twitter
    For Quick Alerts
    ALLOW NOTIFICATIONS  
    For Daily Alerts

    ರಿಯಲ್ ಎಸ್ಟೇಟ್ ನಂಬಿ ಕೋಟಿಗಟ್ಟಲೆ ಹಣ ಕಳೆದುಕೊಂಡರೇ ನಯನತಾರಾ, ರಮ್ಯಾಕೃಷ್ಣ?

    |

    ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿಯೊಂದನ್ನು ನಂಬಿ ದೇಶದ ವಿವಿಧ ರಂಗಗಳ ಅನೇಕ ಸೆಲೆಬ್ರಿಟಿಗಳು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅದರಲ್ಲಿ ದಕ್ಷಿಣ ಭಾರತದ ನಟಿಯರಾದ ನಯನತಾರಾ, ರಮ್ಯಾಕೃಷ್ಣ ಕೂಡ ಸೇರಿದ್ದು, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ಕೂಡ ಕೋಟಿಗಟ್ಟಲೆ ಹಣ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.

    Recommended Video

    ಬೆಂಗಳೂರಿನಲ್ಲಿ ನೆಲಸಮವಾಯ್ತು 4 ಅಂತಸ್ತಿನ ಕಟ್ಟಡ | Filmibeat Kannada

    ಕೋಟ್ಯಂತರ ರೂಪಾಯಿ ವಂಚನೆಯ ರಿಯಲ್ ಎಸ್ಟೇಟ್ ಹಗರಣದಲ್ಲಿ ಸಿನಿಮಾ ಮತ್ತು ಕ್ರಿಕೆಟ್ ಜಗತ್ತಿನ ಅನೇಕರು ಅಪಾರ ಪ್ರಮಾಣದ ಹಣ ಕಳೆದುಕೊಂಡಿದ್ದಾರೆ. ದೇಶದಾದ್ಯಂತ ವಿವಿಧ ವಿವಿಐಪಿಗಳಿಗೆ ಅತ್ಯುತ್ತಮ ನೀರಿನ ಸೌಲಭ್ಯವಿರುವ ಹಲವಾರು ಎಕರೆ ಭೂಮಿಯನ್ನು ಈ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿ ಮಾರಾಟ ಮಾಡಿದೆ. ಮುಂದೆ ಓದಿ.

    ಸೆಲೆಬ್ರಿಟಿಗಳಿಗೆ ಫಾಲೋವರ್ಸ್ ಹೆಚ್ಚಿಸಲು ಹೀಗೊಂದು ವಂಚನೆಯ ಜಾಲಸೆಲೆಬ್ರಿಟಿಗಳಿಗೆ ಫಾಲೋವರ್ಸ್ ಹೆಚ್ಚಿಸಲು ಹೀಗೊಂದು ವಂಚನೆಯ ಜಾಲ

    ಅಪಾರ್ಟ್‌ಮೆಂಟ್ ನಿರ್ಮಾಣ

    ಅಪಾರ್ಟ್‌ಮೆಂಟ್ ನಿರ್ಮಾಣ

    ಕೋಟಿಗಟ್ಟಲೆ ಹಣ ಸುರಿದಿರುವ ಸೆಲೆಬ್ರಿಟಿಗಳು ಇಲ್ಲಿ ಬೃಹತ್ ಅಪಾರ್ಟ್‌ಮೆಂಟ್‌ಗಳು ಮತ್ತು ನಿರ್ಬಂಧಿತ ವಸತಿ ಸಮುಚ್ಚಯಗಳನ್ನು (ಗೇಟೆಡ್ ಕಮ್ಯುನಿಟಿ) ನಿರ್ಮಿಸಲು ಉದ್ದೇಶಿಸಿದ್ದರು. ಗೇಟೆಡ್ ಕಮ್ಯುನಿಟಿಯಲ್ಲಿ ಪಾದಚಾರಿಗಳು, ಬೈಸಿಕಲ್ ಮತ್ತು ವಾಹನಗಳ ಪ್ರವೇಶಕ್ಕೆ ನಿರ್ಬಂಧವಿರುತ್ತದೆ. ಗೋಡೆ ಮತ್ತು ಬೇಲಿಗಳ ನಡುವೆ ವಸತಿ ಸಮುಚ್ಚಯ ನಿರ್ಮಿಸಲಾಗುತ್ತದೆ.

