Don't Miss!
- News ಬಿಜೆಪಿ ಅಭ್ಯರ್ಥಿ ಬದಲಾವಣೆ ಬಗ್ಗೆ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದೇನು?
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋವಿಂದ, ಗೋವಿಂದ ಎಂಬ ನಯನತಾರಾ, ದೀಪಿಕಾ ಪಡುಕೋಣೆ!
ನಿನ್ನೆಯಷ್ಟೆ ವಿವಾಹವಾಗಿರುವ ನಟಿ ನಯನತಾರಾ ಹಾಗೂ ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಶಿವನ್ ಇಂದು ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ನಯನತಾರಾ ಹಾಗು ವಿಘ್ನೇಶ್ ಶಿವನ್ ಅವರ ವಿವಾಹ ತಿರುಪತಿಯಲ್ಲಿಯೇ ನಡೆಯಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅದು ಆಗಲಿಲ್ಲ. ತಿರುಪತಿಯಲ್ಲಿ ಮೊದಲು ನಿಗದಿಯಾಗಿದ್ದ ವಿವಾಹ ಆ ನಂತರ ಮಹಾಬಲಿಪುರಂಗೆ ಸ್ಥಳಾಂತರಗೊಂಡಿತು.
ಹಾಗಾಗಿ, ಮದುವೆಯಾದ ಮೊದಲ ದಿನವೇ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರುಗಳು ತಿರುಪತಿಗೆ ಆಗಮಿಸಿ ವೇಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ದೇವಾಲಯಕ್ಕೆ ಭೇಟಿ ಕೊಟ್ಟ ಸಮಯದಲ್ಲಿ ನಯನತಾರಾ ಹಳದಿ ಬಣ್ಣದ ಸೀರೆ, ರವಿಕೆ ತೊಟ್ಟಿದ್ದರೆ, ವಿಘ್ನೇಶ್ ಶಿವನ್ ಬಿಳಿ ಬಣ್ಣದ ಶರ್ಟ್ ಪಂಚೆ ಧರಿಸಿದ್ದರು. ಕೈ-ಕೈ ಹಿಡಿದುಕೊಂಡು ಇವರು ದೇವಾಲಯದ ಆವರಣದಲ್ಲಿ ಸುತ್ತಾಡಿದರು.
ನಯನತಾರಾ ಹಾಗೂ ವಿಘ್ನೇಶ್ ಮಾತ್ರವೇ ಅಲ್ಲ ಇನ್ನೊಬ್ಬ ಸ್ಟಾರ್ ನಟಿಯೂ ಸಹ ಕುಟುಂಬ ಸಮೇತ ತಿರುಪತಿಗೆ ಭೇಟಿ ನೀಡಿದ್ದಾರೆ, ಅವರೇ ದೀಪಿಕಾ ಪಡುಕೋಣೆ.
ನಟಿ ದೀಪಿಕಾ ಪಡುಕೋಣೆ, ತಮ್ಮ ತಂದೆ ಪ್ರಕಾಶ್ ಪಡುಕೋಣೆ, ತಾಯಿ ಹಾಗೂ ತಂಗಿಯೊಡನೆ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ವೆಂಟಕೇಶ್ವರ ಸ್ವಾಮಿಯ ಭಕ್ತೆಯಾಗಿರುವ ದೀಪಿಕಾ, ಆಗಾಗ್ಗೆ ಕುಟುಂಬದ ಜೊತೆ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ದೀಪಿಕಾ ಭೇಟಿ ನೀಡಿದಾಗ ದೇವಾಲಯದ ಆಡಳಿತ ಮಂಡಳಿಯು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದೆ.
ದೀಪಿಕಾ ಪಡುಕೋಣೆ ಕುಟುಂಬದ ಜೊತೆಗೆ ರಣ್ವೀರ್ ಸಿಂಗ್ ದೇವಾಲಯಕ್ಕೆ ಬಂದಿರಲಿಲ್ಲ. ರಣ್ವೀರ್ ಸಿಂಗ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.