Don't Miss!
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಇಂಡಿಯನ್ 2' ದುರಂತ: ಸಿಬಿಐ ಅಧಿಕಾರಿಗಳಿಂದ ನಿರ್ದೇಶಕ ಶಂಕರ್ ವಿಚಾರಣೆ
ಯಾರೂ ನಿರೀಕ್ಷಿಸದ ದುರ್ಘಟನೆಯೊಂದು ಕಳೆದ ವಾರ ನಡೆದೇ ಹೋಯ್ತು. ಚೆನ್ನೈನಲ್ಲಿ ನಡೆಯುತ್ತಿದ್ದ 'ಇಂಡಿಯನ್-2' ಶೂಟಿಂಗ್ ಸ್ಪಾಟ್ ನಲ್ಲಿ ಆಕಸ್ಮಿಕವಾಗಿ ಕ್ರೇನ್ ಬಿದ್ದು ಮೂವರು ಸಾವನ್ನಪ್ಪಿದರು. ಒಂಬತ್ತು ಮಂದಿ ಗಾಯಗೊಂಡರು. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ನಿರ್ದೇಶಕ ಶಂಕರ್, ನಟ ಕಮಲ್ ಹಾಸನ್ ಮತ್ತು ನಟಿ ಕಾಜಲ್ ಅಗರ್ವಾಲ್ ಪಾರಾದರು.
Recommended Video
ಚಿತ್ರೀಕರಣದ ವೇಳೆ ಈ ದುರಂತ ಸಂಭವಿಸಿದ ಮೇಲೆ 'ಇಂಡಿಯನ್-2' ಶೂಟಿಂಗ್ ನಿಲ್ಲಿಸಲಾಗಿದೆ. ಜೊತೆಗೆ 'ಇಂಡಿಯನ್-2' ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಲೈಕಾ ಪ್ರೊಡಕ್ಷನ್ಸ್ ವಿರುದ್ಧ ಕೇಸ್ ದಾಖಲಾಗಿದೆ. ಈ ಪ್ರಕರಣ ಇದೀಗ ಸಿಬಿಐಗೆ ವರ್ಗಾವಣೆಗೊಂಡಿದ್ದು, ನಿರ್ದೇಶಕ ಶಂಕರ್ ರನ್ನ ವಿಚಾರಣೆಗೆ ಒಳಪಡಿಸಲಾಗಿದೆ.
'ಇಂಡಿಯನ್ 2' ಸೆಟ್ ನಲ್ಲಿ ಭೀಕರ ಅಪಘಾತ: 3 ಸಹಾಯಕ ನಿರ್ದೇಶಕರು ಮರಣ
ನಿರ್ದೇಶಕ ಶಂಕರ್ ಮತ್ತು ನಟ ಕಮಲ್ ಹಾಸನ್ ಗೆ ಸಿಬಿಐ ನಿಂದ ಸಮನ್ಸ್ ಜಾರಿ ಆಗಿದ್ದು, ನಿನ್ನೆ ಚೆನ್ನೈನ ಸಿಬಿಐ ಕಛೇರಿಗೆ ಶಂಕರ್ ಆಗಮಿಸಿದ್ದರು. ಎರಡು ಗಂಟೆಗಳಿಗೂ ಅಧಿಕ ಕಾಲ ಶಂಕರ್ ರನ್ನ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು.
'ಇಂಡಿಯನ್-2' ದುರಂತ: ಮೃತರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ನೀಡಿದ ಕಮಲ್ ಹಾಸನ್
'ಇಂಡಿಯನ್-2' ಶೂಟಿಂಗ್ ಸ್ಪಾಟ್ ನಲ್ಲಿ ನಡೆದ ದುರಂತ ನಿರ್ದೇಶಕ ಶಂಕರ್ ಗೂ ಆಘಾತ ನೀಡಿದೆ. ''ದುರ್ಘಟನೆ ಸಂಭವಿಸಿದ ಕ್ಷಣದಿಂದ ನಾನು ಶಾಕ್ ನಲ್ಲಿದ್ದೇನೆ. ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಆ ಕ್ರೇನ್ ನನ್ನ ಮೇಲೆ ಬಿದ್ದಿದ್ದರೆ ಚೆನ್ನಾಗಿರುತ್ತಿತ್ತು'' ಎಂದು ಭಾವೋದ್ವೇಗದಿಂದ ನಿರ್ದೇಶಕ ಶಂಕರ್ ಟ್ವೀಟ್ ಮಾಡಿದ್ದರು.
'ಇಂಡಿಯನ್-2' ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನಟ ಕಮಲ್ ಹಾಸನ್ ತಲಾ ಒಂದು ಕೋಟಿ ರೂಪಾಯಿ ನೀಡಿದ್ದಾರೆ.