Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ಗೆ ಕೊರೊನಾ ಪಾಸಿಟಿವ್
ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹಿರಿಯ ನಿರ್ದೇಶಕರಲ್ಲಿ ಸಿಂಗೀತಂ ಶ್ರೀನಿವಾಸ್ ರಾವ್ ಸಹ ಒಬ್ಬರು. ಮಾಯಾಬಜಾರ್ ಕಾಲದಿಂದಲೂ ಚಿತ್ರರಂಗದಲ್ಲಿರುವ ದಿಗ್ಗಜ ನಿರ್ದೇಶಕ ಎಲ್ಲ ಪ್ರೇಕ್ಷಕರಿಗೂ ಇಷ್ಟವಾದ ಚಿತ್ರಗಳನ್ನು ನೀಡಿದ್ದಾರೆ.
88 ವರ್ಷದ ಸಿಂಗೀತಂ ಶ್ರೀನಿವಾಸ್ ರಾವ್ ಅವರಿಗೂ ಸಹ ಕೊರೊನಾ ವೈರಸ್ ತಗುಲಿದೆ. ಆರಂಭದಲ್ಲಿ ಇದು ವದಂತಿ ಇರಬಹುದು ಎಂದು ಹೇಳಲಾಯಿತು. ಬಳಿಕ ಸ್ವತಃ ಸಿಂಗೀತಂ ಶ್ರೀನಿವಾಸ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...
ಸೆಪ್ಟೆಂಬರ್ 9 ರಂದು ಪಾಸಿಟಿವ್
ಸೆಪ್ಟೆಂಬರ್ 9 ರಂದು ಕೊರೊನಾ ವೈರಸ್ ಪರೀಕ್ಷೆಗೆ ಒಳಪಟ್ಟಿದ್ದ ಸಿಂಗೀತಂ ಶ್ರೀನಿವಾಸ್ ರಾವ್ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅದಾದ ಬಳಿಕ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಹೋಮ್ ಐಸೋಲೆಟ್ ಆಗಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಸಹೋದರನಿಗೆ ಕೊರೊನಾ ಪಾಸಿಟಿವ್
ಬೇಗ ಗುಣಮುಖರಾಗುವ ಭರವಸೆ
ಸಿಂಗೀತಂ ಶ್ರೀನಿವಾಸ್ ರಾವ್ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ರೋಗಲಕ್ಷಣಗಳು ಸಹ ದೊಡ್ಡ ಮಟ್ಟದಲ್ಲಿಲ್ಲ. ನಿರ್ದೇಶಕರು ಸಹ ಸಕರಾತ್ಮಕ ಮನೋಭಾವದಲ್ಲಿದ್ದು, ಆದಷ್ಟೂ ಬೇಗ ಗುಣಮುಖರಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 28ಕ್ಕೆ ಸಿಂಗೀತಂ ಬರ್ತಡೇ
ಸೆಪ್ಟೆಂಬರ್ 23 ರಂದು ಸಿಂಗೀತಂ ಶ್ರೀನಿವಾಸ್ ರಾವ್ ಅವರ ಹೋಮ್ ಐಸೋಲೇಶನ್ ಅವಧಿ ಮುಗಿಯಲಿದ್ದು, ಅಂದು ಅಂತಿಮ ಪರೀಕ್ಷೆ ಸಹ ಮಾಡಲಾಗುವುದು ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 28 ರಂದು ಸಿಂಗೀತಂ ಶ್ರೀನಿವಾಸ್ ಅವರ ಜನುಮದಿನವಾಗಿದ್ದು, ಅಷ್ಟರಲ್ಲಿ ಆರೋಗ್ಯ ಸುಧಾರಿಸಲಿದೆ ಎಂದು ಹೇಳಿದ್ದಾರೆ.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೊರೊನಾ ವೈರಸ್ ನೆಗೆಟಿವ್
ಸಿಂಗೀತಂ ಶ್ರೀನಿವಾಸ್ ರಾವ್ ಚಿತ್ರಗಳ ಬಗ್ಗೆ.....
ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಸಿಂಗೀತಂ ಶ್ರೀನಿವಾಸ್ ರಾವ್ ಎಲ್ಲ ಭಾಷೆಗಳಲ್ಲೂ ಅತ್ಯುನ್ನತ ಪ್ರಶಸ್ತಿ ಪಡೆದಿದ್ದಾರೆ. ಬಾಲಕೃಷ್ಣ ಅವರ 'ಆದಿತ್ಯ 369', ಮೈಕಲ್ ಕಾಮರಾಜನ್, ಅಪೂರ್ವ ಸಗೋದರರ್ಗಳ್ ಅಂತಹ ಸಿನಿಮಾಗಳು ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು.
Recommended Video
ಕನ್ನಡ ಸಿನಿಮಾಗಳು ಯಾವುದು?
ಸಿಂಗೀತಂ ಶ್ರೀನಿವಾಸ್ ರಾವ್ ಅವರು ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಾಲುಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಭಾಗ್ಯದ ಲಕ್ಷ್ಮಿ ಬಾರಮ್ಮ, ಜ್ವಾಲಾಮುಖಿ, ಆನಂದ್, ಶ್ರುತಿ ಸೇರಿದಾಗ, ದೇವತಾ ಮನುಷ್ಯ, ಚಿರಂಜೀವಿ ಸಧಾಕರ್, ಸಂಯುಕ್ತಾ, ಕ್ರೀರಾ ಸಾಗರ, ಬೆಳ್ಳಿಯಪ್ಪಾ ಬಂಗಾರಪ್ಪ, ಟುವ್ವಿ ಟುವ್ವಿ ಟುವ್ವಿ ಹಾಗೂ ಮೇಕಪ್ ಚಿತ್ರ ಮಾಡಿದ್ದಾರೆ.