Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಾಂಚನಾ' ಸಿನಿಮಾ ನಿರ್ಮಿಸಿದ್ದು ಏಕೆ? ಕಾರಣ ಬಿಚ್ಚಿಟ್ಟ ರಾಘವ್ ಲಾರೆನ್ಸ್
ನೃತ್ಯ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದ್ದ ರಾಘವ್ ಲಾರೆನ್ಸ್ ನಂತರ ನಿರ್ದೇಶಕನಾಗಿಯೂ ಯಶಸ್ವಿಯಾದರು. ಮೊದಲಿಗೆ 'ಮಾಸ್' ಎಂಬ ಮಾಸ್ ಸಿನಿಮಾ ನಿರ್ದೇಶಿಸಿದ್ದ ರಾಘವ್ ಲಾರೆನ್ಸ್ ಆ ನಂತರ ದೆವ್ವದ ಕತೆಗಳತ್ತ ಒಲವು ಹೆಚ್ಚು ಮಾಡಿಕೊಂಡರು.
ದೆವ್ವದ ಸಿನಿಮಾಗಳು ರಾಘವ್ ಲಾರೆನ್ಸ್ ಗೆ ದೊಡ್ಡ ಯಶಸ್ಸನ್ನೂ ತಂದುಕೊಟ್ಟಿತು. ಅದರಲ್ಲಿಯೂ ರಾಘವ್ ನಿರ್ದೇಶಿಸಿ ನಟಿಸಿದ್ದ 'ಕಾಂಚನಾ' ದೊಡ್ಡ ಯಶಸ್ಸು ಗಳಿಸಿತು. ಅಷ್ಟೇ ಅಲ್ಲದೆ ಕನ್ನಡ ಸೇರಿದಂತೆ ಕೆಲವು ಭಾಷೆಗಳಿಗೆ ರೀಮೇಕ್ ಸಹ ಆಯಿತು.
ಇದೀಗ ಹಿಂದಿಯಲ್ಲಿ ರಾಘವ್ ಲಾರೆನ್ಸ್ ಅವರೇ ಕಾಂಚನಾ ಸಿನಿಮಾವನ್ನು ರೀಮೇಕ್ ಮಾಡಿದ್ದು, ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಈ ಸಮಯದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಘವ್ ಲಾರೆನ್ಸ್ ತಾವೇಕೆ ಕಾಂಚನಾ ಸಿನಿಮಾ ನಿರ್ದೇಶಿಸಿದೆ ಎಂದು ಹೇಳಿಕೊಂಡಿದ್ದಾರೆ.
ರಾಘವ್ ಲಾರೆನ್ಸ್ ಟ್ರಸ್ಟ್ ಗೆ ಬಂದಿದ್ದ ತೃತಿಯಲಿಂಗಿ
ರಾಘವ್ ಲಾರೆನ್ಸ್ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಟ್ರಸ್ಟ್ ಅನಾಥ ಮಕ್ಕಳಿಗೆ ಸೂರು ಒದಗಿಸುವ, ವಯಸ್ಸಾದವರಿಗೆ ನೆಲೆ ನೀಡುವ ಇನ್ನೂ ಅನೇಕ ಕಾರ್ಯಗಳನ್ನು ಮಾಡುತ್ತಿದೆ. ರಾಘವ್ ಅವರ ಟ್ರಸ್ಟ್ನಿಂದ ಸಹಾಯ ಅಪೇಕ್ಷಿಸಿ ಒಮ್ಮೆ ತೃತಿಯಲಿಂಗಿಗಳು ಕೆಲವರು ಬಂದಿದ್ದರಂತೆ.
ತ್ರಿಲಿಂಗಿಗಳ ಕತೆ ಕೇಳಿದ ರಾಘವ್ ಲಾರೆನ್ಸ್
ಸಹಾಯ ಅಪೇಕ್ಷಿಸಿ ಬಂದ ತೃತಿಯಲಿಂಗಿ ಬಳಿ ರಾಘವ್ ಲಾರೆನ್ಸ್ ಸಾಕಷ್ಟು ಸಮಯ ಮಾತನಾಡಿದರಂತೆ, ಅವರ ಕತೆಗಳನ್ನೆಲ್ಲಾ ಕೇಳಿದರಂತೆ, ಅವರ ಸಮಸ್ಯೆಗಳನ್ನು ಆಲಿಸಿದರಂತೆ, ಆಗ ಅವರಿಗೆ ಅನಿಸಿದ್ದು ತೃತಿಯಲಿಂಗಿಗಳಿಗಾಗಿ ಏನಾದರೂ ಮಾಡಲೇ ಬೇಕು ಎಂದು.
ತೃತಿಯಲಿಂಗಿಗಳ ಬಗ್ಗೆ ಸಿನಿಮಾಗಳು ಗಮನ ಹರಿಸಿಲ್ಲ
ತೃತಿಯಲಿಂಗಿಗಳ ಬಗ್ಗೆ ಸಿನಿಮಾಗಳು ಹೆಚ್ಚು ಗಮನ ಹರಿಸಿಲ್ಲ, ಅವರನ್ನು ತಮಾಷೆಯ ವಸ್ತುವಾಗಿ ಕೆಲವು ಸಿನಿಮಾಗಳಲ್ಲಿ ತೋರಿಸಲಾಗಿದೆ. ಹಾಗಾಗಿ ಅವರ ಬಗ್ಗೆ ಸಿನಿಮಾ ಮಾಡಿ, ಅವರ ಸಮಸ್ಯೆಯನ್ನು, ಅವರ ಜಗತ್ತನ್ನು ಪ್ರಪಂಚಕ್ಕೆ ಪರಿಚಯ ಮಾಡಬೇಕು ಎನಿಸಿ, 'ಕಾಂಚನಾ' ಸಿನಿಮಾ ಮಾಡಿದರಂತೆ ರಾಘವ್ ಲಾರೆನ್ಸ್.
Recommended Video
ಮನೆಗೆ ಬಂದು ಆಶೀರ್ವದಿಸಿದ ತೃತಿಯಲಿಂಗಿಗಳ
ಕಾಂಚನಾ ಸಿನಿಮಾ ಬಿಡುಗಡೆ ಆದ ಬಳಿಕ ದೊಡ್ಡ ಸಂಖ್ಯೆಯಲ್ಲಿ ತೃತಿಯಲಿಂಗಿಗಳ ರಾಘವ್ ಲಾರೆನ್ಸ್ ಮನೆಗೆ ಭೇಟಿ ಕೊಟ್ಟು, ಸನ್ಮಾನ ಮಾಡಿ, ಆಶೀರ್ವಾದ ಮಾಡಿ ಹೋದರಂತೆ. ಹೀಗೆಂದು ಸಂದರ್ಶನದಲ್ಲಿ ಹೇಳಿದ್ದಾರೆ ರಾಘವ್ ಲಾರೆನ್ಸ್.