Don't Miss!
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Automobiles ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- News ಈ ಎರಡು ಕ್ಷೇತ್ರಗಳಲ್ಲಿ ಕಾಡುಗೊಲ್ಲರ ಮತ ಪಡೆಯಲು ಕೈ, ಕಮಲ ಪ್ಲಾನ್ ಏನು?-ಇಲ್ಲಿದೆ ಮಾಹಿತಿ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಯನತಾರಾ ನಿರ್ಮಾಣದ ತಮಿಳು ಸಿನಿಮಾಕ್ಕೆ ಅಂತರಾಷ್ಟ್ರೀಯ ಗೌರವ
ತಮಿಳು ಸಿನಿಮಾ 'ಕೂಳಾಂಗಳ್' ಅಥವಾ 'ಪೆಬೆಲ್' ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪ್ರಾಪ್ತಿಯಾಗಿದೆ.
ವಿನೋದ್ರಾಜ್ ಪಿಎಸ್ ನಿರ್ದೇಶನದ ಮೊದಲ ಸಿನಿಮಾ 'ಕೂಳಾಂಗಾಳ್' ಗೆ ಅಂತರರಾಷ್ಟ್ರೀಯ ಸಿನಿಮೋತ್ಸವ ರೋಟೆರ್ಡ್ಯಾಮ್ನಲ್ಲಿ 'ಹಿವೋಸ್ ಟೈಗರ್' ಪ್ರಶಸ್ತಿ ದೊರಕಿದೆ.
ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗುತ್ತಿರುವ ಭಾರತದ ಎರಡನೇ ಸಿನಿಮಾ 'ಕೋಳಾಂಗಳ್'. ಇದಕ್ಕೂ ಮುನ್ನಾ ಮಲಯಾಳಂ ನಿರ್ದೇಶಕ ಕುಮಾರ್ ಶಶಿಧರನ್ ನಿರ್ದೇಶಿಸಿದ್ದ 'ದುರ್ಗಾ' ಈ ಪ್ರಶಸ್ತಿಗೆ ಭಾಜನವಾಗಿತ್ತು.
'ಕಠೋರವಾದ ವಿಷಯವನ್ನಿಟ್ಟುಕೊಂಡು, ಮಾನವೀಯತೆ, ಹಾಸ್ಯದ ಮಿಳಿತದೊಂದಿಗೆ ಮಾಡಲಾಗಿರುವ ಅದ್ಭುತ ಚಲನಚಿತ್ರ ಇದು. ಈ ಸಿನಿಮಾ 'ಸಿನಿಮಾ ವ್ಯಾಕರಣಕ್ಕೆ' ಒಳ್ಳೆಯ ಉದಾಹರಣೆ' ಎಂದು ಸಿನಿಮಾವನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಜ್ಯೂರಿಗಳು ಹೇಳಿದ್ದಾರೆ.
ಸಿನಿಮಾದ ಕತೆಯು ತಮಿಳುನಾಡಿನ ಬರಪೀಡಿತ 'ಅರಿಟ್ಟಪಟ್ಟಿ' ಎಂಬಲ್ಲಿ ನಡೆಯುತ್ತದೆ. ಕುಡುಕ ತಂದೆ, ಹಿಂಸೆಗೆ ಗುರಿಯಾದ ತಾಯಿ ಹಾಗೂ ಮಗನ ನಡುವೆ ಕತೆಯೇ 'ಕೋಳಾಂಗಳ್'.
ಈ ಸಿನಿಮಾವನ್ನು ಖ್ಯಾತ ನಟಿ ನಯನತಾರಾ ನಿರ್ಮಿಸಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ನಯನತಾರಾ ಬಾಯ್ಫ್ರೆಂಡ್ ವಿಗ್ನೇಶ್ ಶಿವನ್ ಸಹ ಸಾಥ್ ನೀಡಿದ್ದಾರೆ.
Recommended Video
ಸಿನಿಮಾವು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿರುವ ಬಗ್ಗೆ ತಮಿಳಿನ ಹಲವು ನಿರ್ದೇಶಕ, ನಟರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ವಿನೋದ್ ರಾಜ್ಗೆ ಶುಭಾಶಯ ತಿಳಿಸಿದ್ದಾರೆ.