ದುಬೈ ಕಾರ್ ರೇಸ್ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ ನಟ ಅಜಿತ್; ಪತ್ನಿಗೆ ಮುತ್ತಿಟ್ಟು ಸಂಭ್ರಮ

ತಮಿಳು ನಟ ಅಜಿತ್ ಸಿನಿಮಾಗಳಲ್ಲಿ ನಟಿಸೋದು ಮಾತ್ರವಲ್ಲ, ಆಗಾಗ್ಗೆ ಕಾರ್‌ ರೇಸ್‌ಗೂ ಹೋಗುತ್ತಾರೆ. ಬೈಕ್ ಕ್ರೇಜ್ ಕೂಡ ಇದೆ. ಕೆಲ ದಿನಗಳ ಹಿಂದೆ ಬೈಕ್ ಏರಿ 3 ದೇಶ ಸುತ್ತಿ ಬಂದಿದ್ದರು. ಇತ್ತೀಚೆಗೆ ದುಬೈ ಕಾರ್ ರೇಸ್‌ನಲ್ಲಿ ಅಜಿತ್ ಭಾಗಿ ಆಗಿದ್ದರು. ಇತ್ತೀಚೆಗೆ ಟ್ರ್ಯಾಕ್‌ನಲ್ಲಿ ಕಾರ್ ಚಲಾಯಿಸುವಾಗ ಅವಘಡ ಸಂಭವಿಸಿತ್ತು.

ಇತ್ತೀಚೆಗೆ 'ಅಜಿತ್ ಕುಮಾರ್ ರೇಸಿಂಗ್' ಹೆಸರಿನ ಒಂದು ರೇಸಿಂಗ್ ತಂಡವನ್ನು ಘೋಷಿಸಿದ್ದರು. ದುಬೈನಲ್ಲಿ ನಡೆದ '24H ದುಬೈ ರೇಸಿಂಗ್'ನಲ್ಲಿ ಅವರ ತಂಡ ಭಾಗಿ 3ನೇ ಸ್ಥಾನ ಪಡೆದಿದೆ. 'ಸ್ಪಿರಿಟ್ ಆಫ್ ರೇಸ್' ಟೈಟಲ್ ಅನ್ನು ತಂಡ ತನ್ನದಾಗಿಸಿಕೊಂಡಿದೆ. ಈ ವಿಚಾರ ಥಲಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

Tamil actor Ajith Kumar and team Wins Dubai 24H 2025 Race

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಆಪ್ತರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿಸುತ್ತಿದ್ದಾರೆ. ಇನ್ನು ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಬಳಿಕ ಅಜಿತ್ ಸಂಭ್ರಮಾಚರನೆಯ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಪತ್ನಿ ಮುತ್ತಿಟ್ಟು ಅಜಿತ್ ಸಂಭ್ರಮಿಸಿದ್ದಾರೆ. ತ್ರಿವರ್ಣ ಧ್ವಜ ಹಿಡಿದು ನಟ ರ್ಯಾಕಿಂಗ್ ಸ್ಟ್ಯಾಂಡ್ ಏರಿದ್ದಾರೆ.

13 ವರ್ಷಗಳ ಬಳಿಕ ನಟ ಅಜಿತ್ ರೇಸಿಂಗ್‌ನಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ತಾಲೀಮು ನಡೆಸುವ ವೇಳೆ ಕಾರ್ ಅಪಘಾತವಾಗಿತ್ತು. ಆದರೆ ಯಾವುದೇ ಸಮಸ್ಯೆ ಇಲ್ಲದೇ ಪಾರಾಗಿದ್ದರು. ಇದನ್ನು ನೋಡಿ ಅಭಿಮಾನಿಗಳು ಯಾವ ರೇಸ್ ಬೇಡ, ನೀವು ಸಿನಿಮಾಗಳಲ್ಲಿ ನಟಿಸಿ ಸಾಕು ಎನ್ನುತ್ತಿದ್ದರು. ಆದರೆ ಅದೆಲ್ಲವನ್ನು ಮೆಟ್ಟಿ ರೇಸಿಂಗ್‌ನಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ತಾಲೀಮು ನಡೆಸಿದ್ದರು.

ಅಜಿತ್ ಕಾರ್ ರೇಸ್‌ನಲ್ಲಿ ಗೆಲ್ಲುತ್ತಿದ್ದಂತೆ ಆಪ್ತರು, ರಾಜಕೀಯ ಮುಖಂಡರು, ಸಿನಿಮಾ ತಾರೆಯರು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ತೆಲುಗು ನಟ ನಾಗಚೈತನ್ಯಗೂ ಕಾರ್‌ ರೇಸ್ ಕ್ರೇಜ್ ಇದೆ. ಹಾಗಾಗಿ ಅಜಿತ್ ಗೆಲುವು ಸಾಧಿಸುತ್ತಿದ್ದಂತೆ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ನಟ, ರಾಜಕೀಯ ಮುಖಂಡ ಕಮಲ್ ಹಾಸನ್, ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವರು ಅಭಿನಂದನೆ ತಿಳಿಸಿ ಟ್ವೀಟ್ ಮಾಡಿದ್ದಾರೆ.

