Don't Miss!
- Lifestyle ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪ-ಅಮ್ಮ ಸಹಾಯ ಮಾಡುತ್ತಿಲ್ಲ, ನಾನು ಕೆಲಸ ಮಾಡಲೇಬೇಕು; ಆರ್ಥಿಕ ಸಂಕಷ್ಟದಲ್ಲಿ ಶ್ರುತಿ ಹಾಸನ್
ಸೆಲೆಬ್ರಿಟಿಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ, ಅದರಲ್ಲೂ ಹಣಕಾಸಿನ ವಿಚಾರಕ್ಕೆ ಬಂದರೆ ಕೋಟಿ ಕೋಟಿ ಹೊಂದಿರುತ್ತಾರೆ, ಆರಾಮಾಗಿ ಕುಳಿತು ತಿಂದರೆ ಸಾಕು ಎಂದೇ ಬಹುತೇಕರು ಅಂದುಕೊಂಡಿರುತ್ತಾರೆ. ಆದರೆ ಎಲ್ಲಾ ಸೆಲೆಬ್ರಿಟಿಗಳು ಹಾಗಿರಲ್ಲ. ಕೆಲವರು ತೀರ ಕಷ್ಟ ಮತ್ತು ಆರ್ಥಿಕ ಸಂಕಷ್ಟದಿಂದ ಒದ್ದಾಡುತ್ತಿರುತ್ತಾರೆ. ಹಣಕ್ಕಾಗಿ ಅವರು ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇರುತ್ತೆ.
ಇದೀಗ ಭಾರತೀಯ ಸಿನಿಮಾರಂಗದ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಕೂಡ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರಂತೆ. ಇದು ಅಚ್ಚರಿ ಎನಿಸಿದರು ನಿಜ. ಖ್ಯಾತ ನಟನ ಮಗಳಾಗಿ ಆರ್ಥಿಕ ಸಂಕಷ್ಟನಾ? ಅಂತ ಪ್ರಶ್ನೆ ಮೂಡಬಹುದು. ಆದರೆ ಶ್ರುತಿ ಹಣಕಾಸಿನ ಸಮಸ್ಯೆಯಲ್ಲಿದ್ದು ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆಯಂತೆ. ಈ ಬಗ್ಗೆ ಸ್ವತಃ ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ. ಮುಂದೆ ಓದಿ..
ಚುನಾವಣೆಯಲ್ಲಿ ಸೋತ ಕಮಲ್ ಹಾಸನ್ಗೆ ಪುತ್ರಿ ಶ್ರುತಿ ಹಾಸನ್ ಹೇಳಿದ್ದೇನು?
ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇದೆ
ಈ ಬಗ್ಗೆ ಮಾತನಾಡಿರುವ ಶ್ರುತಿ 'ನಾನು ಮರೆಮಾಚಲು ಸಾಧ್ಯವಿಲ್ಲ. ನನಗೆ ಸಾಂಕ್ರಾಮಿಕ ರೋಗ ಕೊನೆಗೊಳ್ಳುವ ವರೆಗೂ ಕಾಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಆರೋಗ್ಯದ ಬಗ್ಗೆ ಭಯದ ನಡುವೆಯೂ ಚಿತ್ರೀಕರಣ ಮಾಡುವುದು ಕಠಿಣವಾಗಿದೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಕೆಲಸ ಪ್ರಾರಂಭ ಮಾಡುವುದು ಮುಖ್ಯವಾಗಿದೆ' ಎಂದಿದ್ದಾರೆ.
ಲಾಕ್ ಡೌನ್ ಮುಗಿಯುತ್ತಿದ್ದಂತೆ ಕೆಲಸ ಶುರುಮಾಡಿತ್ತೇನೆ
'ನಾನು ಸುಳ್ಳು ಹೇಳಲು ಹೋಗುವುದಿಲ್ಲ. ಆದರೆ ನಾನು ಕೆಲಸಕ್ಕೆ ಹೋಗಲೇ ಬೇಕಾಗಿದೆ. ಏಕೆಂದರೆ ನಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ' ಎಂದು ಹೇಳಿದ್ದಾರೆ. 'ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ ನಾನು ಭಾಗಿಯಾಗುತ್ತೇನೆ. ನನ್ನ ಎಲ್ಲಾ ವೃತ್ತಿಪರ ಬದ್ಧತೆಗಳನ್ನು ಪೂರ್ಣಗೊಳಿಸಬೇಕು' ಎಂದಿದ್ದಾರೆ ಶ್ರುತಿ.
ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ಪಾತ್ರ ರಿವೀಲ್
ತಂದೆ-ತಾಯಿ ಸಹಾಯ ಮಾಡಲ್ಲ
'ನಾನು ಬಿಲ್ ಗಳನ್ನು ಪಾವತಿಸಬೇಕು. ನನ್ನ ಬಿಲ್ ಗಳನ್ನು ನಾನೆ ಪಾವತಿಸುತ್ತೇನೆ, ಹಾಗಾಗಿ ಕೆಲಸಕ್ಕೆ ಹೋಗಲೆ ಬೇಕಾಗಿದೆ. ನಾನು ಸ್ವತಂತ್ರ ಮಹಿಳೆ. ನನ್ನ ಮಿತಿಗಳನ್ನು ನಾನು ಹೊಂದಿದ್ದೇನೆ. ನನ್ನ ತಂದೆ-ತಾಯಿ ನನಗೆ ಸಹಾಯ ಮಾಡುತ್ತಿಲ್ಲ' ಎಂದು ಶ್ರುತಿ ಹಾಸನ್ ಹೇಳಿದ್ದಾರೆ.
Recommended Video
ಸಾಂಕ್ರಾಮಿಕ ರೋಗದ ಮೊದಲು ಮನೆ ಖರೀದಿಸಿದೆ
'ಒಳ್ಳೆಯದಾಗಿರಬಹುದು ಅಥವ ಕೆಟ್ಟದಾಗಿರಬಹುದು ಎಲ್ಲಾ ನಿರ್ಧಾರಗಳನ್ನು ನಾನೆ ತೆಗೆದುಕೊಳ್ಳುತ್ತೇನೆ. ಕೊರೊನಾ ಸಾಂಕ್ರಾಮಿಕ ರೋಗದ ಮೊದಲು ದೊಡ್ಡ ವಸ್ತುಗಳನ್ನು ಅಂದರೆ ಕಾರು, ಮನೆ ಖರೀದಿ ಮಾಡದೆ ಇರುವ ಕೆಲವು ಸ್ಮಾರ್ಟ್ ಜನರಿದ್ದಾರೆ. ಆದರೆ ನಾನು ಮನೆ ಖರೀದಿಸಿದೆ. ಹಾಗಾಗಿ ನನಗೆ ಆರ್ಥಿಕ ನಿರ್ಭಂದಗಳಿವೆ' ಎಂದು ಶ್ರುತಿ ತನ್ನ ಆರ್ಥಿಕ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.