Keerthy Suresh: ಪೊಲಿಟಿಕಲ್ ಎಂಟ್ರಿ ಸುಳಿವು ಕೊಟ್ರಾ ಮಹಾನಟಿ ಕೀರ್ತಿ ಸುರೇಶ್?
ಬಹುಭಾಷಾ ನಟಿ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದ್ಕಡೆ ಗ್ಲಾಮರಸ್ ರೋಲ್ಗಳಲ್ಲಿ ಮಿಂಚುತ್ತಿರುವ ಬೆಡಗಿ ಮತ್ತೊಂದು ಕಡೆ ನಟನೆಗ ಮಹತ್ವ ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 'ರಘುತಾತ', 'ರಿವಾಲ್ವರ್ ರೀಟಾ' ರೀತಿಯ ಮಹಿಳಾ ಪ್ರಧಾನ ಚಿತ್ರಗಳಲ್ಲೂ ನಟಿಸ್ತಿದ್ದಾರೆ. ಇದೆಲ್ಲದರ ನಡುವೆ ಕೀರ್ತಿ ಸುರೇಶ್ ರಾಜಕೀಯರಂಗಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
ಸಿನಿಮಾಗಳ ಜೊತೆಗೆ ಕೀರ್ತಿ ಸುರೇಶ್ ಲವ್ ಮಾಡ್ತಿದ್ದಾರಾ? ಈತನೇ ಪ್ರಿಯಕರ? ದಳಪತಿ ವಿಜಯ್ ದಾಂಪತ್ಯದಲ್ಲಿ ಹುಳಿ ಹಿಂಡಿದ್ದಾರೆ? ಹೀಗೆ ಅಂತೆ ಕಂತೆಯ ವದಂತಿಗಳಿಂದ ಪದೇ ಪದೇ ಸುದ್ದಿ ಆಗ್ತಿದ್ದಾರೆ. ಇಂತಹ ಸುದ್ದಿ ಕೇಳಿದ್ರೆ ಬೇಸರವಾಗುತ್ತದೆ, ಮದುವೆ, ಡೇಟಿಂಗ್ ಬಗ್ಗೆ ಏನಾದರೂ ವಿಷಯ ಇದ್ದರೆ ನಾನೇ ಹೇಳ್ತೀನಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲದರ ನಡುವೆ ಮಹಾನಟಿ ನಟನೆಯ ತಮಿಳಿನ 'ಮಾಮನನ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಚಿತ್ರದಲ್ಲಿ ಉದಯನಿಧಿ ಸ್ಟಾಲಿನ್ ಜೊತೆ ಕೀರ್ತಿ ನಟಿಸಿದ್ದಾರೆ.

ಮಾರಿ ಸೆಲ್ವರಾಜ್ ನಿರ್ದೇಶನದ 'ಮಾಮನನ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇದು ನಟನಾಗಿ ನನ್ನ ಕೊನೆಯ ಸಿನಿಮಾ ಎಂದು ಈಗಾಗಲೇ ಉದಯನಿಧಿ ಹೇಳಿದ್ದು ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ತಮಿಳುನಾಡು ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡುತ್ತಿರುವ ಉದಯನಿಧಿ ಇನ್ಮುಂದೆ ಸಂಪೂರ್ಣವಾಗಿ ರಾಜಕೀರಂಗದಲ್ಲಿ ಮುಂದುವರೆಯಲು ನಿರ್ಧರಿಸಿದ್ದಾರೆ.
ಕೀರ್ತಿ ಸುರೇಶ್ ಪೊಲಿಟಿಕಲ್ ಎಂಟ್ರಿ?
