twitter
    For Quick Alerts
    ALLOW NOTIFICATIONS  
    For Daily Alerts

    ವಿಶಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ 'ಮನಸೆಲ್ಲಾ ನೀನೆ' ನಟಿ

    |

    ತಮಿಳಿನ ಖ್ಯಾತ ನಟ, ನಿರ್ಮಾಪಕ ವಿಶಾಲ್ ವಿರುದ್ಧ ನಟಿಯೊಬ್ಬರು ಲೈಂಗಿಕ ಕಿರುಕುಳದ ಗುರುತರ ಆರೋಪ ಮಾಡಿದ್ದಾರೆ. ವಿಶಾಲ್ ಹಾಗೂ ಆತನ ಕೆಲವು ಗೆಳೆಯರು ಹಲವಾರು ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದಿದ್ದಾರೆ ನಟಿ ಗಾಯತ್ರಿ ರಘುರಾಮ್.

    ಕನ್ನಡದ 'ಮನಸೆಲ್ಲಾ ನೀನೆ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಗಾಯತ್ರಿ ರಘುರಾಮ್ ಆ ನಂತರ ಕೊರಿಯೋಗ್ರಾಫರ್ ಆಗಿ ಗುರಿತಿಸಿಕೊಂಡರು. ಆ ನಂತರ ಬಿಗ್‌ಬಾಸ್‌ ಸ್ಪರ್ಧೆಯಿಂದ ಅವರಿಗೆ ಹೆಚ್ಚಿನ ಖ್ಯಾತಿ ದೊರಕಿತು. ನಂತರ ಈಗ ಬಿಜೆಪಿ ಸೇರಿ ರಾಜಕಾರಣಿ ಆಗಿದ್ದಾರೆ.

    ನಟ ವಿಶಾಲ್‌ ಕುರಿತು ಸರಣಿ ಟ್ವೀಟ್ ಮಾಡಿರುವ ಗಾಯತ್ರಿ ರಘುರಾಮ್, 'ವಿಶಾಲ್ ಹಾಗೂ ಗೆಳೆಯರು ಚಿತ್ರೋದ್ಯಮಕ್ಕೆ ಬರುವ ಹೊಸ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಸಿಕೊಂಡು ಬಿಸಾಡುವ ಪ್ರವೃತ್ತಿ ವಿವರದ್ದು' ಎಂದಿದ್ದಾರೆ ಗಾಯತ್ರಿ.

    ಬಳಸಿ ಬಿಸಾಡುವುದು ನಿನಗೆ ಅಭ್ಯಾಸವಾಗಿದೆ: ಗಾಯತ್ರಿ ರಘುರಾಮ್

    ಬಳಸಿ ಬಿಸಾಡುವುದು ನಿನಗೆ ಅಭ್ಯಾಸವಾಗಿದೆ: ಗಾಯತ್ರಿ ರಘುರಾಮ್

    'ಚಿತ್ರರಂಗದಲ್ಲಿ ಇರುವ ವ್ಯಕ್ತಿಯಾಗಿ ಮೊದಲಿಗೆ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು. ವಿಶಾಲ್ ಒಮ್ಮೆ ನಿನ್ನ ಸುತ್ತಲೂ ನೋಡು ಏನಾಗುತ್ತಿದೆ ಎಂದು. ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವ ನಟಿಯರ ಸ್ಥಿತಿ ಹೇಗಿದೆಯೆಂದು. ನಟಿಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡು. ನೀನು ಮತ್ತು ನಿನ್ನ ಗೆಳೆಯರು ಅದೇ ವಿಭಾಗಕ್ಕೆ ಸೇರಿದವರು. ಬಳಸಿ ಬಿಸಾಡುವುದು ನಿಮಗೆ ಅಭ್ಯಾಸವಾಗಿ ಹೋಗಿದೆ. ಸಾಕಷ್ಟು ಮಂದಿ ನಟಿಯರು ನಿಮ್ಮಿಂದ ತೊಂದರೆ ಅನುಭವಿಸಿದ್ದಾರೆ ಎಂದಿದ್ದಾರೆ ಗಾಯತ್ರಿ.

