Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಸ್ಪಿಬಿ ನಿಧನಕ್ಕೆ ಮರುಗಿದ ಚಿತ್ರರಂಗ, ಖುಷ್ಬೂ, ನಯನತಾರ, ಕಮಲ್ ಹಾಸನ್ ಭಾವುಕ
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಇಂದು ಕೊನೆಯುಸಿರೆಳೆದಿದ್ದಾರೆ. ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಮಧ್ಯಾಹ್ನ 1.04 ಗಂಟೆ ನಿಧನರಾಗಿದ್ದಾರೆ. ಎಸ್ಪಿಬಿ ಅಗಲಿಕೆ ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ.
ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಸೇರಿದಂತೆ ಭಾರತದ ಎಲ್ಲ ಚಿತ್ರರಂಗದಲ್ಲೂ ಎಸ್ಪಿಬಿ ನಿಧನಕ್ಕೆ ಕಂಬನಿ ಮಿಡಿದಿದೆ. ತಮಿಳು ನಟಿ ಖುಷ್ಬೂ, ನಯನತಾರ, ಕಮಲ್ ಹಾಸನ್, ಪ್ರಭು ಗಣೇಶನ್ ಸಹ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿ....
ನಿಮ್ಮ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿ ಜೀವಿಸುತ್ತದೆ
ಎಸ್ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ನಟಿ ನಯನತಾರ ಸಂತಾಪ ಸೂಚಿಸಿದ್ದು, ''ನಿಮ್ಮ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿ ಜೀವಿಸುತ್ತದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ''RIP ಎಸ್ಪಿಬಿ ಸರ್. ನಿಮ್ಮ ಎಲ್ಲಾ ಸಂಗೀತಕ್ಕಾಗಿ ಧನ್ಯವಾದಗಳು. ನಿಮ್ಮ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿ ಜೀವಿಸುತ್ತದೆ'' ಎಂದು ಟ್ವೀಟ್ ಮಾಡಿದ್ದಾರೆ.
ಫಲಿಸಲಿಲ್ಲ ಪ್ರಾರ್ಥನೆ, ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ನಿಧನ
ನಿಮ್ಮ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿ ಜೀವಿಸುತ್ತದೆ
ಎಸ್ಪಿ ಬಾಲಸುಪ್ರಬ್ರಹ್ಮಣ್ಯಂ ನಿಧನಕ್ಕೆ ನಟಿ ನಯನತಾರ ಸಂತಾಪ ಸೂಚಿಸಿದ್ದು, ''ನಿಮ್ಮ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿ ಜೀವಿಸುತ್ತದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ''RIP ಎಸ್ಪಿಬಿ ಸರ್. ನಿಮ್ಮ ಎಲ್ಲಾ ಸಂಗೀತಕ್ಕಾಗಿ ಧನ್ಯವಾದಗಳು. ನಿಮ್ಮ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿ ಜೀವಿಸುತ್ತದೆ'' ಎಂದು ಟ್ವೀಟ್ ಮಾಡಿದ್ದಾರೆ.
ಫಲಿಸಲಿಲ್ಲ ಪ್ರಾರ್ಥನೆ, ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ನಿಧನ
ಹೃದಯ ಚೂರುಚೂರಾಗಿದೆ
ಎಸ್ಪಿಬಿ ಅಗಲಿಕೆ ನಟಿ ಖುಷ್ಬೂ ಸಂತಾಪ ಸೂಚಿಸಿದ್ದಾರೆ. ''ಹೃದಯ ಸಂಪೂರ್ಣವಾಗಿ ಚೂರು ಚೂರಾಗಿದೆ. ನೀವು ನಮ್ಮನ್ನು ಹೀಗೆ ಬಿಟ್ಟು ಹೋಗಬಾರದು ಸರ್, ಹೀಗೇಕೆ ಆಯಿತು?'' ಎಂದು ಖುಷ್ಬೂ ಭಾವುಕರಾಗಿದ್ದಾರೆ.
ಹೃದಯ ಚೂರುಚೂರಾಗಿದೆ
ಎಸ್ಪಿಬಿ ಅಗಲಿಕೆ ನಟಿ ಖುಷ್ಬೂ ಸಂತಾಪ ಸೂಚಿಸಿದ್ದಾರೆ. ''ಹೃದಯ ಸಂಪೂರ್ಣವಾಗಿ ಚೂರು ಚೂರಾಗಿದೆ. ನೀವು ನಮ್ಮನ್ನು ಹೀಗೆ ಬಿಟ್ಟು ಹೋಗಬಾರದು ಸರ್, ಹೀಗೇಕೆ ಆಯಿತು?'' ಎಂದು ಖುಷ್ಬೂ ಭಾವುಕರಾಗಿದ್ದಾರೆ.