'ಮಾಮನನ್' ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ಕೀರ್ತಿ ಸುರೇಶ್ ಮಾತನಾಡಿದ್ದಾರೆ. "ಇದು ರಾಜಕೀಯ ಹಿನ್ನಲೆಯ ಸಿನಿಮಾ. ಇಲ್ಲಿ ನಾನು ಬಹಳ ಗಂಭೀರ ಪಾತ್ರದಲ್ಲಿ ನಟಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಇಂತಹ ಪಾತ್ರ ಮಾಡಿರಲಿಲ್ಲ. ಇನ್ನು ರಾಜಕೀಯರಂಗಕ್ಕೆ ಬರುವ ಆಲೋಚನೆ ಇದ್ಯಾ ಎಂದು ಕೇಳುತ್ತಿದ್ದಾರೆ. ಆ ವಿಚಾರದ ಬಗ್ಗೆ ಆಲೋಚಿಸಬೇಕಿದೆ" ಎಂದು ಹೇಳಿದ್ದಾರೆ. ಇದನ್ನು ಕೇಳಿ ಕೀರ್ತಿ ಪೊಲಿಟಿಲ್ ಎಂಟ್ರಿ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಕಾಲಿವುಡ್ನಲ್ಲಿ ಬಿಸಿಬಿಸಿ ಚರ್ಚೆ
ಉದಯನಿಧಿ ಸ್ಟಾಲಿನ್ ಜೊತೆ ಕೀರ್ತಿ 'ಮಾಮನನ್' ಚಿತ್ರದಲ್ಲಿ ನಟಿಸಿದ್ದಾರೆ. ಇಬ್ಬರ ನಡುವೆ ಒಳ್ಳೆ ಸ್ನೇಹ ಇದೆ. ಉದಯನಿಧಿ ಸ್ಟಾಲಿನ್ ತಮಿಳುನಾಡು ಸರ್ಕಾರದ ಸಚಿವರಾಗಿಯೂ ಇದ್ದಾರೆ. ಹಾಗಾಗಿ ಕೀರ್ತಿ ಕೂಡ ರಾಜಕೀಯರಂಗಕ್ಕೆ ಬರಬಹುದು. ಕೊನೆ ಪಕ್ಷ ಮುಂದಿನ ಚುನಾವಣೆ ಪ್ರಚಾರಗಳಲ್ಲಿ ಮಹಾನಟಿ ಭಾಗಿ ಆಗಬಹುದು ಎನ್ನುವ ಗುಸುಗುಸು ಕೇಳಿಬರ್ತಿದೆ.
ಬಿಜೆಪಿಗೆ ಸೇರುವುದಾಗಿ ವದಂತಿ
ಕೀರ್ತಿ ಸುರೇಶ್ ಪೊಲಿಟಿಕಲ್ ಎಂಟ್ರಿ ಬಗ್ಗೆ ವದಂತಿ ಇದೇ ಮೊದಲಲ್ಲ. 4 ವರ್ಷಗಳ ಹಿಂದೆ ಮಹಾನಟಿ ಬಿಜೆಪಿ ಪಕ್ಷ ಸೇರುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಈ ಬಗ್ಗೆ ಆಕೆಯ ತಾಯಿ ಮೇನಕಾ ಪ್ರತಿಕ್ರಿಯಿಸಿ ಅದೆಲ್ಲಾ ಸುಳ್ಳು ವದಂತಿ. ಅಂತಹ ಆಲೋಚನೆ ಆಕೆಗೆ ಇಲ್ಲವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
5 ಸಿನಿಮಾಗಳಲ್ಲಿ ಮಹಾನಟಿ
'ಮಾಮನನ್' ಬಿಟ್ಟರೆ ತೆಲುಗಿನ 'ಭೋಳಾ ಶಂಕರ್' ಚಿತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಆ ಚಿತ್ರದಲ್ಲಿ ಚಿರಂಜೀವಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಸಂಸ್ಥೆ ನಿರ್ಮಾಣದ 'ರಘುತಾತ' ಸಿನಿಮಾ ಚಿತ್ರೀಕರಣ ಮುಗಿದಿದೆ. 'ಸಿರೇನ್' ಹಾಗೂ 'ರಿವಾಲ್ವರ್ ರೀಟಾ' ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ಚೆನ್ನೈ ಚೆಲುವೆ ಬಣ್ಣ ಹಚ್ಚಿದ್ದಾರೆ.


Click it and Unblock the Notifications











