Don't Miss!
- Lifestyle ಫಳ ಫಳ ಹೊಳೆಯುವ ಕೆಂಪು ನಾಗರ ನೋಡಿದ್ದೀರಾ..? ವೈರಲ್ ಆಗ್ತಿದೆ ವಿಡಿಯೋ..!
- Technology ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
- News ಜಗದೀಶ್ ಶೆಟ್ಟರ್ಗೆ ಬೆಳಗಾವಿ ಸ್ಪರ್ಧೆ ಮತ್ತಷ್ಟು ಜಟೀಲ: ಗೋಬ್ಯಾಕ್ ಅಭಿಯಾನ ಯಶಸ್ವಿ ಆಯ್ತಾ?
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Sports IPL ಬಿಡಿ, WPLನಲ್ಲಿ ಆರ್ಸಿಬಿಗೆ ಗೆದ್ದ ಮೊತ್ತಕ್ಕೂ ಸಮವಿಲ್ಲ PSL ವಿಜೇತರಿಗೆ ಸಿಕ್ಕ ಬಹುಮಾನ
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಕ್ಡೌನ್ನಲ್ಲಿಯೇ ಕಿರುಚಿತ್ರ ನಿರ್ದೇಶಿಸಿದ ಸುಹಾಸಿನಿ ಮಣಿರತ್ನಂ
ನಟಿ, ನಿರ್ದೇಶಕಿ ಸುಹಾಸಿನಿ ಮಣಿರತ್ನಂ ಲಾಕ್ ಡೌನ್ ಅವಧಿಯಲ್ಲಿಯೇ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಸುಹಾಸಿನಿ, ಕೊರೊನಾ ವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದರು. ವಿದೇಶದಿಂದ ಬಂದ ಮಗ ನಂದನ್ ಸ್ವಯಂ ದಿಗ್ಬಂಧನಕ್ಕೆ ಒಳಗಾದ ಇತ್ತೀಚಿನ ವಿಡಿಯೋ ವೈರಲ್ ಆಗಿತ್ತು.
Recommended Video
ಈ ಎಲ್ಲ ಚಟುವಟಿಕೆಗಳ ನಡುವೆಯೇ ಲಾಕ್ ಡೌನ್ ಸಮಯವನ್ನು ಅವರು ಕಿರುಚಿತ್ರ ನಿರ್ದೇಶನಕ್ಕೆ ಬಳಸಿಕೊಂಡಿದ್ದಾರೆ. 20 ನಿಮಿಷಗಳ ಈ ಕಿರುಚಿತ್ರದ ಹೆಸರು 'ಚಿನ್ನಂಜಿರು ಕಿಲಿಯೆ'. ಈ ಕಿರುಚಿತ್ರವನ್ನು ಅವರು ಸಂಪೂರ್ಣವಾಗಿ ಒಳಾಂಗಣದಲ್ಲಿಯೇ ಚಿತ್ರೀಕರಿಸಿದ್ದಾರಂತೆ.
ಚಿತ್ರದ ಶೀರ್ಷಿಕೆಯ ಲುಕ್ಅನ್ನು ಇನ್ಸ್ಟಾಗ್ರಾಂನಲ್ಲಿ ಸುಹಾಸಿನಿ ಹಂಚಿಕೊಂಡಿದ್ದಾರೆ. 'ನನ್ನ ಲಾಕ್ ಡೌನ್ ಕಥೆಗಳು. ಮೊದಲ ಕಥೆ 20 ನಿಮಿಷಗಳ ಶಾರ್ಟ್ ಫಿಲಂ ಮುಂದೆ ಬರಲಿದೆ. ಅದರ ಮೊದಲ ಔಟ್ಪುಟ್ ಇಂದು ಸಿಕ್ಕಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಕಿರುಚಿತ್ರವನ್ನು ನೀವು ನೋಡಬಹುದು' ಎಂದು ಅವರು ತಿಳಿಸಿದ್ದಾರೆ.
ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ನಟಿ ಅಹಾನಾ ಕೃಷ್ಣ ಈ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಫೋನ್ ಬಳಸಿ ತಮ್ಮ ತಮ್ಮ ಮನೆಗಳಲ್ಲಿಯೇ ಸಂಪೂರ್ಣ ಕಿರುಚಿತ್ರ ಚಿತ್ರೀಕರಿಸಲಾಗಿದೆ. ಜೇಮ್ಸ್ ವಸಂತನ್ ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.