Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ಯದಲ್ಲೇ ಕಮಲ್, ರಜನಿ ಜೋಡಿಯ ಕಮಾಲ್!
ನಿರ್ಮಾಪಕ ಎವಿಎಮ್ ಸರವಣನ್ ರಜನಿ ಮತ್ತು ಕಮಲ್ ಇಬ್ಬರನ್ನೂ ಒಂದೇ ಸಿನಿಮಾದಲ್ಲಿ ನಟಿಸವಂತೆ ಮಾಡಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇತ್ತೀಚಿಗೆ ನಿರ್ಮಾಪಕರ ಮನೆಯಲ್ಲಿ ಈ ಸಂಬಂಧ ರಜನಿಕಾಂತ್, ಕಮಲ್ ಹಾಸನ್ ಜೊತೆ ಮಾತುಕತೆ ನಡೆಸಲಾಗಿದೆ, ನಿರ್ಮಾಪಕ ಸರವಣನ್ ಪ್ರಕಾರ, ಈ ಇಬ್ಬರು ಸೂಪರ್ ಸ್ಟಾರ್ ಗಳನ್ನು ನಿರ್ದೇಶಿಸಲು ಕೆ ಬಾಲಚಂದರ್ ಸಮರ್ಥರು. ಈ ಮೊದಲು ಈ ಮೂವರ ಸಂಗಮದಲ್ಲಿ ತೆರೆಗೆ ಬಂದಿದ್ದ 'ನಿನೈಥಲೆ ಇನಿಕ್ಕುಂ' ಹಾಗೂ 'ತಿಲ್ಲು ಮಲ್ಲು' ಚಿತ್ರಗಳು ಸೂಪರ್ ಹಿಟ್ ದಾಖಲಿಸಿದ್ದವು.
ಈ ಕುರಿತು ಮಾತನಾಡಿರುವ ನಿರ್ದೇಶಕ ಕೆ ಬಾಲಚಂದರ್ ಪುತ್ರಿ ಪುಷ್ಪಾ ಕಂದಸ್ವಾಮಿ, "ಈ ಇಬ್ಬರೂ ಸೂಪರ್ ಸ್ಟಾರ್ ಗಳನ್ನು ಒಂದೇ ಚಿತ್ರದಲ್ಲಿ ನೋಡಲು ತುಂಬಾ ಸಂತೋಷ ಎನಿಸುತ್ತದೆ. ಆದರೆ ನಮ್ಮ ತಂದೆಗೆ ಸದ್ಯಕ್ಕೆ ಅವರಿಬ್ಬರನ್ನೂ ನಿರ್ದೇಶಿಸುವ ಯಾವುದೇ ಐಡಿಯಾ ಇಲ್ಲ. ಈ ಮೊದಲು ರಜನಿ ಹಾಗೂ ಕಮಲ್, 'ಅಪೂರ್ವ ರಾಂಗಂಗಳ್' ಹಾಗೂ 'ವಯಸು ಪಿಲಿಚಿಂದಿ' ಹಾಗೂ 'ಅಂಥುಲೇನಿ ಕಥಾ' ಚಿತ್ರಗಳಲ್ಲಿ ನಟಿಸಿದ್ದರೂ ಈಗ ಈ ಜೋಡಿಯ ಚಿತ್ರ ತರಲು ಇದು ಸಮಯವಲ್ಲ" ಎಂದಿದ್ದಾರೆ.
ಹೀಗಾಗಿ, ಈ ಇಬ್ಬರೂ ಸೂಪರ್ ಸ್ಟಾರ್ ಒಂದಾಗಿ ಬರಲಿರುವ ಚಿತ್ರದ ಬಗ್ಗೆ ಯಾರೂ ನಿರ್ಧಿಷ್ಟವಾಗಿ ಹೇಳಲು ಸಾಧ್ಯವಾಗಿಲ್ಲ. ಸದ್ಯಕ್ಕಂತೂ ತಮ್ಮ 'ಕೊಚಡಯ್ಯಾನ್' ಚಿತ್ರದಲ್ಲಿ ಬಿಜಿಯಾಗಿರುವ ರಜನಿಕಾಂತ್, ನಂತರ ಅದರ ಮುಂದುವರಿದ ಭಾಗವಾದ 'ರಾಣಾ'ಕ್ಕೆ ಸಿದ್ಧರಾಗುತ್ತಿದ್ದಾರೆ. ಇನ್ನು ಕಮಲ್ ಹಾಸನ್, ಬಿಡುಗಡೆಗೆ ಸಿದ್ಧವಾಗಿರುವ ವಿಶ್ವರೂಪಂ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಜೊತೆಗೆ, ಆಸ್ಕರ್ ರವಿಚಂದ್ರನ್ ನಿರ್ದೇಶನದ ಚಿತ್ರಕ್ಕೆ ರೆಡಿಯಾಗಬೇಕಿದೆ. (ಏಜೆನ್ಸೀಸ್)