Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ವಿಷ್ಣು ವಿಶಾಲ್ ಬರ್ಥಡೇಗಾಗಿ 600 ಕಿ.ಮೀ. ಪ್ರಯಾಣಿಸಿದ ಪ್ರೇಯಸಿ ಜ್ವಾಲಾ ಗುಟ್ಟಾ
ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ತಮಿಳು ನಟ ವಿಷ್ಣು ವಿಶಾಲ್ ಪ್ರೇಮ ಪ್ರಸಂಗ ಗುಟ್ಟಾಗೇನೂ ಉಳಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಿಬ್ಬರ ಫೋಟೊಗಳನ್ನು ಮುಚ್ಚುಮರೆಯಿಲ್ಲದೆ ಶೇರ್ ಮಾಡುತ್ತಿರುವ ಇಬ್ಬರೂ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಮದುವೆಯಾಗುವುದಾಗಿ ಜ್ವಾಲಾ ತಿಳಿಸಿದ್ದರು. ಆದರೆ ಅಷ್ಟರಲ್ಲಿ ಕೊರೊನಾ ವೈರಸ್ ಲಾಕ್ಡೌನ್ ಬಂದಿದ್ದರಿಂದ ಮದುವೆ ಸುದ್ದಿ ತಣ್ಣಗಾಗಿತ್ತು.
Recommended Video
ಆದರೆ ಈ ಸಂಕಷ್ಟದ ನಡುವೆಯೂ ಪ್ರೇಮಿಗಾಗಿ ಜ್ವಾಲಾ ಗುಟ್ಟಾ ಮಾಡಿರುವ ಕಾರ್ಯ ಅಚ್ಚರಿ ಮೂಡಿಸುತ್ತದೆ. ಕೆಲವು ದಿನಗಳ ಹಿಂದಷ್ಟೇ ಜನ್ಮದಿನ ಆಚರಿಸಿಕೊಂಡ ಗೆಳೆಯ ವಿಷ್ಣು ವಿಶಾಲ್ ಅವರಿಗೆ ಶುಭಾಶಯ ಕೋರುವ ಸಲುವಾಗಿಯೇ ಜ್ವಾಲಾ, ಹೈದರಾಬಾದ್ನಿಂದ ಚೆನ್ನೈಗೆ ಪ್ರಯಾಣಿಸಿದ್ದಾರಂತೆ. ಮುಂದೆ ಓದಿ..
ಯುವ ನಟನೊಂದಿಗೆ ಕಾಜಲ್ ಅಗರ್ವಾಲ್ ಪ್ರೀತಿ-ಪ್ರೇಮ-ಪ್ರಣಯ!?
ವಿಷ್ಣು ಬರ್ಥಡೇಗಾಗಿ ಚೆನ್ನೈಗೆ
ಜುಲೈ 17ರಂದು ವಿಷ್ಣು ವಿಶಾಲ್ 36ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಒಂದು ವರ್ಷದಿಂದಲೂ ಹೆಚ್ಚು ಸಮಯದಿಂದ ಡೇಟಿಂಗ್ ನಡೆಸುತ್ತಿರುವ ಜ್ವಾಲಾ, ತಮ್ಮ ಪ್ರಿಯಕರನ ಜನ್ಮದಿನಕ್ಕೆ ವಿಶೇಷ ಉಡುಗೊರೆ ನೀಡಲು ಸುಮಾರು 600 ಕಿ.ಮೀ. ದೂರ ಪ್ರಯಾಣಿಸಿ ತೆರಳಿದ್ದಾರೆ.
