twitter
    For Quick Alerts
    ALLOW NOTIFICATIONS  
    For Daily Alerts

    'ಎಸ್‌ಪಿಬಿ ಬೇಗ ಹಾಡುವಂತಾಗಲಿ....' ಮಂಗಳಮುಖಿಯರು ಪ್ರಾರ್ಥನೆ

    |

    ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರು ಆದಷ್ಟೂ ಬೇಗ ಮತ್ತೆ ಹಾಡುವಂತಾಗಲಿ ಎಂದು ಮಂಗಳಮುಖಿಯರು ಇಂದು ಆಸ್ಪತ್ರೆ ಎದುರು ಪ್ರಾರ್ಥನೆ ಮಾಡಿರುವ ಘಟನೆ ವರದಿಯಾಗಿದೆ.

    Recommended Video

    ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

    ಎಸ್‌ಪಿಬಿ ದಾಖಲಾಗಿರುವ ಎಂಜಿಎಂ ಆಸ್ಪತ್ರೆ ಬಳಿ ಬಂದ ಮಂಗಳಮುಖಿಯರು, ಬಾಲಸುಪ್ರಬ್ರಹ್ಮಣ್ಯಂ ಅವರು ಬೇಗ ಚೇತರಿಸಿಕೊಳ್ಳಲಿ, ಗುಣಮುಖರಾಗಿ ಬೇಗ ಡಿಸ್ಚಾರ್ಜ್ ಆಗಲಿ, ಮೊದಲಿನಂತೆ ಹಾಡುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

    'ಅಣ್ಣಯ್ಯ ಬೇಗ ಬನ್ನಿ...' ಎಸ್‌ಪಿಬಿ ಕುರಿತು ಚಿರಂಜೀವಿ ಭಾವುಕ'ಅಣ್ಣಯ್ಯ ಬೇಗ ಬನ್ನಿ...' ಎಸ್‌ಪಿಬಿ ಕುರಿತು ಚಿರಂಜೀವಿ ಭಾವುಕ

    ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ವಿಯನ್ ಧರ್ಮದ ಮಂಗಳಮುಖಿಯರು ಎಲ್ಲರೂ ಒಟ್ಟಾಗಿ ಯೇಸು ಕ್ರಿಸ್ತ, ಅಲ್ಲಾ ಹಾಗೂ ರಾಮ ಹೆಸರಿನಲ್ಲಿ ಪ್ರಾರ್ಥನೆ ಮಾಡಿದ್ದು ವಿಶೇಷವಾಗಿತ್ತು.

    Transgenders pray for SP Balasubrahmanyam’s speedy recovery

    ಕೊರೊನಾ ವೈರಸ್‌ಗೆ ತುತ್ತಾಗಿರುವ ಗಾಯಕ ಎಸ್‌ಪಿಬಿ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಅವರನ್ನು ಐಸಿಯುಗೆ ಶಿಫ್ಟ್ ಮಾಡಿ ಗಮನ ಚಿಕಿತ್ಸೆ ಮುಂದುವರಿಸಲಾಗಿತ್ತು. ಸ್ವತಃ ವೈದ್ಯರು ಸಹ ಎಸ್‌ಪಿಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಎಂದು ಮಾಹಿತಿ ನೀಡಿದ್ದರು.

    ಇದೀಗ, ಎಸ್‌ಪಿಬಿ ಆರೋಗ್ಯದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಕಳೆದ ಮೂರು ದಿನಕ್ಕೆ ಹೋಲಿಸಿಕೊಂಡರೆ ಸದ್ಯದ ಸ್ಥಿತಿ ಉತ್ತಮ ಎನ್ನಬಹುದು. ವೈದ್ಯರು ಸಹ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

    English summary
    Transgenders pray for SP Balasubrahmanyam’s speedy recovery near MGM hospital in Chennai.
    Thursday, August 20, 2020, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X