Don't Miss!
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಮಲ್ ಹಾಸನ್ 'ಉತ್ತಮ ವಿಲನ್' ಬೆಳಗಿನ ಆಟ ರದ್ದು
ಅದ್ವಿತೀಯ ಕಲಾವಿದ ಕಮಲ್ ಹಾಸನ್ ಚಿತ್ರಗಳೆಂದರೆ ವಿವಾದ ತಪ್ಪಿದ್ದಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಕಾರ್ಮಿಕರ ದಿನದಂದು (ಮೇ.1) ತೆರೆಕಂಡಿರುವ ಅವರ ಉತ್ತಮ ವಿಲನ್ ಚಿತ್ರದ ಬೆಳಗಿನ ಆಟ ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ರದ್ದಾಗಿದೆ.
ಸಾಕಷ್ಟು ಮುಂಗಡವಾಗಿಯೇ ಕಮಲ್ ಅಭಿಮಾನಿಗಳು ಟಿಕೆಟ್ ಗಳನ್ನು ಕಾದಿರಿಸಿದ್ದರು. ರಜೆ ಇದ್ದ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಥಿಯೇಟರ್ ಗೆ ಹೋದ ಚಿತ್ರ ರಸಿಕರಿಗೆ ನಿರಾಸೆ ಕಾದಿತ್ತು. ಬೆಳಗಿನ ಶೋ ಕ್ಯಾನ್ಸಲ್ ಆಗಿದ್ದು ಅಭಿಮಾನಿಗಳು ಮುಂದಿನ ಶೋಗಾಗಿ ಕಾಯುವಂತಾಯಿತು. [ಆರ್ಥಿಕ ಬಿಕ್ಕಟ್ಟಿನಲ್ಲಿ ಕಮಲ್ ಹಾಸನ್ 'ಉತ್ತಮ ವಿಲನ್']
ಕಳೆದ ಕೆಲ ತಿಂಗಳಿಂದ ಚಿತ್ರದ ನಿರ್ಮಾಪಕರು ಹಾಗೂ ಫೈನಾನ್ಸಿಯರ್ ಗಳ ನಡುವಿನ ಹಣಕಾಸು ಸಮಸ್ಯೆಯೇ ಶೋ ರದ್ದಾಗಲು ಕಾರಣ ಎಂದು ಊಹಿಸಲಾಗಿದೆ. ಬಹುಶಃ ಈ ಸಮಸ್ಯೆ ಶೀಘ್ರ ಇತ್ಯರ್ಥವಾಗಿ ಶೋ ಆರಂಭವಾಗುವ ಸಾಧ್ಯತೆಗಳಿವೆ ಎಂದು ಚಿತ್ರದ ವಿತರಕರೊಬ್ಬರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಮೇಶ್ ಅರವಿಂದ್ ನಿರ್ದೇಶನದ ಈ ಚಿತ್ರ ಹಲವಾರು ಕಾರಣಗಳಿಗಾಗಿ ನಿರೀಕ್ಷಿಸುವಂತೆ ಮಾಡಿತ್ತು. ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 8ನೇ ಶತಮಾನದ ಒಬ್ಬ ಕಲಾವಿದ ಹಾಗೂ ಇಂದಿನ ಸೂಪರ್ ಸ್ಟಾರ್ ಒಬ್ಬನ ಕಥೆಯನ್ನು ಚಿತ್ರ ಒಳಗೊಂಡಿದೆ. (ಏಜೆನ್ಸೀಸ್)