Don't Miss!
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- News Mukhtar Ansari: ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಯ್ ಸೇತುಪತಿ-ಶ್ರುತಿ ಹಾಸನ್ ಸಿನಿಮಾ ಚಿತ್ರೀಕರಣ ಸೆಟ್ಗೆ ಪೊಲೀಸ್ ಭದ್ರತೆ!
ನಟ ವಿಜಯ್ ಸೇತುಪತಿ ಹಾಗೂ ಶ್ರುತಿ ಹಾಸನ್ ನಟಿಸುತ್ತಿರುವ 'ಲಾಭಂ' ಸಿನಿಮಾದ ಚಿತ್ರೀಕರ ಕೃಷ್ಣಗಿರಿಯಲ್ಲಿ ನಡೆಯುತ್ತಿದ್ದು, ಚಿತ್ರೀಕರಣ ಸೆಟ್ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆಯಂತೆ.
ಕೆಲವು ದಿನಗಳ ಹಿಂದಷ್ಟೆ ನಟಿ ಶ್ರುತಿ ಹಾಸನ್ ಚಿತ್ರೀಕರಣ ಸೆಟ್ ಬಿಟ್ಟು ಹೋಗಿಬಿಟ್ಟಿದ್ದರು. ಸೆಟ್ಗೆ ಬಹಳ ಮಂದಿ ಅಭಿಮಾನಿಗಳು ಬರುತ್ತಿದ್ದು, ಅವರನ್ನು ನಟ ವಿಜಯ್ ಸೇತುಪತಿ ಮಾತನಾಡಿಸುವುದು, ಕೈಕುಲುಕುವುದು ಮಾಡುತ್ತಿರುತ್ತಾರೆ, ಇದು ಕೋವಿಡ್ ನಿಯಮದ ಉಲ್ಲಂಘನೆ ಎಂದು ಹೇಳಿ ಅವರು ಹೀಗೆ ಮಾಡಿದ್ದರು.
ಈ ಬಗ್ಗೆ ಟ್ವೀಟ್ ಸಹ ಮಾಡಿದ್ದ ಶ್ರುತಿ ಹಾಸನ್, 'ನನ್ನ ಆರೋಗ್ಯ ಕಾಪಾಡಿಕೊಳ್ಳುವ ಹಕ್ಕು ನನಗಿದೆ. ಇನ್ನೂ ಕೊರೊನಾ ಮುಗಿದಿಲ್ಲ, ಬೇಜವಬ್ದಾರಿಯುತ ವರ್ತನೆಯನ್ನು ಸಹಿಸಲಾಗಲು' ಎಂದು ಶ್ರುತಿ ಹೇಳಿದ್ದರು.
ಇದೀಗ ಚಿತ್ರೀಕರಣ ಸೆಟ್ಗೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಚಿತ್ರೀಕರಣ ನೋಡಲು ಬರುವ ಜನರನ್ನು ನಿಯಂತ್ರಿಸಲು ನಿರ್ಮಾಪಕರು ಪೊಲೀಸರ ನೆರವು ಪಡೆಯುತ್ತಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದಲೂ ಚಿತ್ರತಂಡ ಬೀಡು ಬಿಟ್ಟಿದ್ದು, ಇಲ್ಲಿಯೇ ಭರದಿಂದ ಚಿತ್ರೀಕರಣ ಸಾಗಿದೆ. ಕೆಲವು ದೃಶ್ಯಗಳ ಜೊತೆಗೆ ಹಾಡಿನ ಚಿತ್ರೀಕರಣ ಸಹ ಇಲ್ಲಿಯೇ ನಡೆಯುತ್ತಿದೆ.
Recommended Video
ಲಾಭಂ ಸಿನಿಮಾವನ್ನು ಎಸ್ಪಿ ಜ್ಞಾನನಾಥನ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪತಿ, ಶ್ರುತಿ ಹಾಸನ್ ಹೊರತಾಗಿ, ಜಗಪತಿ ಬಾಬು, ಸಾಯಿ ಧನ್ಸಿಕಾ, ಕಲೈಯರಸನ್ ಇನ್ನೂ ಹಲವರಿದ್ದಾರೆ. ಸಿನಿಮಾವನ್ನು ಪಿ ಆರುಮುಗಂ ಕುಮಾರ್ ನಿರ್ಮಿಸುತ್ತಿದ್ದಾರೆ.