twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪನ ಆರೋಗ್ಯದಲ್ಲಿ ಚೇತರಿಕೆಯಿಲ್ಲ: ಕಣ್ಣೀರಿಟ್ಟ ಎಸ್‌ಪಿ ಬಾಲಸುಬ್ರಹ್ಮಣ್ಯಂ ಪುತ್ರ

    |

    ಕೊರೊನಾ ವೈರಸ್‌ಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿರುವ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡು ಬಂದಿಲ್ಲ. ಅವರಿನ್ನೂ ವೆಂಟಿಲೇಟರ್‌ನಲ್ಲೇ ಮುಂದುವರೆದಿದ್ದಾರೆ.

    Recommended Video

    ಬ್ಲಾಕ್ ಟಿಕೆಟ್ ಮಾರಿ ಸೈಟ್ ತಗೊಂಡಿದ್ರು ಅಭಿಮಾನಿಗಳು | Filmibeat Kannada

    ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಕುರಿತು ಅಭಿಮಾನಿಗಳು, ಸಿನಿರಂಗದ ಗೆಳೆಯರು, ಸಂಗೀತಲೋಕದ ಗೆಳೆಯರು ಆತಂಕದಲ್ಲಿದ್ದಾರೆ.

    ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ: ವೈದ್ಯರು ಹೇಳಿದ್ದೇನು?ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ: ವೈದ್ಯರು ಹೇಳಿದ್ದೇನು?

    ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಗೆ ದಾಖಲಾದಾಗಿನಿಂದಲೂ ಅವರ ಪುತ್ರ ಚರಣ್ ಅವರು ತಂದೆಯ ಆರೋಗ್ಯದ ಕುರಿತು ಪ್ರತಿದಿನ ವಿಡಿಯೋ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇಂದು ಗುರುವಾರವೂ ಸಹ ವಿಡಿಯೋ ಹಂಚಿಕೊಂಡಿರುವ ಚರಣ್, ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಅಪ್ಪನ ಆರೋಗ್ಯದ ಬಗ್ಗೆ ಚರಣ್ ಚಿಂತಿತ

    ಅಪ್ಪನ ಆರೋಗ್ಯದ ಬಗ್ಗೆ ಚರಣ್ ಚಿಂತಿತ

    ಇಂದಿನ ವಿಡಿಯೋದಲ್ಲಿ, ಅಪ್ಪನ ಆರೋಗ್ಯದ ಬಗ್ಗೆ ಚಿಂತಿತರಾದಂತೆ ಕಾಣುತ್ತಿರುವ ಚರಣ್, ಅಪ್ಪನ ಚೇತರಿಕೆಗಾಗಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಪ್ರಾರ್ಥಿಸುತ್ತಿರುವ ಎಲ್ಲರಿಗೂ ನಮ್ಮ ಇಡೀಯ ಕುಟುಂಬ ಋಣಿಯಾಗಿದೆ ಎಂದು ಹೇಳಿದ್ದಾರೆ.

    ಭಾವುಕರಾಗಿ ಕಣ್ಣೀರು ಹಾಕಿದ ಎಸ್‌ಪಿಬಿ ಪುತ್ರ

    ಭಾವುಕರಾಗಿ ಕಣ್ಣೀರು ಹಾಕಿದ ಎಸ್‌ಪಿಬಿ ಪುತ್ರ

    ಅಪ್ಪನ ಆರೋಗ್ಯ ಯಥಾಸ್ಥಿತಿಯಲ್ಲಿ ಮುಂದುವರೆದಿದೆ ಎಂದು ಹೇಳಿರುವ ಚರಣ್, ಹೀಗೆಯೇ ಪ್ರಾರ್ಥಿಸುತ್ತಿರಿ, ಪ್ರಾರ್ಥನೆ ದೇವರಿಗೆ ತಲುಪಿಯೇ ತೀರುತ್ತದೆ. ದೇವರು ಕರುಣಾಳು ಅವನು ಅಪ್ಪನನ್ನು ನಮ್ಮೊಂದಿಗೆ ಇರುವಂತೆ ಮಾಡುತ್ತಾನೆ ಎಂದು ಹೇಳುತ್ತಾ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.

    'ಅಣ್ಣಯ್ಯ ಬೇಗ ಬನ್ನಿ...' ಎಸ್‌ಪಿಬಿ ಕುರಿತು ಚಿರಂಜೀವಿ ಭಾವುಕ'ಅಣ್ಣಯ್ಯ ಬೇಗ ಬನ್ನಿ...' ಎಸ್‌ಪಿಬಿ ಕುರಿತು ಚಿರಂಜೀವಿ ಭಾವುಕ

    ಚಿತ್ರರಂಗದ ಗಣ್ಯರು ಪ್ರಾರ್ಥನೆ ಮಾಡಿದ್ದಾರೆ

    ಚಿತ್ರರಂಗದ ಗಣ್ಯರು ಪ್ರಾರ್ಥನೆ ಮಾಡಿದ್ದಾರೆ

    ಗುರುವಾರ ಸಂಜೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅಭಿಮಾನಿಗಳು, ಚಿತ್ರರಂಗದ ಗೆಳೆಯರಾದ ರಜನೀಕಾಂತ್, ಕಮಲ್‌ಹಾಸನ್, ಚಿರಂಜೀವಿ, ಕನ್ನಡದ ಶಿವರಾಜ್ ಕುಮಾರ್ ಹೀಗೆ ಹಲವರು ಎಸ್‌ಪಿಬಿ ಶೀಘ್ರ ಚೇತರಿಕೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.

    ಆಗಸ್ಟ್ 5 ರಂದು ಎಸ್‌ಪಿಬಿಗೆ ಕೊರೊನಾ ಆಗಿತ್ತು

    ಆಗಸ್ಟ್ 5 ರಂದು ಎಸ್‌ಪಿಬಿಗೆ ಕೊರೊನಾ ಆಗಿತ್ತು

    ಆಗಸ್ಟ್ 5 ರಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ವೈರಸ್ ಇರುವುದು ಖಾತ್ರಿಯಾಗಿತ್ತು. ಅಂದೇ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 14 ರಂದು ಅವರನ್ನು ಐಸಿಯುಗೆ ವರ್ಗಾಯಿಸಲಾಗಿತ್ತು. ಇದೀಗ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂದು ಅವರ ಎಸ್‌ಪಿಬಿ ಪುತ್ರ ತಿಳಿಸಿದ್ದಾರೆ.

    'ಎಸ್‌ಪಿಬಿ ಬೇಗ ಹಾಡುವಂತಾಗಲಿ....' ಮಂಗಳಮುಖಿಯರು ಪ್ರಾರ್ಥನೆ'ಎಸ್‌ಪಿಬಿ ಬೇಗ ಹಾಡುವಂತಾಗಲಿ....' ಮಂಗಳಮುಖಿಯರು ಪ್ರಾರ್ಥನೆ

    English summary
    Singer SP Balasubrahmanyam health continued to be critical he is in still in ventilator support. His son gets emotional.
    Friday, August 21, 2020, 9:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X