ಏಳು ತಲೆಮಾರಿನಲ್ಲಿ ಉಳಿಯುತ್ತಾರೆ
ಬಾಲು ನಿಧನಕ್ಕೆ ಕಮಲ್ ಹಾಸನ್ ಸಂತಾಪ ವ್ಯಕ್ತಪಡಿಸಿದ್ದಾರೆ. ''ಎಸ್.ಪಿ.ಬಿ ಅವರ ಧ್ವನಿಯ ನೆರಳಲ್ಲಿ ದೀರ್ಘಕಾಲ ಬದುಕಿದ್ದು ನನಗೆ ಆಶೀರ್ವಾದ. ಏಳು ತಲೆಮಾರುಗಳವರೆಗೆ ಅವರು ಶಾಶ್ವತವಾಗಿ ಉಳಿಯಲಿದ್ದಾರೆ'' ಎಂದು ಟ್ವೀಟ್ ಮಾಡಿದ್ದಾರೆ.
ಸಂಗೀತ ಸರಸ್ವತಿಯ ಸ್ವಂತ ಪುತ್ರ ಎಸ್.ಪಿ.ಬಾಲಸುಬ್ರಹ್ಮಣ್ಯಂ ಬೆಳೆದು ಬಂದ ಹಾದಿ
ಏಳು ತಲೆಮಾರಿನಲ್ಲಿ ಉಳಿಯುತ್ತಾರೆ
ಬಾಲು ನಿಧನಕ್ಕೆ ಕಮಲ್ ಹಾಸನ್ ಸಂತಾಪ ವ್ಯಕ್ತಪಡಿಸಿದ್ದಾರೆ. ''ಎಸ್.ಪಿ.ಬಿ ಅವರ ಧ್ವನಿಯ ನೆರಳಲ್ಲಿ ದೀರ್ಘಕಾಲ ಬದುಕಿದ್ದು ನನಗೆ ಆಶೀರ್ವಾದ. ಏಳು ತಲೆಮಾರುಗಳವರೆಗೆ ಅವರು ಶಾಶ್ವತವಾಗಿ ಉಳಿಯಲಿದ್ದಾರೆ'' ಎಂದು ಟ್ವೀಟ್ ಮಾಡಿದ್ದಾರೆ.
ಸಂಗೀತ ಸರಸ್ವತಿಯ ಸ್ವಂತ ಪುತ್ರ ಎಸ್.ಪಿ.ಬಾಲಸುಬ್ರಹ್ಮಣ್ಯಂ ಬೆಳೆದು ಬಂದ ಹಾದಿ
ನಿಮ್ಮ ಹಾಡುಗಳಿಂದ ನಾನು
''ನಿಮ್ಮ ಅಸಂಖ್ಯಾತ ಹಿಟ್ ಹಾಡುಗಳ ಕಾರಣದಿಂದಾಗಿ ಇಂದು ನಾನು. ನಿಮ್ಮೊಂದಿಗೆ ಮಾತನಾಡುವುದನ್ನು ತಪ್ಪಿಸಿಕೊಳ್ಳುತ್ತೇನೆ ಅಣ್ಣಾ. ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ'' ಎಂದು ತಮಿಳು ನಟ ಪ್ರಭು ಗಣೇಶನ್ ಸಂತಾಪ ಸೂಚಿಸಿದ್ದಾರೆ.
ಎಸ್ಪಿಬಿ ಸಾವಿನ ಸುದ್ದಿ ಚರಣ್ಗೂ ಮೊದಲೇ ತಿಳಿಸಿದ್ದು ವೆಂಕಟ್ ಪ್ರಭು
ನಿಮ್ಮ ಹಾಡುಗಳಿಂದ ನಾನು
''ನಿಮ್ಮ ಅಸಂಖ್ಯಾತ ಹಿಟ್ ಹಾಡುಗಳ ಕಾರಣದಿಂದಾಗಿ ಇಂದು ನಾನು. ನಿಮ್ಮೊಂದಿಗೆ ಮಾತನಾಡುವುದನ್ನು ತಪ್ಪಿಸಿಕೊಳ್ಳುತ್ತೇನೆ ಅಣ್ಣಾ. ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ'' ಎಂದು ತಮಿಳು ನಟ ಪ್ರಭು ಗಣೇಶನ್ ಸಂತಾಪ ಸೂಚಿಸಿದ್ದಾರೆ.
ಎಸ್ಪಿಬಿ ಸಾವಿನ ಸುದ್ದಿ ಚರಣ್ಗೂ ಮೊದಲೇ ತಿಳಿಸಿದ್ದು ವೆಂಕಟ್ ಪ್ರಭು
ನಮ್ಮ ಹೃದಯದಲ್ಲಿ ಶಾಶ್ವತ
''ನಿಮ್ಮ ಉತ್ಸಾಹಭರಿತ ಧ್ವನಿಯ ಮೂಲಕ ನೀವು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಿಸುವಿರಿ ಎಸ್ಪಿಬಿ ಸರ್'' ಎಂದು ತಮಿಳು ನಟ ಜಯಂ ರವಿ ಸಂತಾಪ ಸೂಚಿಸಿದ್ದಾರೆ.
ಎಂತಹ ದಿಗ್ಗಜ
''ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ ಸರ್. ಎಂತಹ ದಿಗ್ಗಜ. ನಮ್ಮ ಹೃದಯದಲ್ಲಿ ಸದಾ ನೆಲೆಸಿರುತ್ತೀರಾ'' ಎಂದು ತಮಿಳು ನಟ ಪ್ರಸನ್ನ ಸಂತಾಪ ಸೂಚಿಸಿದ್ದಾರೆ.