Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಊಟದಲ್ಲಿ ಜಿರಳೆ, ರೆಸ್ಟೋರೆಂಟ್ ವಿರುದ್ಧ ನಟಿ ನಿವೇತಾ ಅಸಮಾಧಾನ
ತಮಿಳು ನಟಿ ನಿವೇತಾ ಪೆತುರಾಜ್ ಸ್ವಿಗ್ಗಿಯಲ್ಲಿ ಊಟ ಬುಕ್ ಮಾಡಿ ತರಿಸಿಕೊಂಡಿದ್ದರು. ಊಟ ತಿನ್ನಲೆಂದು ಪಾರ್ಸಲ್ ತೆರೆದು ನೋಡಿದಾಗ ಆಘಾತವಾಗಿದೆ. ಏಕಂದ್ರೆ ಊಟದಲ್ಲಿ ಸತ್ತ ಜಿರಳೆ ಕಂಡು ಬಂದಿದೆ. ಈ ಫೋಟೋವನ್ನು ಬುಧವಾರ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ನಟಿ ರೆಸ್ಟೋರೆಂಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ಸ್ವಿಗ್ಗಿ ಮತ್ತು ರೆಸ್ಟೋರೆಂಟ್ಗಳು ಯಾವ ಮಾನದಂಡಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ನನಗೆ ತಿಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಎರಡು ಬಾರಿ ಊಟದಲ್ಲಿ ಜಿರಳೆ ಕಂಡು ಬಂದಿದೆ. ಈ ರೆಸ್ಟೋರೆಂಟ್ಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಇದಕ್ಕೆ ತಕ್ಕ ದಂಡ ವಿಧಿಸುವ ಕೆಲಸ ಆಗಬೇಕಿದೆ'' ಎಂದು ನಿವೇತಾ ಆಗ್ರಹಿಸಿದ್ದಾರೆ.
ಮದುವೆ ಸಂಭ್ರಮದಲ್ಲಿ ಸಾಯಿ ಪಲ್ಲವಿ; ಮೆಹಂದಿ ಹಾಕಿ ಸಂತಸಪಟ್ಟ 'ಪ್ರೇಮಂ' ಸುಂದರಿ
'ಮೂನ್ಲೈಟ್ ಟೇಕ್ಅವೇ' ರೆಸ್ಟೋರೆಂಟ್ ವಿರುದ್ಧ ನಾನೊಬ್ಬಳೆ ಅಲ್ಲ, ಬಹಳಷ್ಟು ಜನರು ಅಸಮಾಧಾನ ಹೊಂದಿದ್ದಾರೆ. ಅವರಿಗು ಇಂತಹ ಅನುಭವಗಳ ತುಂಬಾ ಸಲ ಆಗಿದೆ. ಕೂಡಲೇ ಈ ರೆಸ್ಟೋರೆಂಟ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಟಿ ಒತ್ತಾಯಿಸಿದ್ದಾರೆ.
ಇನ್ನು ಸ್ವಿಗ್ಗಿ ಆಪ್ 'ಮೂನ್ಲೈಟ್ ಟೇಕ್ಅವೇ' ರೆಸ್ಟೋರೆಂಟ್ನ ಜೊತೆಗಿನ ಒಪ್ಪಂದವನ್ನು ಕೈ ಬಿಡಬೇಕು ಎಂದು ನಟಿ ಕೋರಿದ್ದಾರೆ.
Recommended Video
ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ವಿಗ್ಗಿ ಸಂಸ್ಥೆ ನಟಿ ನಿವೇತಾ ಬಳಿ ಕ್ಷಮೆ ಕೇಳಿದೆ. ಹಾಗೂ ಈ ಕುರಿತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದೆಯಂತೆ.