Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮಿಳು ನಟ ಅಜಿತ್ ನಿರ್ಧಾರ ಮೆಚ್ಚಿದ ರಾಜಮೌಳಿ!
ತಮಿಳು ನಟ ಅಜಿತ್ ಸೌತ್ ಚಿತ್ರರಂಗದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು. ಅಜಿತ್ಗೆ ಮಾಸ್ ಅಭಿಮಾನಿಗಳು ಇದ್ದಾರೆ. ಅಜಿತ್ ಸಿನಿಮಾಗಳಿಗೆ ಎಲ್ಲಿದ ಕ್ರೇಜ್ ಇದೆ. ಹಾಗಾಗಿ ಅಜಿತ್ ಅಭಿನಯದ ಬಹುತೇಕ ಚಿತ್ರಗಳು ಸೂಪರ್ ಹಿಟ್ ಲಿಸ್ಟ್ ಸೇರಿಕೊಳ್ಳುತ್ತವೆ. ಅವರನ್ನು ದೇವರಂತೆ ಆರಾಧಿಸುವ ಅಭಿಮಾನಿಗಳು ಕೂಡ ಇದ್ದಾರೆ.
ಆದರೆ ಅಜಿತ್ ಇತ್ತೀಚೆಗೆ ತಮ್ಮ ನಿರ್ಧಾರದಿಂದ ಅಭಿಮಾನಿಗಳಲ್ಲಿ ಬೇಸರ ತಂದಿದ್ದರು. ಅಭಿಮಾನಿಗಳು ಅಜಿತ್ ಅವರನ್ನು ಪ್ರೀತಿಯಿಂದ 'ತಲಾ' ಎಂದು ಕರೆಯುತ್ತಿದ್ದರು. ಆದರೆ ಅಜಿತ್ ತಲಾ ಎನ್ನುವ ಬಿರುದಿನಿಂದ ಕರೆಯಬಾರದು ಎಂದು ಹೇಳಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದರು.
ಆದರೂ ಅವರ ಅಪ್ಪಟ ಅಭಿಮಾನಿಗಳು ಈ ನಿರ್ಧಾರವನ್ನು ಒಪ್ಪಿದ್ದರು. ಅಜಿತ್ ಅವರದ್ದು ಸರಳ ವ್ಯಕ್ತಿತ್ವ ಹಾಗಾಗಿ ಅಜಿತ್ ಅವರು ಈ ನಿರ್ಧಾರ ಮಾಡಿದ್ದಾರೆ ಎಂದು ಸುಮ್ಮನಾದರು.
ನಾನು ಅಜಿತ್ ಅವರ ನಿರ್ಧಾರ ಮೆಚ್ಚಿದ್ದೇನೆ: ರಾಜಮೌಳಿ!
ನಿರ್ದೇಶಕ ರಾಜಮೌಳಿ ಸದ್ಯ ಆರ್ಆರ್ಆರ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ದೇಶ ಸುತ್ತಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ನಡುವೆ ತಮಿಳು ನಟ ಅಜಿತ್ ಬಗ್ಗೆ ರಾಜಮೌಳಿ ಮಾತನಾಡಿದ್ದಾರೆ. ಅಜಿತ್ ಅವರು ತಮ್ಮನ್ನು 'ತಲಾ' ಎಂದು ಕರೆಯಬಾರದು ಎಂದು ಅಭಿಮಾನಿಗಳು ಮತ್ತು ಮೀಡಿಯಾಗಳಲ್ಲಿ ಮನವಿ ಮಾಡಿದ್ದರು. ತಮ್ಮನ್ನು ಅಜಿತ್, ಎಕೆ, ಅಜಿತ್ ಕುಮಾರ್ ಅಂತ ಮಾತ್ರ ಕರೆಯಬೇಕೆಂದು ಹೇಳಿ ತಮ್ಮ ನಿರ್ಧಾರ ತಿಳಿಸಿದ್ದರು. ಈ ಬಗ್ಗೆ ಮಾತನಾಡಿದ ರಾಜಮೌಳಿ "ಅವರ ಈ ನಿರ್ಧಾರವನ್ನು ನಾನು ಮೆಚ್ಚಿದ್ದೇನೆ, ಅವರು ಸರಿಯಾಗಿರುವುದನ್ನು ಮಾಡಿದ್ದಾರೆ. ಅವರ ಕೋಟ್ಯಂತರ ಅಭಿಮಾನಿಗಳು ತಲಾ ಎಂದು ಕರೆದು ಸಂಭ್ರಮಿಸುತ್ತಾರೆ. ಆದರೆ ಅವರು ಮಾತ್ರ ತಮ್ಮನ್ನು ಗುರುತಿಸಲು ಅಜಿತ್ ಸಾಕು ಎಂದಿದ್ದಾರೆ". ಎಂದು ರಾಜಮೌಳಿ ಆರ್ಆರ್ಆರ್ ಪ್ರಚಾರದ ವೇಳೆ ಹೇಳಿಕೆ ನೀಡಿದ್ದಾರೆ.
