Don't Miss!
- Sports ಕಮಿನ್ಸ್ ಟೆನ್ಷನ್ ಹೆಚ್ಚಿಸಿದ ಸ್ಟಾರ್ ಪ್ಲೇಯರ್ ನಿರ್ಧಾರ: ಎಸ್ಆರ್ಎಚ್ ತಂಡಕ್ಕೆ ಆರಂಭದಲ್ಲೇ ಪೆಟ್ಟು
- Lifestyle ಪಳ ಪಳ ಹೊಳೆಯುವ ಕೆಂಪು ನಾಗರ ನೋಡಿದ್ದೀರಾ..? ವೈರಲ್ ಆಗ್ತಿದೆ ವಿಡಿಯೋ..!
- Technology ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
- News ಜಗದೀಶ್ ಶೆಟ್ಟರ್ಗೆ ಬೆಳಗಾವಿ ಸ್ಪರ್ಧೆ ಮತ್ತಷ್ಟು ಜಟೀಲ: ಗೋಬ್ಯಾಕ್ ಅಭಿಯಾನ ಯಶಸ್ವಿ ಆಯ್ತಾ?
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯ್ಯಯ್ಯೋ... ನಟ, ನಿರ್ದೇಶಕ ನಾಗಶೇಖರ್ ಗೆ ಇದೇನಾಯ್ತು.?
Recommended Video
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವವರು ನಾಗಶೇಖರ್. 'ಮೈನಾ', 'ಸಂಜು ವೆಡ್ಸ್ ಗೀತಾ', 'ಅರಮನೆ' ಮುಂತಾದ ಚಿತ್ರಗಳಿಗೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ನಟಿಸಿದ ಚೊಚ್ಚಲ ಚಿತ್ರ 'ಅಮರ್'ಗೂ ಇದೇ ನಾಗಶೇಖರ್ ಡೈರೆಕ್ಟರ್. ಅಸಲಿಗೆ, 'ಅಮರ್' ಚಿತ್ರದ ಬಳಿಕ ನಾಗಶೇಖರ್ ಗಾಂಧಿನಗರ ಅಷ್ಟಾಗಿ ಕಾಣಿಸಿಕೊಂಡಿಲ್ಲ.
ನಾಗಶೇಖರ್ ಮುಂದಿನ ಚಿತ್ರದ ಬಗ್ಗೆಯೂ ಸುದ್ದಿ ಕೇಳಿಬಂದಿಲ್ಲ. ಹೀಗಿರುವಾಗಲೇ, ನಾಗಶೇಖರ್ ರವರ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾವುದು ಆ ಫೋಟೋ ಅಂತೀರಾ.? ನೀವೇ ನೋಡಿ...
ಇದೇ ನೋಡಿ ಆ ಫೋಟೋ
ಸೀಳಾಗಿರುವ ತುಟಿ, ಒಡೆದ ಹಲ್ಲು, ಕೊಂಚ ಊದಿರುವ ಮುಖ.. ನಾಗಶೇಖರ್ ರವರ ಈ ಫೋಟೋ ನೋಡಿದ ಕೂಡಲೆ ತಲೆಯಲ್ಲಿ ಹತ್ತಾರು ಅನುಮಾನಗಳು ಮೂಡುವುದು ಸಹಜ. ಆದ್ರೆ, ವಾಸ್ತವವೇ ಬೇರೆ ಇದೆ.
ಬಾಲಿವುಡ್ ನ ಖ್ಯಾತ ನಿರ್ಮಾಪಕನ ಪುತ್ರನಿಗೆ ನಾಗಶೇಖರ್ ನಿರ್ದೇಶನ
ಮೇಕಪ್ ಅಷ್ಟೇ.!
ಮುಖಕ್ಕೆ ಪೆಟ್ಟಾಗಿರುವ ರೀತಿ ನಾಗಶೇಖರ್ ಕಾಣಿಸಿಕೊಂಡಿರುವುದು ಸಿನಿಮಾಗಾಗಿ.! ಹೌದು, ನಾಗಶೇಖರ್ ಗೆ ರಿಯಲ್ ಲೈಫ್ ನಲ್ಲಿ ಮುಖಕ್ಕೆ ಏಟು ಬಿದ್ದಿಲ್ಲ. ಹೊಸ ಚಿತ್ರವೊಂದಕ್ಕಾಗಿ ಆ ರೀತಿ ಮೇಕಪ್ ಮಾಡಿಕೊಂಡಿದ್ದಾರೆ ಅಷ್ಟೆ.!
ಸಂಜು ವೆಡ್ಸ್ ಗೀತಾ-2 ಏನಾಯ್ತು? ಅದೇ ಕಥೆನಾ ಇದು.!
ಕಾಲಿವುಡ್ ನಲ್ಲಿ ನಾಗಶೇಖರ್.!
ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಾಗಶೇಖರ್ ಇದೀಗ ಕಾಲಿವುಡ್ ನತ್ತ ಹೆಜ್ಜೆ ಇಟ್ಟಿದ್ದಾರೆ. 'ನವೆಂಬರ್ ಮಳೈಯಿಲ್ ನಾನುಂ ಅವಳುಂ' ಎಂಬ ತಮಿಳು ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದಾರೆ. ಇದೇ ಚಿತ್ರದ ಪಾತ್ರವೊಂದಕ್ಕಾಗಿ ಬಣ್ಣ ಹಚ್ಚಿರುವ ನಾಗಶೇಖರ್ ಸೀಳು ತುಟಿ ಹೊಂದಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
'ಅಮರ್' ಸಿನಿಮಾ ನಂತರ ಹೊಸ ಸಿನಿಮಾ ಅನೌನ್ಸ್ ಮಾಡಿದ ನಾಗಶೇಖರ್
ಕನ್ನಡ ಸಿನಿಮಾ ಕಥೆ.?
ಅಂದ್ಹಾಗೆ, ಕನ್ನಡದಲ್ಲಿ 'ನವೆಂಬರ್ ನಲ್ಲಿ ನಾನು ಅವಳು' ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದರು. ಇದೇ ಚಿತ್ರದಲ್ಲಿ ರವಿಚಂದ್ರನ್ ಪುತ್ರ ವಿಕ್ರಮ್ ನಟಿಸುತ್ತಿದ್ದರು. ಈ ಚಿತ್ರ ನಿಂತು ಹೋಗಿದೆ ಎಂಬ ಮಾತು ಗಾಂಧಿನಗರದಲ್ಲಿದೆ. ಆದ್ರೀಗ, ಇದೇ ಚಿತ್ರದ ಕಥೆಯನ್ನು ಇಟ್ಟುಕೊಂಡು ತಮಿಳಿನಲ್ಲಿ ನಾಗಶೇಖರ್ ನಿರ್ದೇಶನ ಮಾಡುತ್ತಿರುವ ಹಾಗಿದೆ. ತಮಿಳಿನ 'ನವೆಂಬರ್ ಮಳೈಯಿಲ್ ನಾನುಂ ಅವಳುಂ' ಚಿತ್ರದ ನಾಯಕ-ನಾಯಕಿ ಯಾರು ಎಂಬುದು ತಿಳಿದು ಬಂದಿಲ್ಲ.