ ಮೊದಲಿನಂತೆ ನಿಯಮಗಳು ಈಗಿಲ್ಲ. ಬಹುತೇಕ ಎಲ್ಲಾ ಥಿಯೇಟರ್ಗಳು ಹೊರಗಿನಿಂದ ತರುವ ತಿಂಡಿ-ತಿನಿಸು, ಆಹಾರ, ನೀರು ಸಹಿತ ನಿಷೇಧ ಮಾಡಿದೆ. ಸಿನಿಮಾ ನೋಡುವ ಪ್ರೇಕ್ಷಕರಿಗೆ ತಿನ್ನಲು ತಿಂಡಿ ಅಥವಾ ಕುಡಿಯಲು ನೀರು ಬೇಕಿದ್ದಲ್ಲಿ ಥಿಯೇಟರ್ ಒಳಗೆಯೇ ಖರೀದಿ ಮಾಡಬೇಕು. ಬೇಸರದ ಸಂಗತಿ ಅಂದ್ರೆ ಹೊರಗಿನ ಬೆಲೆಗಿಂತ ಥಿಯೇಟರ್ ಒಳಗೆ ಬೆಲೆ ಜಾಸ್ತಿ. ಅದರಲ್ಲೂ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ಗಿಂತ ತಿಂಡಿ ಬೆಲೆಯ ದೊಡ್ಡದು.
ಚಿತ್ರಮಂದಿರದಲ್ಲಿ ಮಾರಾಟ ಮಾಡುವ ತಿಂಡಿ-ತನಿಸುಗಳ ಬೆಲೆ ಕಡಿಮೆ ಮಾಡಬೇಕು ಎಂಬ ಆಗ್ರಹ ಹೆಚ್ಚಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಹಲವು ದೂರುಗಳು ಸಹ ದಾಖಲಾಗಿರುವ ವರದಿಗಳಿವೆ. ಇದೀಗ, ಕುಡಿಯುವ ನೀರಿನ ವಿಚಾರದಲ್ಲಿ ಮದ್ರಾಸ್ ಹೈ ಕೋರ್ಟ್ ಜನಸಾಮಾನ್ಯರ ಪರವಾಗಿ ತೀರ್ಪು ನೀಡುವ ಮೂಲಕ ಥಿಯೇಟರ್ ಸಿಬ್ಬಂದಿಗೆ ಶಾಕ್ ನೀಡಿದೆ.
ಚಿತ್ರಮಂದಿರ ತೆರೆಯಲು ಮಹಾ ಸರ್ಕಾರ ಗ್ರೀನ್ ಸಿಗ್ನಲ್: ಸಾಲು-ಸಾಲು ಸಿನಿಮಾ ಬಿಡುಗಡೆ ಘೋಷಣೆ
ಹೊರಗಿನಿಂದ ತರುವ ಕುಡಿಯುವ ನೀರನ್ನು ನಿಷೇಧಿಸಿದ್ದಲ್ಲಿ ಚಿತ್ರಮಂದಿರದವರೇ ಶುದ್ಧವಾದ ಕುಡಿಯುವ ನೀರನ್ನು ಉಚಿತವಾಗಿ ಜನರಿಗೆ ನೀಡಬೇಕು. ಅದಕ್ಕೆ ದುಡ್ಡು ತೆಗೆದುಕೊಳ್ಳುವಂತಿಲ್ಲ ಎಂದು ಮದ್ರಾಸ್ ನ್ಯಾಯಾಲಯ ಸೋಮವಾರ ಸೂಚಿಸಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಅಂದ್ಹಾಗೆ, 2016ರಲ್ಲಿ ತಮಿಳುನಾಡಿನ ಜಿ ದೇವರಾಜನ್ ಎನ್ನುವ ವ್ಯಕ್ತಿ ಚಿತ್ರಮಂದಿರಗಳಲ್ಲಿ ಬೆಲೆ ಏರಿಕೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 'ಎಸ್ 2 ಚಿತ್ರಮಂದಿರಗಳ ಒಳಗಿರುವ ಆಹಾರ ಮಳಿಗೆಗಳಲ್ಲಿ ಕುಡಿಯುವ ನೀರು, ಜ್ಯೂಸ್ ಮತ್ತು ತಿಂಡಿಗಳ ಬೆಲೆ ಹೊರಗಿನ ಮಾರುಕಟ್ಟೆಯಲ್ಲಿ ಸಿಗುವುದಕ್ಕಿಂತ (ಎಂಆರ್ಪಿ) ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಕಳೆದ ನಾಲ್ಕೈದು ವರ್ಷದಿಂದ ಈ ಅರ್ಜಿ ವಿಚಾರಣೆಯಲ್ಲಿದ್ದು, ಈ ಸಂಬಂಧ ಸೋಮವಾರ ಮದ್ರಾಸ್ ಏಕ ಪೀಠ ಸದಸ್ಯ ತೀರ್ಪು ಪ್ರಕಟಿಸಿದೆ. 