ತಲಾ ಬಿರುದಿನಿಂದ ಅಜಿತ್-ವಿಜಯ್ ಅಭಿಮಾನಿಗಳ ನಡುವೆ ಸಮರ!
ತಮಿಳಿನಲ್ಲಿ ತಲಾ ಎನ್ನುವ ಬಿರುದು ನಟ ಅಜಿತ್ಗೆ ಮಾತ್ರವಲ್ಲ. ನಟಿ ವಿಜಯ್ಗೂ ಕೂಡ ಇದೆ. ತಮಿಳಿನಲ್ಲಿ ಅಜಿತ್ ಮತ್ತು ವಿಜಯ್ ಇಬ್ಬರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ನಡೆಯುತ್ತಲೇ ಇರುತ್ತದೆ. ಈ ಇಬ್ಬರು ಸ್ಟಾರ್ಗಳು ಕೂಡ ಆಗಾಗ ಸ್ಟಾರ್ ವಾರ್ನಿಂದಲೂ ಸುದ್ದಿ ಆಗುತ್ತಿರುತ್ತಾರೆ. ಈ ತಲಾ ಎನ್ನುವ ಬಿರುದು ಇವರ ಫ್ಯಾನ್ ವಾರ್ಗೆ ಕಾರಣ ಆದ ಉದಾಹಣೆಗಳು ಇದೆ. ಈಗ ಅಜಿತ್ ಈ ಬಿರುದು ಕೈ ಬಿಟ್ಟ ಕಾರಣ ಈಗ ಅದು ವಿಜಯ್ ಪಾಲಾಗಿದೆ.
ದೀನ ಚಿತ್ರದ ಬಳಿಕ ಅಜಿತ್ಗೆ ಸಿಕ್ಕ ಬಿರುದು 'ತಲಾ'!
ನಟ ಅಜಿತ್ಗೆ ತಲಾ ಎನ್ನುವ ಬಿರುದು 'ದೀನ' ರಿಲೀಸ್ ಆದಾಗ ನೀಡಲಾಗಿತ್ತು. ಅಜಿತ್ಗೆ 2001ರಲ್ಲಿ ತಲಾ ಎಂಬ ಬಿರುದನ್ನು ಅಭಿಮಾನಿಗಳು ನೀಡಿದ್ದರು. ಆ ಸಿನಿಮಾದಲ್ಲಿ ಅಜಿತ್ ನಿರ್ವಹಿಸಿದ್ದ ಪಾತ್ರದ ಹೆಸರು 'ತಲಾ ಧೀನದಯಾಳ್' ಎಂದು ಇಡಲಾಗಿತ್ತು. ಆ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅಜಿತ್ ಅವರನ್ನು ಅಭಿಮಾನಿಗಳು ತಲಾ ಅಜಿತ್ ಎಂದೇ ಕರೆಯಲು ಆರಂಭಿಸಿದರು. ಸಿನಿಮಾಗಳಲ್ಲಿ, ಮಾಧ್ಯಮಗಳಲ್ಲಿಯೂ ಅಜಿತ್ ಹೆಸರಿನ ಮುಂದೆ ತಲಾ ಎನ್ನುವ ಬಿರುದನ್ನು ಸೇರಿಲಾಗಿತ್ತು.
ಜನವರಿ 13ಕ್ಕೆ 'ವಲಿಮೈ' ರಿಲೀಸ್!
ನಟ ಅಜಿತ್ ಈಗ 'ವಲಿಮೈ' ಚಿತ್ರದ ರಿಲೀಸ್ಗಾಗಿ ಕಾಯುತ್ತಿದ್ದಾರೆ. ಅಜಿತ್ ಅವರ ಆ್ಯಕ್ಷನ್ ಚಿತ್ರ 'ವಲಿಮೈ'. ಈಗಾಗಲೇ ಚಿತ್ರದ ಟೀಸರ್ ಕುತೂಹಲ ಹುಟ್ಟು ಹಾಕಿದೆ. ಅಜಿತ್ ಈ ಚಿತ್ರದಲ್ಲಿ ಮ್ತ್ ಆ್ಯಕ್ಷನ್ ಮಾಡಿದ್ದಾರೆ. ಜನವರಿ 13ಕ್ಕೆ 'ವಲಿಮೈ' ತೆರೆಗೆ ಬರಲಿದೆ.