ಪುನೀತ್, ಉಪೇಂದ್ರರಿಗೆ ದಮ್ಮು, ರಚ್ಚಗಳಿಂದ ಪೈಪೋಟಿ
ಕನ್ನಡ ಚಿತ್ರಗಳು ಮಾತ್ರ ಆ ದಿನ ಬಿಡುಗಡೆಯಾಗುತ್ತಿಲ್ಲ. ಕಾಲಿವುಡ್ ಬಹುನಿರೀಕ್ಷಿತ ಚಿತ್ರಗಳಾದ ಜೂನಿಯರ್ ಎನ್ ಟಿಆರ್ ಚಿತ್ರ 'ದಮ್ಮು' ಹಾಗೂ ಮಗಧೀರ ಸ್ಟಾರ್ ರಾಮ್ ಚರಣ್ ತೇಜಾರ ಚಿತ್ರ 'ರಚ್ಚ' ಕೂಡ ಅದೇ ದಿನ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ರಾಮ್ ಚರಣ್ ತೇಜಾ ಹಾಗೂ ಜೂ. ಎನ್ ಟಿಆರ್ ಈ ಇಬ್ಬರಿಗೂ ಗುರುಗಳಾದ ರಾಜಮೌಳಿಯ ಬಹುನಿರೀಕ್ಷಿತ ಚಿತ್ರ 'ಈಗ' ಚಿತ್ರವೂ ಅದೇ ದಿನ ಸ್ಪರ್ಧೆ ನೀಡುವ ಸಂಭವವಿದೆ.
ಕನ್ನಡ ಚಿತ್ರಗಳಿಗೆ ಕನ್ನಡಚಿತ್ರಗಳಿಗಿಂತಲೂ ಈ ತೆಲುಗು ಚಿತ್ರಗಳು ಪೈಪೋಟಿ ನೀಡಲಾರವು. ಆದರೂ ಸ್ವಲ್ಪಮಟ್ಟಿಗೆ ಹೊಡೆತ ತಪ್ಪಿದ್ದಲ್ಲ. ತೆಲುಗು ಚಿತ್ರಗಳು ಅದೇ ದಿನ ಕರ್ನಾಟಕದಲ್ಲೂ ಬಿಡುಗಡೆಯಾಗುತ್ತಿವೆ. ಆದರೆ ಅಣ್ಣಾಬಾಂಡ್ ಆಂಧ್ರದಲ್ಲಿ ಬಿಡುಗಡೆ ಆಗುತ್ತಿಲ್ಲ. ಏನೇ ಆಗಲಿ ತೆಲುಗು ಚಿತ್ರಗಳು ಕನ್ನಡಚಿತ್ರಗಳನ್ನು ನುಂಗಿಹಾಕುವ ಕಾಲವಂತೂ ಸದ್ಯಕ್ಕೆ ನಿರ್ಮಾಣವಾಗಿಲ್ಲ.
ಪರೀಕ್ಷೆಗಳು ಮುಗಿದು ವಿದ್ಯಾರ್ಥಿಗಳು ಚಿತ್ರಮಂದಿರದತ್ತ ಬರುವ ಕಾಲ ಏಪ್ರಿಲ್ ಆಗಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳುಗಳು ಸ್ಟಾರ್ ಚಿತ್ರಗಳಿಗೆ ಫೇವರೆಟ್. ಹಾಗಾಗಿಯೇ ಚಿಕ್ಕಪುಟ್ಟ ನಟರ ಚಿತ್ರಗಳು ಅದಕ್ಕೂ ಮೊದಲು ಅಥವಾ ನಂತರ ಬಿಡುಗಡೆ ಕಂಡು ಬಚಾವಾಗಲು ಯತ್ನಿಸುತ್ತವೆ. ಏಪ್ರಿಲ್ ನಲ್ಲಿ ಏನೇನಾಗುತ್ತದೆ ಎಂಬುದನ್ನು ಕಾದು ನೋಡೋಣ (ಒನ್ ಇಂಡಿಯಾ ಕನ್ನಡ)


Click it and Unblock the Notifications











