Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಮಲ್ ಹಾಸನ್ ಆಪ್ತ ನಿರ್ದೇಶಕ ಜಿಎನ್ ರಂಗರಾಜನ್ ನಿಧನ
ತಮಿಳು ಇಂಡಸ್ಟ್ರಿಯ ದಿಗ್ಗಜ ನಿರ್ದೇಶಕ ಜಿಎನ್ ರಂಗರಾಜನ್ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಂಗರಾಜನ್ ಜೂನ್ 3 ರಂದು ಬೆಳಗ್ಗೆ 8.45 ನಿಮಿಷಕ್ಕೆ ಕೊನೆಯುಸಿರೆಳೆದರು.
ರಂಗರಾಜನ್ ಮಗ ಜಿಎನ್ಆರ್ ಕುಮಾರವೇಲನ್ ತಂದೆ ಸಾವಿಗೆ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಚೆನ್ನೈನಲ್ಲಿ ರಂಗರಾಜನ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.
ತಮಿಳು ನಟ, ನಿರ್ಮಾಪಕ ವೆಂಕಟ್ ಶುಭ ಕೊರೊನಾದಿಂದ ಸಾವು
ರಂಗರಾಜನ್ ನಟ ಕಮಲ ಹಾಸನ್ ಅವರಿಗೆ ಬಹಳ ಆಪ್ತರಾಗಿದ್ದರು. ಮೀಂಡುಮ್ ಕೋಕಿಲಾ (1981), ಮತ್ತು ಮಹಾರಸನ್ (1993) ಅಂತಹ ಹಿಟ್ ಚಿತ್ರಗಳು ಸೇರಿದಂತೆ ಹೆಚ್ಚು ಸಿನಿಮಾಗಳನ್ನು ಕಮಲ್ ಜೊತೆ ಮಾಡಿದ್ದಾರೆ.
ಕಲ್ಯಾಣ ರಾಮನ್, ಎಲ್ಲಮ್ ಇನ್ ಬಮಾಯಂ, ಕಡಲ್ ಮೀನ್ಗಲ್, ಮುತ್ತು ಎಂಗಲ್ ಸೋತ್ತು, ಪಲ್ಲವಿ ಮೀಂಡುಮ್ ಪಲ್ಲವಿ, ಆದುಥಾಥು ಆಲ್ಬರ್ಟ್ ಸೇರಿದಂತೆ ಇನ್ನು ಹಲವು ಚಿತ್ರಗಳಿಗೆ ರಂಗರಾಜನ್ ನಿರ್ದೇಶನ ಹೇಳಿದ್ದಾರೆ.
ರಂಗರಾಜನ್ ಮಗ ಕುಮಾರವೇಲನ್ ಸಹ ತಮಿಳು ಇಂಡಸ್ಟ್ರಿಯಲ್ಲಿ ನಿರ್ದೇಶಕರಾಗಿದ್ದಾರೆ. ಖ್ಯಾತ ನಿರ್ದೇಶಕ ಬಾಲು ಮಹೇಂದರ್ ಬಳಿ 'ಸತಿ ಲೀಲಾವತಿ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು.
Recommended Video
ನೈನೈಥಲೆ ಇನಿಕ್ಕುಮ್, ಯುವನ್ ಯುವತಿ, ಹರಿದಾಸ್, ಮತ್ತು ವಾಗಾ ಚಿತ್ರಗಳನ್ನು ಕುಮಾರವೇಲನ್ ನಿರ್ದೇಶಿಸಿದ್ದಾರೆ. ನಟ ಅರುಣ್ ವಿಜಯ್ ಜೊತೆ ಮುಂದಿನ ಸಿನಿಮಾ ಘೋಷಿಸಿದ್ದಾರೆ.