    ಕೃಷಿ ಜಮೀನು ಅಕ್ರಮ ಮಾರಾಟ

    ಕೃಷಿ ಜಮೀನು ಅಕ್ರಮ ಮಾರಾಟ

    ಆದರೆ ರಿಯಲ್ ಎಸ್ಟೇಟ್ ಸಂಸ್ಥೆಯ ಪಾಲುದಾರರ ಜಗಳ, ಈ ಭೂಮಿಗಳ ಹಿಂದಿನ ಸತ್ಯ ಬಹಿರಂಗಪಡಿಸಿದೆ. ವಿವಿಐಪಿಗಳಿಗೆ ಮಾರಾಟ ಮಾಡಿರುವ ಈ ಭೂಮಿ ಕೃಷಿ ಜಮೀನುಗಳಾಗಿದ್ದು, ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎನ್ನುವುದು ಗೊತ್ತಾಗಿದೆ.

    ಇನ್ನು ಅಪರಿಚಿತರು ಬಂದರೆ ನಂಬುವುದಿಲ್ಲ: ಜಗ್ಗೇಶ್ ಹೀಗೆ ಹೇಳಿದ್ದೇಕೆ?ಇನ್ನು ಅಪರಿಚಿತರು ಬಂದರೆ ನಂಬುವುದಿಲ್ಲ: ಜಗ್ಗೇಶ್ ಹೀಗೆ ಹೇಳಿದ್ದೇಕೆ?

    ಹತ್ತು ಕೋಟಿಗೆ ಮಾರಾಟ

    ಹತ್ತು ಕೋಟಿಗೆ ಮಾರಾಟ

    ಅಲ್ಲದೆ, ರಿಯಲ್ ಎಸ್ಟೇಟ್ ಕಂಪೆನಿಯು ಒಂದು ಎಕರೆಗೆ ಕೇವಲ ಒಂದು ಲಕ್ಷ ರೂ. ದರದಲ್ಲಿ ಈ ಭೂಮಿಗಳನ್ನು ಖರೀದಿ ಮಾಡಿದೆ. ಆದರೆ ವಿವಿಐಪಿಗಳಿಗೆ ಇದನ್ನು ಎಕರೆಗೆ ಹತ್ತು ಕೋಟಿ ರೂ. ಬೆಲೆಯಲ್ಲಿ ಮಾರಾಟ ಮಾಡಿದೆ ಎಂದು ಹೇಳಲಾಗಿದೆ.

    ನೋಟಿಸ್ ನೀಡಿದ ಕಂದಾಯ ಇಲಾಖೆ

    ನೋಟಿಸ್ ನೀಡಿದ ಕಂದಾಯ ಇಲಾಖೆ

    ಈಗ ಕಂದಾಯ ಇಲಾಖೆಯು ಕೃಷಿ ಯೋಗ್ಯ ಭೂಮಿಯನ್ನು ವಾಣಿಜ್ಯ ಚಟುವಟಿಕೆಗಳ ಬಳಕೆಗೆ ಕಾನೂನು ಬಾಹಿರವಾಗಿ ಮಾರಾಟಮಾಡಿದ ಕಂಪೆನಿಗೆ ನೋಟಿಸ್ ಜಾರಿ ಮಾಡಿದೆ. ನಯನತಾರಾ, ರಮ್ಯಾಕೃಷ್ಣ ಮತ್ತು ಅಂಜಲಿ ತೆಂಡೂಲ್ಕರ್ ಸೇರಿದಂತೆ ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ಸೆಲೆಬ್ರಿಟಿಗಳು ತಮ್ಮ ಹಣವನ್ನು ಮರಳಿ ಪಡೆಯಲಿದ್ದಾರೆಯೇ ಎನ್ನುವುದು ಈಗಿನ ಪ್ರಶ್ನೆ.

    ನಿಜ ಜೀವನದಲ್ಲಿ ವಿಶಾಲ್ ಹೀರೋ ಅಲ್ಲ, ವಿಲನ್: ರಮ್ಯಾ ಆರೋಪನಿಜ ಜೀವನದಲ್ಲಿ ವಿಶಾಲ್ ಹೀರೋ ಅಲ್ಲ, ವಿಲನ್: ರಮ್ಯಾ ಆರೋಪ

    English summary
    Nayanthara, Ramya Krishan, Anjali Tendulkar and many other celebrities have lost crores of rupees in an illegal real estate scam.
    Thursday, July 30, 2020, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X