Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಟಿ ವಿಚಾರಣೆ ನಂತರ ಮತ್ತೆ ಚಿತ್ರೀಕರಣಕ್ಕೆ ಮರಳಿದ ನಟ ವಿಜಯ್
ಕಾಲಿವುಡ್ ಸ್ಟಾರ್ ನಟ ಇಳಯದಳಪತಿ ವಿಜಯ್ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಐಟಿ ಅಧಿಕಾರಿಗಳು ನಟ ವಿಜಯ್ ವಿಚಾರಣೆ ಮಾಡುತ್ತಿದ್ದರು. ಮನೆ ಮತ್ತು ಆಫೀಸ್ ಸೇರಿದಂತೆ ಸಾಕಷ್ಟು ಕಡೆ ಶೋಧ ಕಾರ್ಯನಡೆಸಿದ್ದ ಐಟಿ ಅಧಿಕಾರಿಗಳು ವಿಚಾರಣೆ ಮುಗಿಸಿದ್ದಾರೆ.
ವಿಜಯ್ ಸದ್ಯ ಮಾಸ್ಟರ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಾಸ್ಟರ್ ಸಿನಿಮಾ ಸದ್ಯ ತಮಿಳುನಾಡಿನ ನಯೆವೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ವಿಚಾರಣೆಯ ನಂತರ ವಿಜಯ್ ಮತ್ತೆ ಚಿತ್ರೀಕರಣಕ್ಕೆ ಮರಳಿರುವ ಫೋಟೋವನ್ನು ಅಭಿಮಾನಿಗಳು ಶೇರ್ ಮಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯ್ ಅನ್ನು ಚಿತ್ರೀಕರಣ ಸೆಟ್ ನಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದೆ.ತೆರಿಗೆ ವಂಚನೆ: ನಟ ವಿಜಯ್ ಸಿನಿಮಾದ ಫೈನಾನ್ಶಿಯರ್ ನಿಂದ 77 ಕೋಟಿ ವಶ
ತೆರಿಗೆ ವಂಚನೆ: ನಟ ವಿಜಯ್ ಸಿನಿಮಾದ ಫೈನಾನ್ಶಿಯರ್ ನಿಂದ 77 ಕೋಟಿ ವಶ
ಮೂರು ದಿನಗಳ ಹಿಂದೆ ಐಟಿ ಅಧಿಕಾರಿಗಳು ನೇರವಾಗಿ ಮಾಸ್ಟರ್ ಸೆಟ್ ಗೆ ಭೇಟಿ ನೀಡಿ ವಿಜಯ್ ವಿಚಾರಣೆ ಮಾಡಿದ್ದರು. ವಿಜಯ್ ಸೆಟ್ ನಿಂದ ನಿರ್ಗಮಿಸಿದ ನಂತರ ಚಿತ್ರತಂಡ ಚಿತ್ರೀಕರಣಕ್ಕೆ ಬ್ರೇಕ್ ಹಾಕಿತ್ತು. ಆದರೆ ಮಾರನೇ ದಿನ ಮತ್ತೆ ವಿಜಯ್ ಸೇತುಪತಿ ಮತ್ತು ಉಳಿದ ಕಲಾವಿದರೊಂದಿಗೆ ಚಿತ್ರೀಕಣ ಮುಂದುವರೆಸಿತ್ತು ಚಿತ್ರತಂಡ. ಈಗ ವಿಜಯ್ ಕೂಡ ಭಾಗಿಯಾಗಿದ್ದಾರೆ.
ನಟ ವಿಜಯ್ ಐಟಿ ವಿಚಾರಣೆಯಲ್ಲಿ ಇದ್ದರೆ ಇತ್ತ ತಮಿಳುನಾಡು ಬಿಜೆಪಿ ಅಭ್ಯರ್ಥಿಗಳು ಚಿತ್ರತಂಡ ವಿರುದ್ಧ ಪ್ರತಿಭಟನೆಗೆ ಇಳಿದ್ದರು. ಕಲ್ಲಿದ್ದಲು ಗಣಿಕಾರಿಕೆ ಅವರಣದಲ್ಲಿ ಚಿತ್ರಕ್ಕೆ ಅನುಮತಿ ನೀಡಿದ ಕಾರಣ ಎನ್.ಎಲ್.ಸಿ ಮತ್ತು ಚಿತ್ರತಂಡದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಈಗಾಗಲೆ ಸಾಕಷ್ಟು ಚಿತ್ರೀಕರಣ ಮಾಡಿ ಮುಗಿಸಿರುವ ಚಿತ್ರತಂಡ ಸಧ್ಯದಲ್ಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಲಿದ್ದಾರೆ.
ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತಮಿಳಿನ ಖ್ಯಾತ ನಟ ವಿಜಯ್ ಮತ್ತು ಬಿಗಿಲ್ ಚಿತ್ರತಂಡದ ಹಣಕಾಸುದಾರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಚೆನ್ನೈ ಹಾಗೂ ಮಧುರೈ ಸೇರಿದಂತೆ ಸುತ್ತಮುತ್ತ ಒಟ್ಟು 38 ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು ಒಟ್ಟು 77 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.