ವಿಷ್ಣು ಜತೆ ಸಮಯ ಕಳೆದ ಜ್ವಾಲಾ
ಒಂದು ವಾರದ ಹಿಂದೆಯೇ ಚೆನ್ನೈಗೆ ತೆರಳಿದ್ದ ಜ್ವಾಲಾ, ವಿಷ್ಣು ಜೊತೆ ಸಮಯ ಕಳೆದಿದ್ದಾರೆ. ಈ ವಿಶೇಷ ಸಂದರ್ಭದ ಫೋಟೊಗಳನ್ನು ವಿಷ್ಣು ಹಂಚಿಕೊಂಡಿದ್ದು, ನನ್ನ ಜನ್ಮದಿನದ ಸರ್ಪ್ರೈಸ್ ಎಂದು ಹೇಳಿಕೊಂಡಿದ್ದಾರೆ. ವಿಷ್ಣು ಕುಟುಂಬದವರ ಜತೆಯಲ್ಲಿ ಜನ್ಮದಿನ ಆಚರಿಸಿದ್ದಾರೆ. ಜ್ವಾಲಾ, ಸೆಲ್ಫಿಯೊಂದನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದು, ಹ್ಯಾಪಿ ಬರ್ಥಡೇ ಬೇಬಿ ಎಂದು ಬರೆದುಕೊಂಡಿದ್ದಾರೆ.
ಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾ
ಇಬ್ಬರೂ ವಿಚ್ಛೇದಿತರು
ಕಳೆದ ವರ್ಷ ತಾವಿಬ್ಬರೂ ಡೇಟಿಂಗ್ ನಡೆಸುತ್ತಿರುವುದನ್ನು ಈ ಜೋಡಿ ಬಹಿರಂಗಪಡಿಸಿತ್ತು. ಮೊದಲ ಮದುವೆಗಳಿಂದ ವಿಚ್ಛೇದನ ಪಡೆದಿರುವ ಇಬ್ಬರೂ ಹೊಸ ಸಾಂಸಾರಿಕ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ. ಆದರೆ ಮದುವೆಯ ದಿನಾಂಕ ಇನ್ನೂ ಬಹಿರಂಗಪಡಿಸಿಲ್ಲ.
ಪ್ರೀತಿಸಿ ಮದುವೆಯಾಗಿದ್ದ ವಿಷ್ಣು
ವಿಷ್ಣು ಕ್ರಿಕೆಟ್ ಆಟಗಾರನಾಗಿದ್ದು, ಗಾಯದ ಕಾರಣದಿಂದ ಕ್ರೀಡಾ ಬದುಕು ತೊರೆದು ನಟನೆಗೆ ಬಂದಿದ್ದರು. ಕಾಲೇಜಿನಲ್ಲಿ ರಜಿನಿ ನಟರಾಜ್ ಜತೆ ಪ್ರೀತಿಯಲ್ಲಿ ಬಿದ್ದಿದ್ದ ವಿಷ್ಣು, 2011ರಲ್ಲಿ ಮದುವೆಯಾಗಿದ್ದರು. ನಟ ಕೆ. ನಟರಾಜ್ ಅವರ ಮಗಳು ರಜಿನಿ, ವಸ್ತ್ರವಿನ್ಯಾಸಕಿಯಾಗಿದ್ದಾರೆ. ಇಬ್ಬರಿಗೂ ಆರ್ಯ ಎಂಬ ಮೂರು ವರ್ಷದ ಮಗನಿದ್ದಾನೆ. 2018ರಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರು.
ಚೇತನ್ ಆನಂದ್ ಜತೆ ಮದುವೆ
ಜ್ವಾಲಾ ಗುಟ್ಟಾ ಕೂಡ ಮೊದಲ ಮದುವೆಯ ಬಂಧನವನ್ನು ಕಡಿದುಕೊಂಡಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಅವರನ್ನು 2005ರಲ್ಲಿ ಮದುವೆಯಾಗಿದ್ದ ಇಬ್ಬರೂ 2011ರಲ್ಲಿ ದೂರವಾಗಿದ್ದರು. ಆಗ ಜ್ವಾಲಾ ಹೆಸರು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಜತೆ ಕೇಳಿಬಂದಿತ್ತು. ಇಬ್ಬರೂ ಅದನ್ನು ನಿರಾಕರಿಸಿದ್ದರು.