Don't Miss!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- News ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್; ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಭವಿಷ್ಯ ನುಡಿದ ಸಿದ್ದರಾಮ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಾಸ್ಯ ನಟ ವಿವೇಕ್ ನಿಧನಕ್ಕೆ ಸಂತಾಪ ಸೂಚಿಸಿದ ಕಲಾಬಂಧುಗಳು
ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶುಕ್ರವಾರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಹಿನ್ನೆಲೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
Recommended Video
59 ವರ್ಷದ ವಿವೇಕ್ ಸುಮಾರು ಮೂರುವರೆ ದಶಕಗಳ ಕಾಲ ತಮ್ಮ ವಿಶಿಷ್ಟ, ವಿಭಿನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ತಮಿಳಿನ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಯೂ ತೆರೆಹಂಚಿಕೊಂಡಿದ್ದರು.
ವಿವೇಕ್ ಅವರ ಅನಿರೀಕ್ಷಿತ ನಿಧನಕ್ಕೆ ಚಿತ್ರರಂಗ ಮರುಗಿದೆ. ಸಹ ಕಲಾವಿದನ ಸಾವು ಅತೀವ ನೋವು ಉಂಟು ಮಾಡಿದ್ದು, ಹಲವು ಕಲಾವಿದರು ವಿವೇಕ್ ಅವರ ಜೊತೆಗಿನ ನೆನಪು ಮೆಲುಕು ಹಾಕಿದ್ದಾರೆ.
''ಇಷ್ಟು ಬೇಗ ಹೋದ ಗೆಳೆಯ...ನಿನ್ನ ಆಲೋಚನೆಗಳನ್ನು ಮರಗಳಾಗಿ ನೆಟ್ಟಿದ್ದಕ್ಕೆ ಹಾಗು ನಿಮ್ಮ ಬುದ್ದಿ ಮತ್ತು ಹಾಸ್ಯದಿಂದ ನಮ್ಮನ್ನು ರಂಜಿಸಿದ್ದಕ್ಕೆ ಧನ್ಯವಾದಗಳು. ನಿನ್ನ ಆತ್ಮಕ್ಕೆ ಶಾಂತಿ ದೊರೆಯಲಿ'' ಎಂದು ಬಹುಭಾಷೆ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
''ಜೀವನದುದ್ದಕ್ಕು ನಮ್ಮನ್ನು ನಗಿಸಿದ್ದೀರಿ. ಈಗ ನೀವು ಮತ್ತು ಕಣ್ಣೀರು ಕೊಟ್ಟು ಹೋಗಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಸಂತಾಪದ ಮಾತುಗಳನ್ನಾಡಿ ನಟಿ ಖುಷ್ಬೂ ತಮ್ಮ ಟ್ವಿಟ್ಟರ್ ಫ್ರೊಫೈಲ್ ಫೋಟೋ ಬದಲಾಯಿಸಿದ್ದಾರೆ.
ವಿಡಿಯೋ ಮೂಲಕ ಹಿರಿಯ ನಟ ಸತ್ಯರಾಜ್ ''ನನ್ನ ಪ್ರೀತಿಯ ಸಹೋದರ ವಿವೇಕ್ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಸ್ವೀಕರಿಸುವುದು ಬಹಳ ಕಷ್ಟವಾಗಿದೆ. ಅವರ ಕುಟುಂಬ, ಅಭಿಮಾನಿಗಳು, ಸ್ನೇಹಿತರನ್ನು ಬಿಟ್ಟು ಹೋದರು. ಏನು ಮಾತಾನಾಡುವುದು ನನಗೆ ತಿಳಿದಿಲ್ಲ'' ಎಂದು ಭಾವುಕರಾದರು.
ತಮಿಳು ನಟ ಸೂರ್ಯ, ಕಾರ್ತಿ ಹಾಗೂ ಜ್ಯೋತಿಕಾ ಅವರು ವಿವೇಕ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಮಲಯಾಳಂ ನಟ ನಿವಿನ್ ಪೌಲಿ, ನಿರ್ದೇಶಕ ಮೋಹನ್ ರಾಜ, ಸಂಗೀತ ನಿರ್ದೇಶಕ ಎಸ್ ತಮನ್, ನಟ ವಿಕ್ರಮ್ ಪ್ರಭು, ಗೌತಮ್ ಕಾರ್ತಿಕ್, ನಟಿ ಆತ್ಮಿಕಾ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.