'ಭದ್ರತಾ ಕಾರಣಗಳಿಗಾಗಿ ಚಿತ್ರಮಂದಿರದ ಮಾಲೀಕರು ಹೊರಗಿನಿಂದ ಕುಡಿಯುವ ನೀರು ತರುವುದನ್ನು ನಿಷೇಧಿಸುವುದಾದರೆ, ಅದಕ್ಕೂ ಮುಂಚೆ ಕುಡಿಯಲು ಯೋಗ್ಯವಾದ, ಶುದ್ಧವಾದ ನೀರನ್ನು ಉಚಿತವಾಗಿ ಒದಗಿಸಬೇಕು' ಎಂದು ನ್ಯಾಯಮೂರ್ತಿ ಎಸ್ಎಂ ಸುಬ್ರಮಣ್ಯಂ ಸೂಚಿಸಿದ್ದಾರೆ.
ಮೂರು ಕಾರಣಗಳಿಗಾಗಿ, ಎರಡು ವರ್ಷದ ಬಳಿಕ ಚಿತ್ರಮಂದಿರಕ್ಕೆ ಬಂದ ರವಿಚಂದ್ರನ್
'ಚಿತ್ರಮಂದಿರದ ಆವರಣದಲ್ಲಿ ಎಲ್ಲಾ ಸಮಯದಲ್ಲೂ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಹೈಕೋರ್ಟ್ ನಿರ್ದೇಶಿಸಿದೆ. ವಾಟರ್ ಕೂಲರ್ಗಳ ಒಳಗೆ ವಾಟರ್ ಪ್ಯೂರಿಫೈಯರ್ಗಳನ್ನು ಅಳವಡಿಸಬೇಕು ಇದರಿಂದ ಚಿತ್ರಮಂದಿರದಲ್ಲಿ ಲಭ್ಯವಿರುವ ನೀರು ಕಲ್ಮಶಗಳಿಂದ ಮುಕ್ತವಾಗಿರುತ್ತದೆ. ಆ ವಾಟರ್ ಪ್ಯೂರಿಫೈಯರ್ಗಳು ಪೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರಬೇಕು ಮತ್ತು ಕಾಲಕಾಲಕ್ಕೆ ನಿಯಮಿತವಾಗಿ ಸೇವೆ ನೀಡುತ್ತಿರಬೇಕು' ಎಂದು ಕೋರ್ಟ್ ಹೇಳಿದೆ.
'ಸಿನಿಮಾ ಪ್ರದರ್ಶನ ಪ್ರಾರಂಭವಾಗುವ ಮೊದಲು ಮತ್ತು ಪ್ರದರ್ಶನದ ಉದ್ದಕ್ಕೂ, ಮಧ್ಯಂತರದಲ್ಲಿ ಸೇರಿದಂತೆ ಕುಡಿಯುವ ನೀರು ಲಭ್ಯವಿರಬೇಕು. ಯಾವುದೇ ಕಾರಣಕ್ಕಾಗಿ ನಿರ್ದಿಷ್ಟ ದಿನದಂದು ನೀರು ಪೂರೈಕೆ ಲಭ್ಯವಿಲ್ಲದಿದ್ದರೆ ಪರ್ಯಾಯ ವ್ಯವಸ್ಥೆ ಮಾಡಬೇಕು' ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಈ ಆದೇಶ ನಿರಾಕರಿಸಿದ್ದಲ್ಲಿ ಅಥವಾ ಪಾಲಿಸದೇ ಇದ್ದಲ್ಲಿ ಚಿತ್ರಮಂದಿರದ ಮಾಲೀಕರು ಅದಕ್ಕೆ ಸೂಕ್ತ ದಂಡ ಪಾವತಿಸಬೇಕಾಗುತ್ತದೆ ಎಂದು ಮದ್ರಾಸ್ ಕೋರ್ಟ್ ಎಚ್ಚರಿಸಿದೆ.