Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೀಯಾ ಕಾರಿನ ಗಾಜು ಪುಡಿಪುಡಿ ಮಾಡಿದ ಹುಡುಗರು
ತಮಿಳು ನಟಿ ಶ್ರೀಯಾ ಕಾರಿನ ಗಾಜು ಪುಡಿಪುಡಿಯಾಗಿದೆ. ಕಾರನ್ನು ಶ್ರೀಯಾ ಮರಕ್ಕೆ ಗುದ್ದಿಲ್ಲ. ಅಥವಾ ಕರೇನೂ ಅವರ ಮಾತು ಕೇಳದೇ ಬಿದ್ದಿಲ್ಲ. ತೆಲಂಗಾಣ ಚಳುವಳಿಗೆ ಸಂಬಂಧಪಟ್ಟ ಯುವಕರು ಶ್ರೀಯಾ ಕಾರನ್ನು ಈ ಸ್ಥಿತಿಗೆ ತಂದಿದ್ದಾರೆ. ರಾಜೇಂದ್ರ ನಗರದಲ್ಲಿ ಶ್ರೀಯಾ ಶೂಟಿಂಗ್ ನಲ್ಲಿದ್ದಾಗ ಈ ಘಟನೆ ನಡೆದಿದೆ.
ಅಲ್ಲರಿ ನರೇಶ್ ಹಾಗೂ ಶ್ರೀಯಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಆಗ ಬಂದ ಯುವಕರ ಗುಂಪು ತೆಲಂಗಾಣಕ್ಕೆ ಜೈ ಅನ್ನಿ ಅಂದಿದ್ದಾರಂತೆ. ನಿರ್ದೇಶಕರು ಹೇಳಿಕೊಟ್ಟ ಡೈಲಾಗ್ ಮಾತ್ರ ಹೇಳಿ ಅಭ್ಯಾಸವಿದ್ದ ಚಿತ್ರತಂಡ ಯಾವುದೇ ಉತ್ತರ ನೀಡಲಿಲ್ಲ. ಆಗ ಅಲ್ಲಿದ್ದ ಶ್ರೀಯಾ ಕಾರಿನ ಗಾಜನ್ನು ಒಡೆದು ಹಾಕಿದ್ದಾರೆ.
ಆಗ ಮೌನಕ್ಕೆ ಮೊರೆಹೋಗಿದ್ದ ಶ್ರೀಯಾ ಆಮೇಲೆ ಮಾತನಾಡಿ "ನಾನೊಬ್ಬ ಭಾರತೀಯಳು. ನಂಗೆ ಈ ದೇಶದಲ್ಲಿ ಎಲ್ಲಿಗೆ ಬೇಕಾದರೂ ಹೋಗಿ ತಿರುಗಾಡುವ ಸ್ವಾತಂತ್ರ್ಯ ಇದೆ. ತೆಲಂಗಾಣವೋ ಆಂಧ್ರವೋ ನನಗದು ಬೇಕಾಗಿಲ್ಲ." ಎಂದಿದ್ದಾರೆ. ಶ್ರೀಯಾಳಷ್ಟು ಬುದ್ಧಿ ಇದ್ದಿದ್ದರೆ ಅವರು ಪುಂಡುಪೋಲರಿಗಳಾಗಿರುತ್ತಿರಲಿಲ್ಲ, ಇನ್ನೇನೋ ಆಗಿರುತ್ತಿದ್ದರು ಎಂಬುದನ್ನು ಶ್ರೀಯಾಗೆ ಹೇಳುವವರು ಯಾರು? (ಒನ್ ಇಂಡಿಯಾ ಕನ್ನಡ)