Don't Miss!
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀವನ ಸಾಗಿಸಲು ದಿನಸಿ ಅಂಗಡಿ ತೆರೆದ ಸಿನಿಮಾ ನಿರ್ದೇಶಕ
ಕೊರೊನಾ ವೈರಸ್ ಚಿತ್ರರಂಗದ ಮೇಲೆ ಭಾರಿ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಸಿನಿಮಾವನ್ನೇ ನಂಬಿಕೊಂಡಿದ್ದ ಲಕ್ಷಾಂತರ ಮಂದಿಗೆ ಆದಾಯವೇ ಇಲ್ಲದಂತೆ ಮಾಡಿದೆ.
Recommended Video
ಲಾಕ್ಡೌನ್ ಪ್ರಾರಂಭವಾದ ಆರಂಭದಲ್ಲಿ ಕೇವಲ ಸಿನಿಮಾ ದಿನಗೂಲಿ ನೌಕರರು, ಕೆಳಹಂತದ ತಂತ್ರಜ್ಞರು, ನೌಕರರು ಮಾತ್ರವೇ ಕಷ್ಟದಲ್ಲಿದ್ದರು. ಆದರೆ ಲಾಕ್ಡೌನ್ ಮುಂದುವರೆದಂತೆ ಮೇಲ್ಹಂತದವರೂ ಕಷ್ಟಕ್ಕೆ ಸಿಲುಕಿದ್ದಾರೆ.
ನಟಿ ನವ್ಯಾ ಸ್ವಾಮಿ ಸಹ ನಟ ರವಿಕೃಷ್ಣಗೆ ಕೊರೊನಾ ಪಾಸಿಟಿವ್: ನಟ ಹೇಳಿದ್ದೇನು?
ನಿರ್ದೇಶಕರು, ನಟ-ನಟಿಯರೂ, ನಿರ್ಮಾಪಕರೂ ಸಹ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ತಮಿಳು ಸಿನಿಉದ್ಯಮದಲ್ಲಿ ಹತ್ತು ವರ್ಷ ಕೆಲಸ ಮಾಡಿದ ನಿರ್ದೇಶಕ ಜೀವನ ಸಾಗಿಸಲು ದಿನಸಿ ಅಂಗಡಿ ತೆರೆದಿರುವುದು.
ಹತ್ತು ವರ್ಷಗಳಿಂದ ಸಿನಿರಂಗದಲ್ಲಿರುವ ಆನಂದ್
ತಮಿಳು ಸಿನಿಮಾ ಕಳೆದ ಹತ್ತು ವರ್ಷಗಳಿಂದ ದುಡಿದಿರುವ ನಿರ್ದೇಶಕ ಆನಂದ್ ಜೀವನ ನಡೆಸಲು ದಿನಸಿ ಅಂಗಡಿಯನ್ನು ತೆರೆದಿದ್ದಾರೆ. ಚೆನ್ನೈ ನಿವಾಸಿ ಆಗಿರುವ ಅವರು, ಚೆನ್ನೈನ ಮೋಲಿವಕ್ಕುಂ ನಲ್ಲಿ ಅಂಗಡಿ ತೆರೆದಿದ್ದಾರೆ.
ಜೀವನ ಸಾಗಿಸಲು ದಿನಸಿ ಅಂಗಡಿ
'ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದು ನೋಡಿದರೆ ಒಂದು ವರ್ಷದ ವರೆಗೆ ಚಿತ್ರಮಂದಿರಗಳು ತೆರೆಯುವುದಿಲ್ಲವೆನಿಸುತ್ತದೆ. ಅಲ್ಲಿಯವರೆಗೆ ನಮಗೆ ಉದ್ಯೋಗ ಇರುವುದಿಲ್ಲ, ಹಾಗಾಗಿ ಜೀವನ ಸಾಗಿಸಲು ದಿನಸಿ ಅಂಗಡಿ ತೆರೆದಿದ್ದೇನೆ' ಎಂದಿದ್ದಾರೆ ಆನಂದ್.
ಕೊರೊನಾ ವೈರಸ್ಗೆ ತೆಲುಗಿನ ಪ್ರಮುಖ ಸಿನಿಮಾ ನಿರ್ಮಾಪಕ ಬಲಿ
ಶಾಲೆ, ಜಿಮ್, ಬೀಚ್ ತೆರೆದ ಮೇಲೆ ಚಿತ್ರಮಂದಿರ
ಮೊದಲಿಗೆ ಶಾಲೆಗಳು, ಜಿಮ್ಗಳು, ಪಾರ್ಕ್ಗಳು, ಬೀಚ್ಗಳು ತೆರೆಯಬೇಕು ಆ ನಂತರವೇ ಚಿತ್ರಮಂದಿರಗಳನ್ನು ತೆಗೆಯುತ್ತಾರೆ. ಇದೆಲ್ಲವೂ ಆಗುವ ವೇಳೆಗೆ ಒಂದು ವರ್ಷವಾಗಿರುತ್ತದೆ ಹಾಗಾಗಿ ಈ ನಡುವೆ ಲಾಭವಿರುವುದು ದಿನಸಿ ಅಂಗಡಿಗಳಿಗೆ ಮಾತ್ರ ಹಾಗಾಗಿ ದಿನಸಿ ಅಂಗಡಿ ತೆರೆದಿದ್ದೇನೆ ಎಂದಿದ್ದಾರೆ ಆನಂದ್.
ಕೆಲವು ಸಿನಿಮಾ ನಿರ್ದೇಶಿಸಿದ್ದಾರೆ
ಆನಂದ್ ಅವರು ಕಡಿಮೆ ಬಜೆಟ್ನ ಸಿನಿಮಾಗಳನ್ನು ತೆಗೆಯುವುದಕ್ಕೆ ಖ್ಯಾತರು. 'ಒರು ಮಳೈ ನಂಗು ಸಾರಲ್', 'ಮೌನ ಮಳೈ' ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ 'ತುನಿಂತು ಸೇಯ್' ಸಿನಿಮಾ ನಿರ್ದೇಶಿಸಿದ್ದು ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಈ ನಡುವೆ ಕೊರೊನಾ ಬಂದ ಕಾರಣ ಚಿತ್ರೀಕರಣ ಬಂದ್ ಆಗಿದೆ.
ಕೊರೊನಾ ಪಾಸಿಟಿವ್ ಬಂದ ಕನ್ನಡದ ನಟಿ ನವ್ಯಾ ಸ್ವಾಮಿ ಹೇಳುವುದೇನು? ಇಲ್ಲಿದೆ ನವ್ಯಾ ಮಾತು