ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಯ ಮೊಬೈಲ್ ಕಸಿದುಕೊಂಡ ನಟ ಅಜಿತ್
ತಮಿಳುನಾಡು ಚುನಾವಣೆ ಹಿನ್ನೆಲೆ ಸಿನಿಮಾ ನಟರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು. ರಜನಿಕಾಂತ್, ಕಮಲ್ ಹಾಸನ್, ವಿಜಯ್, ವಿಜಯ್ ಸೇತುಪತಿ, ಅಜಿತ್, ಸೂರ್ಯ, ಕಾರ್ತಿ ಸೇರಿದಂತೆ ಹಲವು ಸ್ಟಾರ್ಗಳು ವೋಟ್ ಮಾಡಿದರು. ಈ ವೇಳೆ ನೆಚ್ಚಿನ ಸ್ಟಾರ್ಗಳನ್ನು ನೋಡಲು ಜನರು ಮುಗಿಬಿದ್ದರು. ಕೋವಿಡ್ ಎನ್ನುವುದನ್ನು ಮರೆತು ನಟರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸಿದರು.
Recommended Video
ತಮಿಳು ನಟ ಅಜಿತ್ ಕುಮಾರ್ ಮತ್ತು ಶಾಲಿನಿ ದಂಪತಿ ಮತದಾನ ಮಾಡಲು ಮತಗಟ್ಟೆಗೆ ಧಾವಿಸಿದ ವೇಳೆ ಅಭಿಮಾನಿಯೊಬ್ಬ ಫೋಟೋಗಾಗಿ ಮುಗಿಬಿದ್ದ. ಇದರಿಂದ ತೀವ್ರವಾಗಿ ಕೋಪಗೊಂಡ ಅಜಿತ್, ಆ ಅಭಿಮಾನಿಯ ಮೊಬೈಲ್ ಕಸಿದುಕೊಂಡರು.
ಅಭಿಮಾನಿಯಿಂದ ಮೊಬೈಲ್ ಕಸಿದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಜಿತ್ ಅವರ ನಡೆಗೆ ಟೀಕೆ ವ್ಯಕ್ತವಾಗಿದೆ. ಅಜಿತ್ ಸರಳ ವ್ಯಕ್ತಿತ್ವದ ನಟ, ಅಭಿಮಾನಿಗಳನ್ನು ಗೌರವಿಸುವ ನಟ, ಆದರೆ ಅವರು ಈ ರೀತಿ ಮೊಬೈಲ್ ಕಸಿದುಕೊಳ್ಳುವುದು ಸರಿ ಕಾಣಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದವು.

ನಂತರ ಈ ವಿಡಿಯೋ ಬಗ್ಗೆ ಅಜಿತ್ ಅಭಿಮಾನಿಗಳು ಸ್ಪಷ್ಟನೆ ನೀಡಿದ್ದಾರೆ. ಆ ಅಭಿಮಾನಿ ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ, ಹಾಗಾಗಿ, ಅಜಿತ್ ಅವರು ಫೋನ್ ಕಸಿದುಕೊಂಡರು. ನಂತರ, ಅವರನ್ನು ಕರೆದು ಬುದ್ದಿವಾದ ಹೇಳಿ ಮೊಬೈಲ್ ಹಿಂತಿರುಗಿಸಿದರು. ಈ ವೇಳೆ ಆ ಅಭಿಮಾನಿಗೆ ಕ್ಷಮೆ ಸಹ ಕೇಳಿದ್ದಾರೆ ಎಂದು ತಿಳಿಸಿದರು.
ಮೊಬೈಲ್ ಕಸಿದುಕೊಂಡಿದ್ದ ವ್ಯಕ್ತಿಗೆ ನಟ ಅಜಿತ್ ಖುದ್ದು ಮೊಬೈಲ್ ಹಿಂತಿರುಗಿಸಿ ಕ್ಷಮೆ ಕೇಳಿದ ವಿಡಿಯೋ ಸಹ ವೈರಲ್ ಆಗಿದೆ.
ಅಜಿತ್ ನಟಿಸಿರುವ 'ವಾಲಿಮೈ' ಸಿನಿಮಾ ಬಿಡುಗಡೆಯಾಗಬೇಕಿದೆ. ಅಜಿತ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಸದ್ಯಕ್ಕೆ ವಾಲಿಮೈ ಚಿತ್ರ ರಿಲೀಸ್ ದಿನಾಂಕದ ಬಗ್ಗೆ ಮಾಹಿತಿ ಇಲ್ಲ.


Click it and Unblock the Notifications











