Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಸ್ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ: ಆಸ್ಪತ್ರೆ ನೀಡಿದ ಅಧಿಕೃತ ಮಾಹಿತಿ
ಇಂದು (ಆಗಸ್ಟ್ 24) ರ ಮುಂಜಾನೆಯಿಂದ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದ ಕುರಿತು ಹಲವಾರು ಗಾಳಿಸುದ್ದಿಗಳು ಹರಿದಾಡುತ್ತಿದೆ.
Recommended Video
ಮೊದಲಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ವೈರಸ್ ನೆಗೆಟಿವ್ ವರದಿ ಬಂದಿದೆ ಎನ್ನಲಾಗಿತ್ತು. ಆದರೆ ನಂತರ ಅದು ಸುಳ್ಳು ಅವರ ಸ್ಥಿತಿ ಗಂಭೀರವಾಗಿದೆ ಎಂಬ ವರದಿ ಹೊರಬಿದ್ದಿತು. ಅಂತಿಮವಾಗಿ ಪುತ್ರ ಚರಣ್ ಕೊಟ್ಟ ಮಾಹಿತಿಯಂತೆ, ಎಸ್ಪಿಬಿ ಅವರಿಗೆ ಕೊರೊನಾ ನೆಗೆಟಿವ್ ಬಂದಿದೆ ಎಂಬ ವರದಿ ಕಣ್ತಿಪ್ಪಿನಿಂದ ಆಗಿದೆ.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಗೆ ಕೊರೊನಾ ಸೋಂಕು ತಗುಲಿದ್ದು ಯಾರಿಂದ?
ಎರಡು ವಾರಗಳ ಬಳಿಕ ಇಂದು ಎಸ್ಪಿಬಿ ಅವರನ್ನು ಭೇಟಿ ಆಗಿದ್ದಾಗಿ ಚರಣ್ ಹೇಳಿದ್ದಾರೆ. ಎಸ್ಪಿಬಿ ಅವರೊಂದಿಗೆ ಮಾತನಾಡಿದೆ. ಜನರ ಪ್ರಾರ್ಥನೆಯನ್ನು ಅವರಿಗೆ ತಲುಪಿಸಿದೆ. ಅವರ ರೂಂ ನಲ್ಲಿ ಸಂಗೀತ ಹಾಕಿದೆ, ಅದನ್ನು ಅವರು ಆಲಿಸಿದರು ಎಂದು ಚರಣ್ ವಿಡಿಯೋದಲ್ಲಿ ವಿವರಿಸಿದ್ದಾರೆ.
ಎಲ್ಲರ ಬಗ್ಗೆ ವಿಚಾರಿಸಿದರು ಎಸ್ಪಿಬಿ: ಚರಣ್
ತಾವು ಹುಷಾರಾಗುತ್ತಿರುವುದಾಗಿ ಎಸ್ಪಿಬಿ ಹೇಳಿದರು. ಅಮ್ಮನ ಬಗ್ಗೆ ಇನ್ನಿತರರ ಬಗ್ಗೆ ಅವರು ವಿಚಾರಿಸಿದರು. ವೆಂಟಿಲೇಟರ್ನಲ್ಲಿ ಇರುವ ಕಾರಣ ಮಾತನಾಡದೆ ಬಹುತೇಕ ಸಂಜ್ಞೆಯಲ್ಲಿಯೇ ಅವರು ಮಾತನಾಡಿದರು ಎಂದಿದ್ದಾರೆ ಚೇತನ್.
ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ
ಚೆನ್ನೈನ ಎಂಜಿಎಂ ಆಸ್ಪತ್ರೆಯು ಸಂಜೆ ವೇಳೆಗೆ ಎಸ್ಪಿಬಿ ಅವರ ಆರೋಗ್ಯದ ಕುರಿತಂತೆ ಅಧಿಕೃತ 'ಹೆಲ್ತ್ ಬುಲೆಟಿನ್' ಬಿಡುಗಡೆ ಮಾಡಿದ್ದು, ಎಸ್ಪಿಬಿ ಆರೋಗ್ಯ ಗಂಭೀರ ಪರಿಸ್ಥಿತಿಯಲ್ಲಿಯೇ ಮುಂದುವರೆಯುತ್ತಿದೆ ಎಂದು ಹೇಳಿದೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಕುರಿತು ಹರಿದಾಡುತ್ತಿದ್ದ ವದಂತಿಗೆ ತೆರೆ ಎಳೆದ ಪುತ್ರ ಚರಣ್
ವೆಂಟಿಲೇಟರ್ನಲ್ಲೇ ಮುಂದುವರೆದಿರುವ ಎಸ್ಪಿಬಿ
ಎಸ್ಪಿಬಿ, ವೆಂಟಿಲೇಟರ್ ಹಾಗೂ ಇಸಿಎಂವೋ ಸಹಾಯದಲ್ಲಿಯೇ ಇದ್ದಾರೆ. ಎಸ್ಪಿಬಿ ಅವರ ಸದ್ಯದ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದಿರುವ ಆಸ್ಪತ್ರೆ. ಆರೋಗ್ಯದಲ್ಲಿ ಮಂದಗತಿಯ ಚೇತರಿಕೆ ಕಾಣುತ್ತಿದೆ ಎಂದಿದೆ. ಎಸ್ಪಿಬಿ ಆರೋಗ್ಯದ ಬಗ್ಗೆ ತೀವ್ರ ನಿಘಾವಹಿಸಲಾಗಿದೆ ಎಂದಿದೆ.
ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಸ್ಪಿಬಿ
ಎಸ್ಪಿಬಿ ಅವರು ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಪಾಸಿಟಿವ್ ಆದಾಗ ಮನೆಯಲ್ಲೇ ಇದ್ದ ಅವರಿಗೆ ನಂತರ ಎದೆನೋವು ಕಾಣಿಸಿಕೊಂಡಿತ್ತು. ಹಾಗಾಗಿ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರು. ಆಗಸ್ಟ್ 9 ರಂದು ಅವರನ್ನು ಐಸಿಯುಗೆ ವರ್ಗಾಯಿಸಲಾಗಿತ್ತು.