Don't Miss!
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Automobiles ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದುವೆಯಾದ ಮರು ದಿನವೇ ವಿವಾದಕ್ಕೆ ಸಿಲುಕಿದ ನಯನತಾರಾ ಮಾಡಿದ್ದಾರು ಏನು?
ಜೂನ್ 09ರಂದು ದಕ್ಷಿಣ ಭಾರತದ ಲೇಡಿ ಸೂಪರ್ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮಿಳುನಾಡಿನ ಮಹಾಬಲಿಪುರಂನಲ್ಲಿ ಐಶಾರಾಮಿ ಹೊಟೇಲ್ನಲ್ಲಿ ಈ ಜೋಡಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದೆ. ಇದೇ ಸಂಭ್ರಮದಲ್ಲಿ ನವ ಜೋಡಿ ತಿರುಪತಿ ದೇವಸ್ಥಾನಕ್ಕೂ ಭೇಟಿ ನೀಡಿತ್ತು.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಾರನೇ ದಿನವೇ ( ಜೂನ್ 10) ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದರು. ಕೌಟುಂಬಿಕ ಜೀವನದ ಆರಂಭದಲ್ಲಿ ದೇವರ ಆಶೀರ್ವಾದ ಪಡೆಯಲು ನಯನತಾರಾ ಹಾಗೂ ವಿಘ್ನೇಶ್ ತಿರುಪತಿಗೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದರು. ಆದರೆ ಇದೇ ವೇಳೆ ನಯನತಾರಾ ವಿವಾದಕ್ಕೆ ಸಿಲುಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ನಟಿಯ ವಿರುದ್ಧ ಆಕ್ರೋಶವೆದ್ದಿದೆ.
ಅಧಿಕೃತವಾಗಿ ಮದುವೆಯಾದ ನಯನತಾರಾ: ವಿವಾಹಕ್ಕೆ ಬಂದ ವಿಜಯ್ ವಿಡಿಯೋ ವೈರಲ್!
ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಟ
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯ ಸಂಭ್ರಮದಲ್ಲಿದೆ. ವಿವಾಹದ ಮರು ದಿನವೇ ತಿರುಪತಿ-ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆಯಲು ಬಂದಿದ್ದ ನಯನತಾರಾ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ತಿಮ್ಮಪ್ಪನ ದರ್ಶನ ಪಡೆಯುವ ಆತುರದಲ್ಲಿ ನಯನತಾರಾ ಚಪ್ಪಲಿ ಧರಿಸಿ ಓಡಾಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಲೇಡಿ ಸೂಪರ್ಸ್ಟಾರ್ ನಯನತಾರಾ ವೃತ್ತಿ ಬದುಕಿನ ಕೆಲ ಕರಾಳ ಸತ್ಯಗಳು
ನಯನತಾರಾ ಮೇಲೆ ಆಕ್ರೋಶವೇಕೆ?
ತಿರುಪತಿ-ತಿಮ್ಮಪ್ಪನ ದೇವಸ್ಥಾನದಲ್ಲಿ ಕೈ ಕೈ ಹಿಡಿದು ನವ ಜೋಡಿ ಓಡಾಡಿತ್ತು. ಆ ವೇಳೆ ವಿಘ್ನೇಶ್ ಶಿವನ್ ಬರಿಗಾಲಿನಲ್ಲಿ ಓಡಾಡಿದ್ದರು. ಅತ್ತ ನಯನತಾರಾ ಮಾತ್ರ ಚಪ್ಪಲಿ ಧರಿಸಿ ಶ್ರೀವಾರಿಯ ರಸ್ತೆಗಳಲ್ಲಿ ನಡೆದಾಡಿದ್ದಾರೆ. ಇದೇ ವೇಳೆ ಅವರನ್ನು ಹಿಂಬಾಲಿಸುತ್ತಿದ್ದವರೂ ಕೂಡ ಚಪ್ಪಲಿ ಹಾಗೂ ಶೂ ಧರಿಸಿಯೇ ಓಡಾಡಿದ್ದಾರೆ. ಇದು ಅಲ್ಲಿನ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು.
ದೇವಸ್ಥಾನದ ಅಧಿಕಾರಿಗಳು ಏನಂತಾರೆ?
ನಯನತಾರಾ ಚಪ್ಪಲಲಿ ಧರಿಸಿ ದೇವಸ್ಥಾನದ ಸುತ್ತಮುತ್ತ ಓಡಾಡುತ್ತಿದ್ದ ವಿಡಿಯೋ ವೈರಲ್ ಆಗಿ, ವಿವಾದಕ್ಕೀಡಾಗುತ್ತಿದೆ. ಆ ಬಳಿಕ ತಿರುಪತಿ ದೇವಸ್ಥಾನದ ಅಧಿಕಾರಿಗಳು ಕ್ಲಾರಿಟಿ ನೀಡಿದ್ದು, ನಯನತಾರಾ ಚಪ್ಪಲಿ ತೊಟ್ಟು ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿದ್ದಾರೆ ಎಂದು ಇಂಡಿಯಾ ಗ್ಲಿಟ್ಜ್ ವರದಿ ಮಾಡಿದೆ.
ಹೊಸ ಬಿಸಿನೆಸ್ಗೆ ಕೈಯಿಟ್ಟ ನಯನತಾರಾ: 100 ಕೋಟಿ ಹೂಡಿಕೆ!
ದರ್ಶನ ಪಡೆದ ಬಳಿಕ ತೆರಳಿದ ಜೋಡಿ
ಶುಕ್ರವಾರ (ಜೂನ್ 10) ಬೆಳಗ್ಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವೆಂಕಟೇಶ್ವರನ ದರ್ಶನ ಪಡೆದಿದೆ. ಈ ವೇಳೆ ವಿಘ್ನೇಶ್ ರೇಷ್ಮೆ ಪಂಚೆ ಶರ್ಟ್ ಧರಿಸಿದ್ದರೆ, ನಯನತಾರಾ ಹಳದಿ ಬಣ್ಣದ ಸೀರೆಯುಟ್ಟಿದ್ದರು. ದೇವರ ದರ್ಶನ ಪಡೆಯುತ್ತಿದ್ದಂತೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ತಿರುಪತಿಯಂದ ನಿರ್ಗಮಿಸಿದ್ದಾರೆ.