Don't Miss!
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆ ನಟನೊಂದಿಗೆ ನಟಿಸಬೇಕೆಂಬ ಆಸೆ ಇತ್ತು ಎಂದ ಸಾಯಿ ಪಲ್ಲವಿ: ಯಾರು ಆ ನಟ?
ನಟಿ ಸಾಯಿ ಪಲ್ಲವಿ ಹಲವು ಕಾರಣಗಳಿಗೆ ತನ್ನ ಸಮಕಾಲೀನ ನಟಿಯರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾರೆ. ಸಾಯಿ ಪಲ್ಲವಿ, ಜಾಹೀರಾತುಗಳಲ್ಲಿ ನಟಿಸುವುದಿಲ್ಲ, ಕಮರ್ಷಿಯಲ್ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ, ಟಾಕ್ ಶೋ ಗಳಿಗೆ ಬರುವುದಿಲ್ಲ, ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವುದಿಲ್ಲ ಹೀಗೆ ಅನೇಕ ನಿಯಮಗಳನ್ನು ಅವರು ಪಾಲಿಸುತ್ತಾರೆ.
ಮಾಧ್ಯಮಗಳ ಕೈಗೂ ಸಹ ಬಹಳ ಅಪರೂಪವಾಗಿ ಸಿಕ್ಕುತ್ತಾರೆ ನಟಿ ಸಾಯಿ ಪಲ್ಲವಿ. ಮಾಧ್ಯಮಗಳಿಗೆ ಸಂದರ್ಶನ ನೀಡಿದರೂ ಸಹ ಮಾತನಾಡುವುದು ಕಡಿಮೆಯೇ. ಇತ್ತೀಚೆಗೆ, ಬಾಲಿವುಡ್ ಸುದ್ದಿಗಳನ್ನು ಹೆಚ್ಚಾಗಿ ವರದಿ ಮಾಡುವ ಪತ್ರಿಕೆಯೊಂದು ಸಾಯಿ ಪಲ್ಲವಿಯನ್ನು ಸಂದರ್ಶನ ಮಾಡಿದೆ, ಈ ಸಂದರ್ಶನದಲ್ಲಿ ಕೆಲವು ವಿಷಯ ಮಾತನಾಡಿದ್ದಾರೆ ಸಾಯಿ ಪಲ್ಲವಿ.
'ಶ್ಯಾಮ್ ಸಿಂಗ್ ರಾಯ್'ಗಾಗಿ ಒಂದಾದ ಸಾಯಿ ಪಲ್ಲವಿ ಮತ್ತು ನಾನಿ
ಸಂದರ್ಶನದಲ್ಲಿ, ತೆಲುಗಿನ ಖ್ಯಾತ ನಟ ಮಹೇಶ್ ಬಾಬು, ಕೊರೊನಾ ಕಲಿಸಿದ ಪಾಠಗಳು, ಮುಂಬರುವ ಸಿನಿಮಾಗಳು ಇನ್ನೂ ಅನೇಕ ವಿಷಯ ಮಾತನಾಡಿದ್ದಾರೆ. ತಾವು ಜೊತೆಯಾಗಿ ನಟಿಸಬೇಕು ಎಂದು ಆಸೆ ಪಟ್ಟಿದ್ದ ನಟರೊಬ್ಬರ ಬಗ್ಗೆಯೂ ಹೇಳಿದ್ದಾರೆ ಸಾಯಿ ಪಲ್ಲವಿ.
ಪ್ರಕಾಶ್ ರೈ ನೋಡಿ ಭಯ ಪಟ್ಟಿದ್ದರಂತೆ ನಟಿ ಸಾಯಿ ಪಲ್ಲವಿ
ಆ ನಟನೊಂದಿಗೆ ನಟಿಸುವ ಆಸೆಯಿತ್ತು: ಸಾಯಿ ಪಲ್ಲವಿ
ಕೆಲ ತಿಂಗಳ ಹಿಂದಷ್ಟೆ ಕಾಲವಾದ ನಟ ಇರ್ಫಾನ್ ಖಾನ್ ಜೊತೆಗೆ ನಟಿಸಬೇಕು ಎಂದು ಬಹಳ ಆಸೆಯಿತ್ತಂತೆ ನಟಿ ಸಾಯಿ ಪಲ್ಲವಿಗೆ. ಆದರೆ ಆ ಆಸೆ ಈಡೇರಲಿಲ್ಲ ಎಂಬ ಬೇಸರವಿದೆ. 'ಇರ್ಫಾನ್ ಖಾನ್ ನಟನೆಯೆಂದರೆ ನನಗೆ ಬಹಳ ಇಷ್ಟ, ಅವರ ಸಿನಿಮಾಗಳು ಬಹಳ ಇಷ್ಟವಾಗುತ್ತವೆ ನನಗೆ' ಎಂದಿದ್ದಾರೆ ಸಾಯಿ ಪಲ್ಲವಿ.
