Don't Miss!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಸಂಸತ್ ಭವನ: ಪ್ರಧಾನಿ ಮೇಲೆ ಕಿಡಿಕಾರಿದ ಕಮಲ್ ಹಾಸನ್
ನಟ, ರಾಜಕಾರಣಿ ಕಮಲ್ ಹಾಸನ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ಹೊಸ ಪಾರ್ಲಿಮೆಂಟ್ ಭವನ ನಿರ್ಮಾಣಕ್ಕೆ ಮೋದಿ ಅವರು ಇತ್ತೀಚೆಗಷ್ಟೆ ಶಂಕು ಸ್ಥಾಪನೆ ನೆರವೇರಿಸಿದರು, ಇದು ಕಮಲ್ ಹಾಸನ್ ಗೆ ಸಿಟ್ಟು ತರಿಸಿದೆ.
'ಮಕ್ಕಳ್ ನಿಧಿ ಮಯಂ' ಪಕ್ಷದ ಸಂಸ್ಥಾಪಕರಾಗಿರುವ ಕಮಲ್ ಹಾಸನ್, 2021 ರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಇಂದು ಪ್ರಾರಂಭ ನೀಡಿದರು. ಅದಾದ ಕೆಲವೇ ಗಂಟೆಗಳಲ್ಲಿ ಟ್ವಿಟ್ಟರ್ನಲ್ಲಿ ಮೋದಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದರು ಕಮಲ್ ಹಾಸನ್.
'ಭಾರತದ ಅರ್ಧದಷ್ಟು ಜನ ಹಸಿವಿನಿಂದಿರುವಾಗ 1000 ಕೋಟಿ ಖರ್ಚು ಮಾಡಿ ಹೊಸ ಪಾರ್ಲಿಮೆಂಟ್ ಕಟ್ಟುವ ಅವಶ್ಯಕತೆ ಏನಿತ್ತು?' ಎಂದು ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ ಕಮಲ್ ಹಾಸನ್.
'ಜನರ ರಕ್ಷಣೆಗೆ ಎಂದು ಹೇಳಿ ಕಟ್ಟಲ್ಪಟ್ಟ ಚೀನಾದ ಮಹಾ ಗೋಡೆ ಕಟ್ಟುವಾಗ ಸಾವಿರಾರು ಮಂದಿ ಸತ್ತಿದ್ದರು. ಹಾಗಿದ್ದರೆ ಈ ಹೊಸ ಸಂಸತ್ ಭವನವನ್ನು ಯಾರ ರಕ್ಷಣೆಗಾಗಿ ಕಟ್ಟುತ್ತಿದ್ದೀರಿ? ದಯಮಾಡಿ ನನಗೆ ಉತ್ತರ ನೀಡಿ ಚುನಾಯಿತ ಪ್ರಧಾನಿಗಳೇ' ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.
Recommended Video
ಪ್ರಧಾನಿ ಮೋದಿ ಅವರು ಕೆಲವು ದಿನಗಳ ಹಿಂದಷ್ಟೆ, ಹೊಸ ಸಂಸತ್ ಭವನ ನಿರ್ಮಿಸಲು ಶಂಕು ಸ್ಥಾಪನೆ ನೆರವೇರಿಸಿದರು. ಹೊಸ ಸಂಸತ್ ಭವನಕ್ಕೆ 1000 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸಂಸತ್ ಭವನವು 2022 ರ ವೇಳೆಗೆ ಪೂರ್ಣಗೊಳ್ಳಲಿದೆ.