ಅಜಿತ್ ಸದ್ಯ 'ವಿಡಾಮಯರ್ಚಿ' ಹಾಗೂ 'ಗುಡ್‌ ಬ್ಯಾಡ್ ಅಗ್ಲಿ' ಎಂಬ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲೇ 'ವಿಡಾಮಯರ್ಚಿ' ಸಿನಿಾ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.

ಮಗಿಳ್ ತಿರುಮನೇನಿ ಸಾರಥ್ಯದ 'ವಿಡಾಮಯರ್ಚಿ' ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಸರ್ಜಾ, ರೆಜಿನಾ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಾಲಿವುಡ್ 'ಬ್ರೇಕ್‌ಡೌನ್' ಚಿತ್ರದ ರೀಮೆಕ್ ಇದು ಎನ್ನಲಾಗ್ತಿದೆ. ಏಪ್ರಿಲ್ 10ಕ್ಕೆ 'ಗುಡ್‌ ಬ್ಯಾಡ್ ಅಗ್ಲಿ' ಸಿನಿಮಾ ತೆರೆಗೆ ಬರಲಿದೆ. ಆ ಚಿತ್ರದಲ್ಲೂ ಅಜಿತ್‌ಗೆ ತ್ರಿಶಾ ನಾಯಕಿಯಾಗಿದ್ದಾರೆ.

ಅದಿಕ್ ರವಿಚಂದ್ರನ್ 'ಗುಡ್‌ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಜಿತ್ ಶೀಘ್ರದಲ್ಲೇ ಬೈಕ್ ಏರಿ ಮತ್ತೆ ವಿಶ್ವ ಪರ್ಯಟನೆಗೆ ಹೊರಡಲಿದ್ದಾರೆ. ಈ ಹಿಂದೆ ಭಾರತ, ನೇಪಾಳ್, ಭೂತಾನ್ ದೇಶಗಳಲ್ಲಿ ಅಜಿತ್ ತಮ್ಮ ತಂಡದ ಜೊತೆ ಸುತ್ತಾಡಿ ಬಂದಿದ್ದರು.

ವಿಶ್ವ ಪರ್ಯಟನೆಯ ವೇಳೆ ಅಜಿತ್ ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿದ್ದರು. ಲಡಾಖ್‌ನಲ್ಲಿ ಕನ್ನಡಿರೊಬ್ಬರ ಬೈಕ್ ಪಂಕ್ಚರ್ ಆಗಿದ್ದಾಗ ಖುದ್ದು ತಾವೇ ಸಹಾಯ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಪೋಸ್ಟ್ ವೈರಲ್ ಆಗಿತ್ತು. 2013ರಲ್ಲಿ ಒಮ್ಮೆ ತಮಿಳು ನಟ ಚೆನ್ನೈನಿಂದ ಪುಣೆಗೆ BMW ಬೈಕ್ ಸವಾರಿ ಮಾಡಿದ್ದರು.

ತಮ್ಮ ಸಿನಿಮಾಗಳ ಚಿತ್ರೀಕರಣದ ವೇಳೆ ಬೈಕ್, ಕಾರ್‌ ಸ್ಟಂಟ್‌ಗಳನ್ನು ಯಾವುದೇ ಡ್ಯೂಪ್ ಇಲ್ಲದೇ ಸ್ವತಃ ಅಜಿತ್ ಮಾಡುತ್ತಾರೆ. ಇದೇ ಕಾರಣಕ್ಕೆ ಕೆಲವೊಮ್ಮೆ ಅವಘಡಗಳು ಸಂಭವಿಸಿವುದು ಇದೆ. 'ವಾಲಿಮೈ' ಚಿತ್ರದ ಚಿತ್ರೀಕರಣದ ವೇಳೆ ಬೈಕ್‌ನಿಂದ ಬಿದ್ದಿದ್ದರು. 'ವಿಡಾಮುಯರ್ಚಿ' ಚಿತ್ರದ ಶೂಟಿಂಗ್ ವೇಳೆ ಕಾರ್ ಸ್ಟಂಟ್ ವೀಡಿಯೋ ವೈರಲ್ ಆಗಿತ್ತು.

More from Filmibeat

English summary
Actor Ajith and team secure an 3rd place at the Dubai 24H Endurance Race 2025; actor celebrates his winning moment wife Shalini
Read more about: ajith kollywood tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X