ನಾಗಚೈತನ್ಯ ಜೊತೆ ಸಾಯಿ ಪಲ್ಲವಿ ಮದುವೆ ಫೋಟೋ ವೈರಲ್
ಸಖತ್ ಹ್ಯಾಂಡ್ಸಮ್ ನಟ ಮಹೇಶ್ ಬಾಬು: ಸಾಯಿ ಪಲ್ಲವಿ
ಮಹೇಶ್ ಬಾಬು ಬಗ್ಗೆಯೂ ಮಾತನಾಡಿರುವ ಸಾಯಿ ಪಲ್ಲವಿ, 'ಮಹೇಶ್ ಬಾಬು ಬಹಳ ಹ್ಯಾಂಡ್ಸಮ್ ನಟ, ಅವರ ಚಿತ್ರಗಳನ್ನು ನೋಡುವಾಗ ಜೂಮ್ ಮಾಡಿ ನೋಡುತ್ತೇನೆ. ಆತ ನಿಜವಾಗಿಯೂ ಹ್ಯಾಂಡ್ಸಮ್, ಆತನ ಚರ್ಮದ ಕಾಂತಿ ಅದ್ಭುತ, ಒಂದೂ ಕಲೆ ಸಹ ಅವರ ಮುಖದಲ್ಲಿಲ್ಲ' ಎಂದಿದ್ದಾರೆ ಸಾಯಿ ಪಲ್ಲವಿ.
ನಾನು ಇನ್ನಷ್ಟು ಒಳ್ಳೆಯ ವ್ಯಕ್ತಿಯಾಗಬೇಕು: ಸಾಯಿ ಪಲ್ಲವಿ
ಕೊರೊನಾ ಕಲಿಸಿದ ಪಾಠದ ಬಗ್ಗೆ ಮಾತನಾಡಿರುವ ಸಾಯಿ ಪಲ್ಲವಿ, 'ನಾನು ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ. ನಾನು ಅಂದುಕೊಂಡಷ್ಟು ನಾನು ಒಳ್ಳೆಯ ವ್ಯಕ್ತಿ ಅಲ್ಲ. ಇನ್ನಷ್ಟು ಒಳ್ಳೆಯ ವ್ಯಕ್ತಿ ಆಗಬೇಕಿದೆ. ನನ್ನ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾನು ಮಾಡಿಕೊಳ್ಳಬೇಕಿದೆ' ಎಂದಿದ್ದಾರೆ ಸಾಯಿ ಪಲ್ಲವಿ.
Recommended Video
ಎರಡು ಸಿನಿಮಾ ಬಿಡುಗಡೆಗೆ ರೆಡಿ
ನಟಿ ಸಾಯಿ ಪಲ್ಲವಿ ಈಗಷ್ಟೆ 'ಲವ್ ಸ್ಟೋರಿ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ನಾಗಚೈತನ್ಯ ನಾಯಕ. ರಾಣಾ ದಗ್ಗುಬಾಟಿ ನಟನೆಯ 'ವಿರಾಟ ಪರ್ವಂ' ಸಿನಿಮಾದಲ್ಲಿ ನಕ್ಸಲೈಟ್ ಪಾತ್ರದಲ್ಲಿ ನಟಿಸಿದ್ದಾರೆ ಸಾಯಿ ಪಲ್ಲವಿ. ತಮಿಳಿನ 'ಪಾವ ಕದೈಗಳ್' ಸಿನಿಮಾ ಡಿಸೆಂಬರ್ 18 ರಂದು ಅಮೆಜಾನ್ ನಲ್ಲಿ ಬಿಡುಗಡೆ ಆಗಲಿದೆ.