    ನಟಿಯರು ನಿನ್ನಿಂದ ದೂರ ಓಡುತ್ತಾರೆ: ಗಾಯತ್ರಿ

    ನಟಿಯರು ನಿನ್ನಿಂದ ದೂರ ಓಡುತ್ತಾರೆ: ಗಾಯತ್ರಿ

    ನೀನು ಪದೇ-ಪದೇ ಪೀಡಿಸುವ ಕಾರಣದಿಂದ ನಾಯಕ ನಟಿಯರಂತೂ ನಿನ್ನನ್ನು ಕಂಡು ದೂರ ಓಡುತ್ತಾರೆ. ಈ ವಿಷಯ ನಿನಗೆ ಗೊತ್ತಿದೆಯೇ? ಎಂದು ಪ್ರಶ್ನಿಸಿರುವ ಗಾಯತ್ರಿ, 'ಸಿನಿಮಾ ರಂಗದ ಯುವತಿಯರನ್ನು ಕಾಪಾಡಲು ನೀನು ನಿನ್ನ ಹೀರೋತನ ಪ್ರದರ್ಶಿಸಬೇಕಿತ್ತು. ಆದರೆ ನೀನು ವಿಲನ್‌ನಂತೆ ವರ್ತಿಸಿದೆ ಎಂದಿದ್ದಾರೆ.

    ನ್ಯಾಯಾಲಯದಲ್ಲಿ ವಿಶಾಲ್‌ಗೆ ಹಿನ್ನೆಲೆ

    ನ್ಯಾಯಾಲಯದಲ್ಲಿ ವಿಶಾಲ್‌ಗೆ ಹಿನ್ನೆಲೆ

    ವಿಶಾಲ್‌ ಮೇಲೆ ಇತ್ತೀಚಿನ ದಿನಗಳಲ್ಲಿ ಒಂದರ ಹಿಂದೊಂದರಂತೆ ಆರೋಪಗಳು ಬರುತ್ತಲೇ ಇವೆ. ವಿಶಾಲ್ ನಟಿಸಿದ್ದ 'ಆಕ್ಷನ್' ಹೆಸರಿನ ಸಿನಿಮಾ ನಿರ್ಮಾಪಕರು ವಿಶಾಲ್ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದರು. ನಿರ್ಮಾಪಕರಿಗೆ ಎಂಟು ಕೋಟಿ ಹಣ ನೀಡುವಂತೆ ನ್ಯಾಯಾಲಯವು ವಿಶಾಲ್‌ಗೆ ಸೂಚಿಸಿತ್ತು. ಮತ್ತೊಂದೆಡೆ ಯುವತಿ ಅನಿಶಾ ಜೊತೆಗೆ ಆಗಿದ್ದ ನಿಶ್ಚಿತಾರ್ಥವೂ ಮುರಿದು ಬಿತ್ತು.

    Recommended Video

    ಗುಟ್ಟಿನ ಮದುವೆಯ ಬಗ್ಗೆ ಮಾತನಾಡಿದ ಪ್ರಣೀತಾ | Filmibeat Kannada
    ಮಾಜಿ ಸಿಬ್ಬಂದಿಯಿಂದ ಗುರುತರ ಆರೋಪ

    ಮಾಜಿ ಸಿಬ್ಬಂದಿಯಿಂದ ಗುರುತರ ಆರೋಪ

    ಇನ್ನು ನಟ ವಿಶಾಲ್‌ ತೆರಿಗೆ ಸರಿಯಾಗಿ ಪಾವತಿಸಿಲ್ಲ ಎಂದು ದೂರು ದಾಖಲಾಗಿತ್ತು. ನಂತರ ವಿಶಾಲ್‌ರ ನಿರ್ಮಾಣ ಸಂಸ್ಥೆಯ ಮಹಿಳಾ ಉದ್ಯಮಿ ಒಬ್ಬರ ಮೇಲೆ ವಿಶಾಲ್ ಆರೋಪ ಮಾಡಿದರು. ಅವರೂ ಸಹ ವಿಶಾಲ್‌ ವಿರುದ್ಧ ಗುರುತರ ಆರೋಪಗಳನ್ನೇ ಮಾಡಿದರು. ಕೊನೆಗೆ ವಿಶಾಲ್‌ ಕಡೆಯವರು ಆ ಮಹಿಳಾ ಸಿಬ್ಬಂದಿಯ ಕಾರು ಗಾಜು ಒಡೆದಿದ್ದುದು ಸುದ್ದಿಯಾಗಿತ್ತು.

    English summary
    Bigg boss former contestant and actress Gayathri Raghuram made serious alligaitons on Tamil actor Vishal.
    Tuesday, June 1, 2021, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X